ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಸಾಮಾನ್ಯವಾಗಿ ಇದುವರೆಗೆ ಗುಲಾಬಿ ಹೂಗಳನ್ನು, ಕೆಂಪು, ನೆರಳೆ, ಹಳದಿ ಬಣ್ಣಗಳಲಿ ಕಾಣುತ್ತ ಬಂದಿದ್ದೇವೆ. ಹಾಗೆ ಹತ್ತಿಯನ್ನು ಸಹ ಶ್ವೇತ ವರ್ಣದಲ್ಲಿ ಕಾಣುತ್ತ ಬಂದಿದ್ದೇವೆ. ಆದರೆ ನಮಗಿಷ್ಟವಾದ ಬಣ್ಣಗಳಲ್ಲಿ ಹೂವು ಹತ್ತಿಯನ್ನು ಜೈವಿಕ ತಂತ್ರಜ್ಞಾನದಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಬೇವಿನ ಮರದಲ್ಲಿ ಮಾವನ್ನು, ಮಾವಿನಮರದಲ್ಲಿ ಬೇವನ್ನು ಹೀಗೆ ಹಣ್ಣುಗಳ ಜಾತಿಗಳನ್ನು ವಿಭಿನ್ನ ಜಾತಿಯ ಮರಗಳಲ್ಲಿ ಪಡೆಯಬಹುದೆಂಬುವುದು ಆಶ್ಚರ್ಯ. ಆದರೆ ಈ ಕಲ್ಪನೆಗಳೆಲ್ಲ ಸತ್ಯವಾಗುತ್ತಲಿವೆ. ಸೃಷ್ಟಿ ಸಹಸ ಕ್ರಿಯೆಗೆ ಜೈವಿಕ ಸಂಚಲನದಿಂದ ಹೀಗೆಲ್ಲ ಮಾಡಬಹುದೆಂದು ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಹಳದಿ, ಕೆಂಪು, ನೆರಳೆ ಗುಲಾಬಿ ಹೂಗಳು ನಿಸರ್ಗದಲ್ಲಿವೆ. ಇವುಗಳನ್ನು ನಮಗಿಷ್ಟ ಬಂದ ಬಣ್ಣಗಳಲ್ಲಿ ಬೆಳೆಯಲು ಹಾಲೆಂಡಿನಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಸೂಕ್ತ ಬಣ್ಣದ ವಂಶಾಣುಗಳನ್ನು ಇತರೆಹೂಗಳಿಂದ ತೆಗೆದು ಇತರ ಹೂಗಳಿಗೆ ಸಂಯೋಜನೆ ಮಾಡಿದರಾಯಿತು. ಈವರೆಗೆ ಅಸಾಧ್ಯವೆನಿಸಿದ ಜೆರ್ಮೇನಿಯಂ ಲೋಹದ ಇಟ್ಟಿಗೆ ಕೆಂಪು ವರ್ಣವನ್ನು ಸೃಷ್ಟಿಸುವುದು ಅಸಾಧ್ಯವೆಂದು ತಿಳಿಯಲಾಗಿತ್ತು ಮೆಕ್ಕೆ ಜೋಳದ ಬಣ್ಣದ ವಂಶಾಣುವನ್ನು ಗುಲಾಬಿ ತಳಿಗೆ ವರ್ಗಾಯಿಸಿ ಈಗ ಆವರ್ಣದ ಗುಲಾಬಿಯನ್ನು ಬೆಳೆಯಲಾಗಿದೆ. ಈ ಬಣ್ಣಗಳಲ್ಲದೇ ನಿಸರ್ಗದ ಇತರೇ ವಿನ್ಯಾಸಗಳನ್ನು ಹೂಗಳಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿವೆ. ನಮಗೆಲ್ಲ ತಿಳಿದಿರುವಂತೆ ನೀಲಿ ಹತ್ತಿಯನ್ನು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಇತರೆ ವರ್ಣದ ಹತ್ತಿಯನ್ನು ಬೆಳೆಯಲು ಸಾಧ್ಯವಾದರೆ ಬೇರೆ ಬಣ್ಣಗಳನ್ನು ಹತ್ತಿಗೆ ಸೇರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಹೊಡೆತಬೀಳಬಹುದು. ಈ ಕೈಗಾರಿಕೆಯಲ್ಲಿ ಬಳೆಸುತ್ತಿರುವ ಸೀಸ ಲೋಹ ಮೂಲದ ವರ್ಣದ್ರವ್ಯಗಳು ವಿಷಕಾರಕವೆನಿಸಿದ್ದು ಕಾರ್ಮಿಕರ ಮತ್ತು ಕೈಗಾರಿಕಾ ವರ್ಜೋಜಲ ಹರಿವ ನೀರಿಗೆ ಸೀಸವನ್ನು ಸೇರಿಸಿ ನೀರಿನಲ್ಲಿರುವ ಪ್ರಾಣಿಗಳಿಗೆ ಹಾಗೂ ಅದನ್ನು ಸೇವಿಸುವ ಪ್ರಾಣಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದೆ. ಇಂಥಹ ಹೊಸ ಸಂಶೋಧನೆಗಳು ಕೈಗಾರಿಕಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಪರಿಸರಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈಗಾಗಲೇ ನಿಸರ್ಗಲ್ಲಿರುವ ಸುಗಂಧ ಪುಪ್ಪಗಳು, ಹಣ್ಣುಗಳು, ತರಕಾರಿಗಳು ನಿಸರ್ಗದ ಮಿಲಿಯಾಂತರ ವರ್ಷಗಳ ವಿಕಾಸದಿಂದ ಸೃಷ್ಟಿಯಾಗಿವೆ. ನಿಸರ್ಗದ ಮೂಲವನ್ನೂ ಅರಿತು ಅದರ ತಂತ್ರವನ್ನು ಮನುಷ್ಯನ ಜೈವಿಕ ತಂತ್ರಜ್ಞಾನದಲ್ಲಿ ಬಳಸಿ ಆಕ್ರಿಯೆಗೆ ಬೇಕಾಗುವ ಮಿಲಿಯಾಂತರ ವರ್ಷಗಳ ಬದಲು ಒಂದೆರೆಡು ವರ್ಷಗಳಲ್ಲಿಯೇ ಅದನ್ನು ಸಾಧಿಸಬಹುದು. ಇದರಿಂದಾಗಿ ವಿಕಾಸವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವನ್ನೂ ವಹಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ಅಸ್ವಸ್ಥರು

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys