ವಾಗ್ದೇವಿ – ೧೯

ವಾಗ್ದೇವಿ – ೧೯

ನೃಸಿಂಹಪುರ ಮಠದ ಪಾರುಪತ್ಯಗಾರ ರಾಧಾಕೃಷ್ಣಾಚಾರ್ಯನ ಬುದ್ಧಿವಂತಿಗೆಯು ಸಾಮಾನ್ಯವಲ್ಲ. ದೊಡ್ಡ ಕಾರ್ಯಗಳಲ್ಲಿ ಜಯಸಿಕ್ಳುವಂತೆ ವೈನಂಗಳನ್ನು ಮಾಡುವ ಸಾಮರ್ಥ್ಯ್ಯವುಳ್ಳವನು. ಮತ್ತು ಸಿಟ್ಟಿನ ವಶವಾಗದೆ ಎಂಥಾ ಮೂರ್ಖನಿಗಾದರೂ ಅನುನಯಯುಕ್ತವಾದ ವಾಕ್‌ಚಾತುರ್ಯ ದಿಂದ ತನ್ನ ಪಕ್ಷಕ್ಕೆ ಆಕರ್ಷಿಸಿಕೊಂಡು, ಅವನಿಂದ ಸಿಕ್ಕುವಷ್ಟು ಪ್ರಯೋಜನ ವನ್ನು ದೊರಕಿಸಿಕೊಳ್ಳುವ ಮತಿವಂತಪುರುಷನೇ ಸರಿ.

ಕ್ಷತ್ರಿಯಪುರ ಮಠದ ಪಾರುಪತ್ಯಗಾರ ಸೂರ್ಯನಾರಾಯಣಾ ಚಾರ್ಯನು ಬಹುಸಾಧು. ಒಳ್ಳೇ ಭೋಜನದ ಅಭಿರುಚಿಯಿರುವವನೂ ನಿಷ್ಠಾವಂತನೂ ಖರೆ. ಆದರೆ ಎತ್ತಿದವರ ಕೂಸೆಂಬ ಗಾದೆಯಂತೆ ಯಾರೇನು ಹೇಳಿದರೂ ಹೌದೆನ್ನುವವನೇ.

ವರ್ತಕಪುರ ಮಠದ ಪಾರುಪತ್ಯಗಾರ ವೆಂಕಟಿರಾಮಾಚಾರ್ಯನು ಜ್ಞಾನಿಯೂ ವೈರಾಗ್ಯಪರನೂ ನೀತಿಶೀಲನೂ ಪರಾಪೇಕ್ಷೆಯಿಲ್ಲದವನೂ ಹೌದು. ಪರಂತು ಮಿತಿಮೀರಿದ ಆಲಸ್ಯವುಳ್ಳವನು. ಸ್ವಕಾರ್ಯದಲ್ಲಿಯೂ ಹಟಸಾಧನೆ ಮಾಡತಕ್ಕವನಲ್ಲ. ದೊಡ್ಡ ಐಶ್ವರ್ಯವಂತನಾದುದರಿಂದ ಯಾರ ಬಿಸಾತು ಮಾಡುವ ಅಗತ್ಯವು ಅವನಿಗೆ ಬೀಳುತ್ತಿದ್ದಿಲ್ಲ.

ಇನ್ನು ವರ್ಣಿಸಲಿಕ್ಕೆ ಉಳಿದ ಬಾಲಮುಕುಂದಾಚಾರ್ಯನು ಶಾಂತಿ ಪುರ ಮಠದ ಪಾರುಪತ್ಯಗಾರ. ಆ ಮರದ ಹೆಸರಿಗೆ ಹೋಲುವ ಶಾಂತಗುಣ ವುಳ್ಳ ಬಹುಸುಂದರ ಪುರುಷನು. ಮಾತಿನಲ್ಲಿ ದೊಡ್ಡ ಚಮತ್ಕಾರ ಉಳ್ಳವನು. ಕೋಪವು ಅವನಿಗೆ ಸರ್ವಥಾ ಸೋಕದು; ಖರ್ಚುಗಾರ, ಹಣದಲ್ಲಿ ಕಡಿಮೆ ಯವನಲ್ಲ. ಇವನ ಮುಖವನ್ನೀಕ್ಷಿಸಿದ ಮಾತ್ರದಲ್ಲಿ ಎಂಧಾ ಕಠಿಣ ಹೃದ ಯವೂ ದ್ರವಿಸುವದು; ಎಂಥಾ ಸಿಟ್ಟಿನವನೂ ಒಮ್ಮೆಗೆ ಶಾಂತನಾಗುವನು.

ವೇದವ್ಯಾಸನ ಪ್ರಕರಣವನ್ನು ಪ್ರಥಮ ವಿಮರ್ಶೆಮಾಡುವದಕ್ಕೋ ಸ್ಕರ ಮಠಾಧಿಪತಿಗಳಿಂದ ನೇಮಿಸೋಣಾದ ಆ ನಾಲ್ವರಲ್ಲಿ ಸಭಾನಾಯಕ ನಾಗುವದಕ್ಕೆ ಬಾಲಮುಕುಂದನೊಬ್ಬನೇ ಯೋಗ್ಯನೆಂದು ಅವರು ತಮ್ಮೊ ಳಗೆ ನಿಶ್ಚಯಿಸಿ ಅವನನ್ನು ಅಧ್ಯಕ್ಷನಾಗಿ ನೇಮಿಸಿದರು. ಬಾಲಮುಕುಂದನು ತನಗಷ್ಟು ದೊಡ್ಡ ಕರ್ತವ್ಯ ನಡಿಸುವಷ್ಟು.- ಯೋಗ್ಯತೆ ಇಲ್ಲವೆಂದು ಹೆಸರು ಪೂರ್ತಿ ಆಕ್ಷೇಸ ಮಾಡಿದರೂ ಕ್ರಮೇಣ ತನ್ನ ಸಹಕಾರಿಗಳ ಅಪೇಕ್ಷೆಯಂತೆ ಅಧ್ಯಕ್ಷನಾಗಲಿಕ್ಕೆ ಒಡಂಬಟ್ಟನು.

ಸಭಾಸದರು ಒಟ್ಟಿನಲ್ಲಿಯೇ ಊಟಪಾಟ ಮಾಡಿಕೊಂಡು, ಕುಮುದಪುರದ ಅಂಜನೇಯಾಲಯದ ಹೊರಪೌಳಿಯಲ್ಲಿ ಉಳಕೊಂಡರು. ವೇದವ್ಯಾಸ ಉಪಾಧ್ಯನ ಪಕ್ಷಕ್ಕೆ ಸೇರಿದ ಭೀಮಾಚಾರ್ಯಗೂ ಬಾಲಮುಕುಂದಾಚಾ ರ್ಯಗೂ ಪರಸ್ಪರ ಸ್ನೇಹ ಮೊದಲೇ ಬಿದ್ದ ದೆಸೆಯಿಂದ ಅವರಿಬ್ಬರೂ ಒಂದೇ ಬಿಡಾರದಲ್ಲಿ ಉಳುಕೊಳ್ಳುವದಕ್ಕೆ ಆಸ್ಪದವಾಯಿತು. ಈ ಸಂಬಂಧ ವೇದ ವ್ಯಾಸಗೆ ಅಸಂತೋಷವಾಗಲಿಲ್ಲ. ಭೀಮಾಚಾರ್ಯನನ್ನು ತನ್ನ ಮನೆಯಲ್ಲಿ ರಿಸಿಕೊಂಡು, ಒಳ್ಳೇ ಊಟ ಹಾಕಬೇಕಾಗುವ ಅನಿವಾರ್ಯ ನಿವಾರಣೆ ಯಾದ ಹಾಗಾಯಿತಲ್ಲವೇ? ಬಾಯಿಯಿಂದ ಮಾತ್ರ ಬಡವನ ಮನೆಗೆ ತಮ್ಮ ಚರಣಗಳ ಮುದ್ರೆ ತಗಲುವದುಂಟೇ ಎಂಬ ಅಸಮಾಧಾನ ಸೂಚಕವಾಕ್ಕ ಗಳನ್ನು ಉಚ್ಚರಿಸಿದನು. ಭೀಮಾಚಾರ್ಯನಿಗೆ ಅಂಜನೇಯಾಲಯದಲ್ಲಿ ಮಠದವರ ಕಡೆಯಿಂದ ಸಿಕ್ಕುವ ಛಲೋ ಭೋಜನದ ಸುಖದಿಂದ ವೇದ ವ್ಯಾಸನ ಪ್ರಸಂಗವೇ ಮರೆತು ಹೋಯಿತು. ವಿನೋದರೂಪವಾಗಿ ಬಾಲ ಮುಕುಂದನು-“ಆಚಾರ್ಯರೇ, ತಮ್ಮಶಿಷ್ಯ ವೇದವ್ಯಾಸನೆಲ್ಲಿ?” ಎಂದು ಕೇಳ ದರೆ ದಂತಶೂನ್ಯನಾದ ಬಾಯಿಯನ್ನು ಪೂರಾ ತೆರೆಯದೆ, ಅರೆ ನಗೆಯಿಂದ “ಪರಾಶರಾತ್ಮಜಂ ವಂದೇ ಶುಕತಾಶತಂ ತಪೋನಿಧಿಂಗ ಎಂದು ಕೈಜೋಡಿಸಿ ಸುಮ್ಮಗಿರುವನು.

ಬಾಲಮುಕುಂದನಂತೆ ಬೇರೆ ಮಠಗಳ ಪ್ರತಿನಿಧಿಗಳಿಗೂ ಭೀಮಾಚಾ ರ್ಯನು ಅಚ್ಚುಮೆಚ್ಚಿನವನಾಗಿ ಅನರನ್ನಗಲದೆ ಆಪ್ತಭಾವವನ್ನು ಬೆಳಸಿದನು ಕುಮುದಪುರವು ವಸಂತ ನಗರದ ಪಟ್ಟಣಗಳಲ್ಲಿ ಆರೋಗ್ಯಕರವಾಗಿದ್ದು ಅತಿ ಸುಖದಾಯಕ ಪ್ರದೇಶವಾದ ಕಾರಣ ಪಾರುಪತ್ಯಗಾರರಿಲ್ಲರೂ ಪರಿವಾರ ಸಮೇತವಾಗಿ ಅಲ್ಲಿ ಹೆಚ್ಚುದಿವಸಗಳು ಉಳುಕೊಳ್ಳುವದಕ್ಕೆ ಇಚ್ಛಿತರಾದರು. ಭೀಮಾಚಾರ್ಯನು ಅವರ ಮನಸ್ಸಿಗೆ ರವಷ್ಟಾದರೂ ಕರಕರೆಯಾಗದಂತೆ ಆಗಾಗ್ಗೆ ತನ್ನ ನಾಲಿಗೆಯ ಚಮತ್ಕಾರದಿಂದ ಅವರಿಗೆ ಕರ್ಣೋಲ್ಲಾಸ ಮಾಡುತ್ತಾ, ಇನ್ನೊಂದು ಠಾವಿಗೆ ಯಾರಾದರೂ ಕರೆದರೂ ಹೋಗವಲ್ಲನು. “ದೊಡ್ಡ ಮನುಷ್ಯರ ಎಡೆಯಲ್ಲಿ ನಿಮಗೆ ಹ್ಯಾಗೆ ಪೂರೈಸುತ್ತದೆ, ಆಚಾರ್ಯರೇ! ಎಂದು ವೇದವ್ಯಾಸ ಉಪಾಧ್ಯನು ಅಪರೂಪವಾಗಿ ಕೇಳಿದರೆ- “ನೀಚಾರ್ರಯಂ ನಕರ್ತವ್ಯಂ, ಕರ್ತವ್ಯಂ ಮಹದಾತ್ರಯಂ” ಈ ವಚನ ಕೇಳರಿಯೆಯಾ ಎಂಬ ಉತ್ತರದಿಂದ ಅವನ ಬಾಯಿ ಮುಚ್ಚಿಸುವನು.

ತನ್ನ ಶೀಲವನ್ನು ಕುರಿತು ಪರಿಶೋಧನೆ ಮಾಡುವದಕ್ಕೋಸರ ಮಠಾಧಿಪತಿಗಳಿಂದ ನೇಮಿಸಲ್ಪಟ್ಟ ಪ್ರತಿನಿಧಿಗಳ ಸಭೆಯು ಯಾವಾಗ್ಗೆ ಕೂಡುವದೋ ತಿಳಿಯದೆಂದು ಚಂಚಲನೇತ್ರರು ಸ್ವಲ್ಪ ಚಿಂತೆಯಲ್ಲಿದ್ದ ಹಾಗೆ ಕಂಡು, ವೆಂಕಟಪತಿಯು ಅವಸರ ಒಳ್ಳೆದಲ್ಲವೆಂದನು. ಯತಿಗಳು ಆ ಮಾತಿಗೆ ಮೆಚ್ಚಿದರು. ಹ್ಯಾಗಾದರೂ, ಅವರು ತಮ್ಮ ಮಥಕ್ಕೆ ಬಂದು ಒಂದು ದಿವಸವಾದರೂ ತಮ್ಮನ್ನು ಕಾಣದೆ ಇದ್ದದ್ದು ಸ್ಪಲ್ಪ ಆರ್ಚರ್ಯವಲ್ಲವೋ? ಎಂದು ಚಂಚಲನೇತ್ರರು ಪ್ರಶ್ನೆಮಾಡಿದರು. ಅವರು ಮತಾಧಿಪತಿಗಳ ಪ್ರತಿ ನಿಧಿಗಳಾಗಿ ಬಂದಿರುವ ದೆಸೆಯಿಂದ ಮಠದ ಕಡೆಯಿಂದ ಮುಂದಾಗಿ ಅವ ರನ್ನು ಅಭಮಂತ್ರಣಮೂಲಕ ಕರಸಿಕೊಂಡ ವಿನಾ ಅವರ ಆಗಮನವನ್ನು ನಿರೀಕ್ಷಿಸುವದು ವ್ಯರ್ಥವೆಂದು ವೆಂಕಟಪತಿಯು ಕೊಟ್ಟ ಉತ್ತರವು ಮಾನ್ಯ ವಾಯಿತು. “ಹಾಗಾದರ ನಾಳೆ ಮಠದಲ್ಲಿ ನರಸಿಂಹಜಯಂತಿ ಆಚರಣೆ ಗದ್ದಲದಿಂದ ಆಗುವ ಹಾಗೆ ನೋಡಿಕೊಂಡು ಆಚಾರ್ಯರಿಗೆಲ್ಲಾ ಕರಿಸಿ ಕೊಳ್ಳುವ ಜಾಗ್ರತೆ ಇಡು” ಎಂದು ವೆಂಕಟಪತಿಗೆ ನಿರೂಪವಾಯಿತು. ವೆಂಕ ಟಪತಿ ಆಚಾರ್ಯನು ಅಂಜನೇಯಾಲಯಕ್ಕೆ ತೆರಳಿ, ಅಲ್ಲಿ ವಸತಿಮಾಡಿಕೊಂ ಡಿರುವ ನಾಲ್ವರು ಆಚಾರ್ಯರನ್ನೂ ಕಂಡು, ಚಂಚಲನೇತ್ರರ ಅಪೇಕ್ಷೆಯನ್ನು ವಿದಿತಮಾಡಿ, ಪ್ರತ್ಯುತ್ತರ ಕೇಳಿಕೊಂಡನು. ಶ್ರೀಪಾದಂಗಳವರ ಆಜ್ಞೆಯಂತೆ ವರ್ತಿಸದೆ ಇರುವ ಪಾಪಿ ತಮ್ಮ ಕೂಟದಲ್ಲಿ ಯಾರೂ ಇಲ್ಲವೆಂದು ಸರಸೋಕ್ತಿ ಯಿಂದ ಅವರೆಲ್ಲರ ಸಮ್ಮತವನ್ನು ಬಾಲಮುಕುಂದಾಚಾರ್ಯನು ಅವಗತ ಮಾಡಿದ್ದಕ್ಕಾಗಿ ಮಿಕ್ಕವರೆಲ್ಲರೂ ಸಂತೋಷಪಟ್ಟರು.

ಭೀಮಾಚಾರ್ಯನು ಇಂಥಾ ಸಂದುಕಟ್ಟಿನ ಸಮಯದಲ್ಲಿ ಈ ಸ್ಥಳ ದಲ್ಲಿ ಇರಬಾರದಿತ್ತು. ಅವನಿಗೆ ಪ್ರತ್ಯೇಕವಾಗಿ ಅಭಿಮಂತ್ರಣವಿಲ್ಲ. ವೆಂಕಟ ಪತಿಆಚಾರ್ಯನು ದೊಡ್ಡ ಚಮತ್ಕಾರಿ. ಮೊದಲು ನಾಲ್ಕುಮಂದಿ ಆಚಾರ್ಯ ಗೆ ವ್ಯಕ್ತವಾಗಿ ಅಭಿಮಂತ್ರಣ ಕೊಟ್ಟು ಆ ಮೇಲೆ ಸರ್ವರೂ ಭೋಜನಕ್ಕೆ ದಯಮಾಡಬೇಕಾಗಿ ಶ್ರೀಪಾದಂಗಳವರ ಅಪೇಕ್ಷೆಯೆಂಬ ಮಾತಿನ ಮೂಲಕ ಮಾಡಿದ ಸರ್ವಸಾಧಾರಣ ಹೇಳಿಕೆಯಲ್ಲಿ ಭೀಮಾಚಾರ್ಯನು ಸೇರಲಿಲ್ಲವೆನ್ನ ಕೂಡದು. ವೆಂಕಟಪತಿಯ ಯತ್ನಕ್ಕೆ ಒಂದು ಪ್ರತೀಕಾರಮಾ ಡಿ ನೋಡುವದಕ್ಕೋಸ್ಟರ ಭೀಮಾಚಾರ್ಯನು ಫಕ್ಕನೆ ಎದ್ದು ತಾನು ಆ ಬಿಡಾರವಾಸಿಯಲ್ಲವೆಂಬ ಅನ್ವಯವಾಗುವಂತೆ “ಬಾಲಮುಕುಂದಾಚಾ ರ್ಯರೇ! ನನಗೀಗ ಅಪ್ಪಣೆಯಾಗಲಿ; ಬೇರೊಂದು ಊರಿಗೆ ಹೋಗುವ ಜಂಬರವಿದೆ” ಎಂದು ಪೌಳಿಯಿಂದ ಕೆಳಗೆ ಇಳಿದನು. ವೆಂಕಟಪತಿಯು ಭೀಮಾಚಾರ್ಯನನ್ನು ಕುರಿತು–“ಸ್ವಾಮೀ! ತಮಗೆ ಪ್ರತ್ಯೇಕವಾಗಿ ಭೋಜನಕ್ಕೆ ಹೇಳಲಿಲ್ಲವೆಂಬ ವಿಕಲ್ಪ ಉಂಟಾಗಬಾರದು. ತಮ್ಮನ್ನು ಅಭಿಮಂತ್ರಣದಲ್ಲಿ ಸೇರಿಸಿರುತ್ತೇನೆ. ತಮಗೆ ತಕ್ಕ ಸಾಭಿಮಾನ ಮಾಡುವ ದಕ್ಕೆ ಶ್ರೀಪಾದಂಗಳವರಿಗೆ ತುಂಬಾ ಮನಸ್ಸು ಅದೆ. ಅವರಿಗೆ ತಮ್ಮ ಪರಿ ಚಯವಿಲ್ಲವೆಂಬ ಅನುಮಾನ ತಮ್ಮ ಮನಸ್ಸಿನಲ್ಲಿ ಅದೆಯೋ ಅರಿಯೆ” ಎಂದು ವೆಂಕಟಪತಿಆಚಾರ್ಯನು ಅಂದಾಗ ಸ್ವಾಮಿಗಳಿಗೆ ತನ್ನ ಪರಿಚರ್ಯ ವಿರಬಹುದು; ಆದರೆ ತಮ್ಮೊಳಗೆ ಹೆಚ್ಚು ಬಳಕೆ ಇಲ್ಲದೆ ತಾನು ದೂರವಾಗಿ ದ್ದೇನೆಂದು ಭೀಮಾಚಾರ್ಯನ ಪ್ರತಿವಚನವಾಯಿತು. ಆಗಲೇ ಅವನನ್ನು ಕೈ ಹಿಡುಕೊಂಡು ವೆಂಕಟಪತಿಯೇ ಮಠಕ್ಕೆ ಕರತಂದು ಮಮತಾಪೂರ್ವಕ ಮರಾಧೀಶರ ಭೇಟಿಯನ್ನು ಮಾಡಿಸಿದನು.

