ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಸಾಮಾನ್ಯವಾಗಿ ಇದುವರೆಗೆ ಗುಲಾಬಿ ಹೂಗಳನ್ನು, ಕೆಂಪು, ನೆರಳೆ, ಹಳದಿ ಬಣ್ಣಗಳಲಿ ಕಾಣುತ್ತ ಬಂದಿದ್ದೇವೆ. ಹಾಗೆ ಹತ್ತಿಯನ್ನು ಸಹ ಶ್ವೇತ ವರ್ಣದಲ್ಲಿ ಕಾಣುತ್ತ ಬಂದಿದ್ದೇವೆ. ಆದರೆ ನಮಗಿಷ್ಟವಾದ ಬಣ್ಣಗಳಲ್ಲಿ ಹೂವು ಹತ್ತಿಯನ್ನು ಜೈವಿಕ ತಂತ್ರಜ್ಞಾನದಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಬೇವಿನ ಮರದಲ್ಲಿ ಮಾವನ್ನು, ಮಾವಿನಮರದಲ್ಲಿ ಬೇವನ್ನು ಹೀಗೆ ಹಣ್ಣುಗಳ ಜಾತಿಗಳನ್ನು ವಿಭಿನ್ನ ಜಾತಿಯ ಮರಗಳಲ್ಲಿ ಪಡೆಯಬಹುದೆಂಬುವುದು ಆಶ್ಚರ್ಯ. ಆದರೆ ಈ ಕಲ್ಪನೆಗಳೆಲ್ಲ ಸತ್ಯವಾಗುತ್ತಲಿವೆ. ಸೃಷ್ಟಿ ಸಹಸ ಕ್ರಿಯೆಗೆ ಜೈವಿಕ ಸಂಚಲನದಿಂದ ಹೀಗೆಲ್ಲ ಮಾಡಬಹುದೆಂದು ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಹಳದಿ, ಕೆಂಪು, ನೆರಳೆ ಗುಲಾಬಿ ಹೂಗಳು ನಿಸರ್ಗದಲ್ಲಿವೆ. ಇವುಗಳನ್ನು ನಮಗಿಷ್ಟ ಬಂದ ಬಣ್ಣಗಳಲ್ಲಿ ಬೆಳೆಯಲು ಹಾಲೆಂಡಿನಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಸೂಕ್ತ ಬಣ್ಣದ ವಂಶಾಣುಗಳನ್ನು ಇತರೆಹೂಗಳಿಂದ ತೆಗೆದು ಇತರ ಹೂಗಳಿಗೆ ಸಂಯೋಜನೆ ಮಾಡಿದರಾಯಿತು. ಈವರೆಗೆ ಅಸಾಧ್ಯವೆನಿಸಿದ ಜೆರ್ಮೇನಿಯಂ ಲೋಹದ ಇಟ್ಟಿಗೆ ಕೆಂಪು ವರ್ಣವನ್ನು ಸೃಷ್ಟಿಸುವುದು ಅಸಾಧ್ಯವೆಂದು ತಿಳಿಯಲಾಗಿತ್ತು ಮೆಕ್ಕೆ ಜೋಳದ ಬಣ್ಣದ ವಂಶಾಣುವನ್ನು ಗುಲಾಬಿ ತಳಿಗೆ ವರ್ಗಾಯಿಸಿ ಈಗ ಆವರ್ಣದ ಗುಲಾಬಿಯನ್ನು ಬೆಳೆಯಲಾಗಿದೆ. ಈ ಬಣ್ಣಗಳಲ್ಲದೇ ನಿಸರ್ಗದ ಇತರೇ ವಿನ್ಯಾಸಗಳನ್ನು ಹೂಗಳಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿವೆ. ನಮಗೆಲ್ಲ ತಿಳಿದಿರುವಂತೆ ನೀಲಿ ಹತ್ತಿಯನ್ನು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಇತರೆ ವರ್ಣದ ಹತ್ತಿಯನ್ನು ಬೆಳೆಯಲು ಸಾಧ್ಯವಾದರೆ ಬೇರೆ ಬಣ್ಣಗಳನ್ನು ಹತ್ತಿಗೆ ಸೇರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಹೊಡೆತಬೀಳಬಹುದು. ಈ ಕೈಗಾರಿಕೆಯಲ್ಲಿ ಬಳೆಸುತ್ತಿರುವ ಸೀಸ ಲೋಹ ಮೂಲದ ವರ್ಣದ್ರವ್ಯಗಳು ವಿಷಕಾರಕವೆನಿಸಿದ್ದು ಕಾರ್ಮಿಕರ ಮತ್ತು ಕೈಗಾರಿಕಾ ವರ್ಜೋಜಲ ಹರಿವ ನೀರಿಗೆ ಸೀಸವನ್ನು ಸೇರಿಸಿ ನೀರಿನಲ್ಲಿರುವ ಪ್ರಾಣಿಗಳಿಗೆ ಹಾಗೂ ಅದನ್ನು ಸೇವಿಸುವ ಪ್ರಾಣಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದೆ. ಇಂಥಹ ಹೊಸ ಸಂಶೋಧನೆಗಳು ಕೈಗಾರಿಕಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಪರಿಸರಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈಗಾಗಲೇ ನಿಸರ್ಗಲ್ಲಿರುವ ಸುಗಂಧ ಪುಪ್ಪಗಳು, ಹಣ್ಣುಗಳು, ತರಕಾರಿಗಳು ನಿಸರ್ಗದ ಮಿಲಿಯಾಂತರ ವರ್ಷಗಳ ವಿಕಾಸದಿಂದ ಸೃಷ್ಟಿಯಾಗಿವೆ. ನಿಸರ್ಗದ ಮೂಲವನ್ನೂ ಅರಿತು ಅದರ ತಂತ್ರವನ್ನು ಮನುಷ್ಯನ ಜೈವಿಕ ತಂತ್ರಜ್ಞಾನದಲ್ಲಿ ಬಳಸಿ ಆಕ್ರಿಯೆಗೆ ಬೇಕಾಗುವ ಮಿಲಿಯಾಂತರ ವರ್ಷಗಳ ಬದಲು ಒಂದೆರೆಡು ವರ್ಷಗಳಲ್ಲಿಯೇ ಅದನ್ನು ಸಾಧಿಸಬಹುದು. ಇದರಿಂದಾಗಿ ವಿಕಾಸವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವನ್ನೂ ವಹಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ಅಸ್ವಸ್ಥರು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…