ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಸಾಮಾನ್ಯವಾಗಿ ಇದುವರೆಗೆ ಗುಲಾಬಿ ಹೂಗಳನ್ನು, ಕೆಂಪು, ನೆರಳೆ, ಹಳದಿ ಬಣ್ಣಗಳಲಿ ಕಾಣುತ್ತ ಬಂದಿದ್ದೇವೆ. ಹಾಗೆ ಹತ್ತಿಯನ್ನು ಸಹ ಶ್ವೇತ ವರ್ಣದಲ್ಲಿ ಕಾಣುತ್ತ ಬಂದಿದ್ದೇವೆ. ಆದರೆ ನಮಗಿಷ್ಟವಾದ ಬಣ್ಣಗಳಲ್ಲಿ ಹೂವು ಹತ್ತಿಯನ್ನು ಜೈವಿಕ ತಂತ್ರಜ್ಞಾನದಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಬೇವಿನ ಮರದಲ್ಲಿ ಮಾವನ್ನು, ಮಾವಿನಮರದಲ್ಲಿ ಬೇವನ್ನು ಹೀಗೆ ಹಣ್ಣುಗಳ ಜಾತಿಗಳನ್ನು ವಿಭಿನ್ನ ಜಾತಿಯ ಮರಗಳಲ್ಲಿ ಪಡೆಯಬಹುದೆಂಬುವುದು ಆಶ್ಚರ್ಯ. ಆದರೆ ಈ ಕಲ್ಪನೆಗಳೆಲ್ಲ ಸತ್ಯವಾಗುತ್ತಲಿವೆ. ಸೃಷ್ಟಿ ಸಹಸ ಕ್ರಿಯೆಗೆ ಜೈವಿಕ ಸಂಚಲನದಿಂದ ಹೀಗೆಲ್ಲ ಮಾಡಬಹುದೆಂದು ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಹಳದಿ, ಕೆಂಪು, ನೆರಳೆ ಗುಲಾಬಿ ಹೂಗಳು ನಿಸರ್ಗದಲ್ಲಿವೆ. ಇವುಗಳನ್ನು ನಮಗಿಷ್ಟ ಬಂದ ಬಣ್ಣಗಳಲ್ಲಿ ಬೆಳೆಯಲು ಹಾಲೆಂಡಿನಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಸೂಕ್ತ ಬಣ್ಣದ ವಂಶಾಣುಗಳನ್ನು ಇತರೆಹೂಗಳಿಂದ ತೆಗೆದು ಇತರ ಹೂಗಳಿಗೆ ಸಂಯೋಜನೆ ಮಾಡಿದರಾಯಿತು. ಈವರೆಗೆ ಅಸಾಧ್ಯವೆನಿಸಿದ ಜೆರ್ಮೇನಿಯಂ ಲೋಹದ ಇಟ್ಟಿಗೆ ಕೆಂಪು ವರ್ಣವನ್ನು ಸೃಷ್ಟಿಸುವುದು ಅಸಾಧ್ಯವೆಂದು ತಿಳಿಯಲಾಗಿತ್ತು ಮೆಕ್ಕೆ ಜೋಳದ ಬಣ್ಣದ ವಂಶಾಣುವನ್ನು ಗುಲಾಬಿ ತಳಿಗೆ ವರ್ಗಾಯಿಸಿ ಈಗ ಆವರ್ಣದ ಗುಲಾಬಿಯನ್ನು ಬೆಳೆಯಲಾಗಿದೆ. ಈ ಬಣ್ಣಗಳಲ್ಲದೇ ನಿಸರ್ಗದ ಇತರೇ ವಿನ್ಯಾಸಗಳನ್ನು ಹೂಗಳಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿವೆ. ನಮಗೆಲ್ಲ ತಿಳಿದಿರುವಂತೆ ನೀಲಿ ಹತ್ತಿಯನ್ನು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಇತರೆ ವರ್ಣದ ಹತ್ತಿಯನ್ನು ಬೆಳೆಯಲು ಸಾಧ್ಯವಾದರೆ ಬೇರೆ ಬಣ್ಣಗಳನ್ನು ಹತ್ತಿಗೆ ಸೇರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಹೊಡೆತಬೀಳಬಹುದು. ಈ ಕೈಗಾರಿಕೆಯಲ್ಲಿ ಬಳೆಸುತ್ತಿರುವ ಸೀಸ ಲೋಹ ಮೂಲದ ವರ್ಣದ್ರವ್ಯಗಳು ವಿಷಕಾರಕವೆನಿಸಿದ್ದು ಕಾರ್ಮಿಕರ ಮತ್ತು ಕೈಗಾರಿಕಾ ವರ್ಜೋಜಲ ಹರಿವ ನೀರಿಗೆ ಸೀಸವನ್ನು ಸೇರಿಸಿ ನೀರಿನಲ್ಲಿರುವ ಪ್ರಾಣಿಗಳಿಗೆ ಹಾಗೂ ಅದನ್ನು ಸೇವಿಸುವ ಪ್ರಾಣಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದೆ. ಇಂಥಹ ಹೊಸ ಸಂಶೋಧನೆಗಳು ಕೈಗಾರಿಕಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಪರಿಸರಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈಗಾಗಲೇ ನಿಸರ್ಗಲ್ಲಿರುವ ಸುಗಂಧ ಪುಪ್ಪಗಳು, ಹಣ್ಣುಗಳು, ತರಕಾರಿಗಳು ನಿಸರ್ಗದ ಮಿಲಿಯಾಂತರ ವರ್ಷಗಳ ವಿಕಾಸದಿಂದ ಸೃಷ್ಟಿಯಾಗಿವೆ. ನಿಸರ್ಗದ ಮೂಲವನ್ನೂ ಅರಿತು ಅದರ ತಂತ್ರವನ್ನು ಮನುಷ್ಯನ ಜೈವಿಕ ತಂತ್ರಜ್ಞಾನದಲ್ಲಿ ಬಳಸಿ ಆಕ್ರಿಯೆಗೆ ಬೇಕಾಗುವ ಮಿಲಿಯಾಂತರ ವರ್ಷಗಳ ಬದಲು ಒಂದೆರೆಡು ವರ್ಷಗಳಲ್ಲಿಯೇ ಅದನ್ನು ಸಾಧಿಸಬಹುದು. ಇದರಿಂದಾಗಿ ವಿಕಾಸವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವನ್ನೂ ವಹಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ಅಸ್ವಸ್ಥರು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…