ಚಂಚಲನೇತ್ರರು ಭೀಮಾಚಾರ್ಯನನ್ನು ಏಕಾಂತ ಕೋಣೆಗೆ ಕರ ಕೊಂಡು ಕೊಂಚ ಸಮಯ ಅಂತರಂಗದಲ್ಲಿ ವೇದವ್ಯಾಸ ಉಪಾಧ್ಯನ ಅನ ಹತಿಯನ್ನು ಕುರಿತು ಪ್ರಸ್ತಾಪಿಸಿದರು. ಬಳಿಕ “ನಾಳೆ ಭೋಜನಕ್ಕೆ ವೆಂಕಟ ಪತಿ ಅಭಿಮಂತ್ರಣ ಕೊಟ್ಟಿರುವನಷ್ಟೆ? ಎಂದು ವಿಚಾರಿಸಲ್ಕು “ಹೌದು ಪರಾಕೆ! ನನಗೆ ಅಭಿಮಂತ್ರಣಬೇಕೇ! ನಾನು ಸತತ ಚರಣಕಮಲಗಳ ಭ್ರಮರನಲ್ಲವೇ?” ಎಂದು ಬಹು ದೀನತೆಯಿಂದ ಬಿನ್ನವಿಸಿ, ಬಿಡಾರಕ್ಕೆ ಹೋಗುವದಕ್ಕೆ ಅಪ್ಪಣೆಕೇಳಿ, ಪ್ರಣಾಮ ಮಾಡಿದನು. ಚಂಚಲನೇತ್ರರು ಕಾಶ್ಮೀರಶಾಲುಜೋಡಿಯನ್ನು ಉಡುಗೊರೆಮಾಡಿ ಭೀಮಾಚಾರ್ಯನನ್ನು ಸಾದರದಿಂದ ಕಳುಹಿಸಿ ಕೊಟ್ಟಿರು. ಉಡುಗೊರೆಯನ್ನು ಬಗಲಾಗೆ ಮಡಿಸಿ ಕೊಂಡು ಅವನು ಮರಳಿದನು. ಬಾಲಮುಕುಂದಾಚಾರ್ಯನು ನಸುನಗುತ್ತ “ಆಚಾರ್ಯರೇ! ತಮ್ಮ ಮುಖ ಉಲ್ಲಾಸದಿಂದ ಬೆಳಗುತ್ತಿದೆ” ಎಂದು ಮೋರೆ ಯನ್ನೇ ನೋಡಲು, ನಡೆದ ವೃತ್ತಾಂತವನ್ನು ವಿವರಿಸಿ, ತನಗೆ ಸಿಕ್ಕಿದ ಉಡು ಗೊರೆಯನ್ನು ತೋರಿಸಿದನು. ಭಾಪುರೆ! ತಮ್ಮ ಬುದ್ಧಿವಂತಿಗೆಗೆ ಮೆಚ್ಚಿದೆ ನೆಂದುಬಾಲಮುಕುಂದನು ಶ್ಲಾಘನೆ ಮಾಡಿದನು. ಹಾಗೂ ಹೀಗೂ ಅಂದಿನ ದಿನಕಳೆಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣನೆ
Next post ಆರುಣಿಯ ನೋಡಿದಿರಾ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys