ಸಾವಿನ ಕಪ್ಪು ಛಾಯೆ

ಕಾರ್ಖಾನೆಗಳಿಂದ
ಹೊರ ಬರುವ ಹೊಗೆ,
ವಾಹನಗಳಿಂದ ಬರುವ
ಪೆಟ್ರೋಲಿನ ವಾಸನೆಗೆ
ಉಸಿರುಗಟ್ಟಿಸುವ ಧಗೆ
ದುರ್ಗಂಧದ ಅಲೆಗೆ
ಹೆದರಿ ಓಡೋಡಿ ಸುಸ್ತಾಗಿ
ಶುದ್ಧ ಗಾಳಿ ಸಿಗದೆ
ಕಲುಷಿತಗೊಳಿಸಿದ
ಕೃತಕ ನಾಗರೀಕತೆಯ
ರಣ ಹದ್ದಿನ ಗೂಡಿಗೆ
ವಿಧಿಯಿಲ್ಲದೇ
ಮತ್ತೇ ಮರಳುತ್ತೇನೆ
ದುರಂತದ ಸುರಂಗದಲ್ಲಿ

ನಗರೀಕರಣ ನೆಪದಲ್ಲಿ
ಜಾತಿ ರಾಜಕೀಯದಲ್ಲಿ
ಸುಡಿಸಿಕೊಂಡು ನನ್ನೂರ ಗುಡಿಸಲುಗಳು
ನನ್ನ ಮನೆ ಮೇಲಿಂದ
ಹಾರಿಹೋಗುವ ವಿಮಾನಗಳು,
ರಸ್ತೆ ದರೋಡೆಗಳು,
ನ್ಯೂಟ್ರಾನ್ ಬಾಂಬುಗಳು
ಸದ್ದಿಲ್ಲದೇ ನನ್ನ ಜನಗಳ
ಕತ್ತು ಹಿಸುಕಿದೆ ನೋಡು.

ಗಿರಿಬೆಟ್ಟ ಗುಡ್ಡಗಳೆಲ್ಲ
ಹಸಿರುಟ್ಟು ನಲಿಯೋದು ಬಿಟ್ಟು
ವರ್ಷಗಳೇ ಕಳೆದವು.
ಬರಿದಾದ ಬೆಟ್ಟಗಳು
ಸುಡುಬಿಸಿಲಿಗೆ ಒಡಲೊಡ್ಡಿ
ಭಣಗುಡುವ ಕೆರೆಗಳು.

ಸಾವಿನ ಮುಖ ಕಪ್ಪು
ಬದುಕಿನ ಮುಖ ಹಸಿರು
ಕಿವಿ ಗಡಚಿಕ್ಕುವ
ಯಂತ್ರಗಳ ಶಬ್ದ-
ಕಿವಿಯಲ್ಲಿ ಹತ್ತಿಯಿಟ್ಟು
ನೋಡುವ ನೋಟದಲಿ
ಜೀವವಿಲ್ಲ ಹಸಿರಿಲ್ಲ.
ಸಾವಿನ ಕಪ್ಪು ಛಾಯೆ
ಹರಡಿದೆ ಬಾನೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡು ಬಡವಾದೊಡಲ್ಲಿಪ್ಪ ಸಿರಿತನಕೆಣೆಯುಂಟೇ?
Next post ಚರಿತ್ರೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys