Home / ಕವನ / ಕವಿತೆ / ಸಮ್ಮಿಲನ

ಸಮ್ಮಿಲನ

ಜೀವನವೊಂದು ಸುಖ-ದುಃಖಗಳ
ಸುಂದರ ಸುದೀರ್ಘ ಯಾತ್ರೆ
ಭೇದವ ಬೆರೆಸದೆ-ಮಿಂದು
ಮುಂದೆ.. ಮುಂದೆ ಸಾಗಬೇಕು
ದ್ವೇಷ-ಅಸೂಯೆ ಬದಿಗೊತ್ತುತಲಿ
ಜಾತಿ-ಮತಗಳ ಭೇದವ ತುಳಿಯುತ
ಒಂದೇ ತಾಯಿಯ ಉದರದಿ ಜನಿಸಿದ
ಮನುಕುಲದ ಕುಡಿಗಳೆನ್ನುತಲಿ
ಮಿಂದು ಮುಂದೆ-ಮುಂದೆ ಸಾಗಬೇಕು

ನ್ಯಾಯ-ನೀತಿಯನು ಎತ್ತಿ ಹಿಡಿಯುತ
ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ
ಯುವಶಕ್ತಿಯನ್ನೆಲೆಡೆ ಮೆರೆಸುತ
ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ
ಅಳುಕದೆ… ಅರಳುತಲಿ… ಮುನ್ನಡೆಯುವಾ

ಮಾನವೀಯತೆಯ ಮರದಡಿಯಲಿ
ಪ್ರೀತಿ-ಪ್ರೇಮಗಳ ಬಲೆಯಲಿ
ನಾವುಗಳೆಲ್ಲ ಸಹೋದರರೆನ್ನುತಾ…
ಬಿಗುಮಾನಗಳ ಕೊಂಡಿಯ ಕಳಚಿ
ಸ್ವಾಭಿಮಾನದ ಕಿಡಿ-ಕಿಡಿಯಾಗಿ…

ಶಾಂತಿಧಾಮದ ಹಸಿರು ಬಳ್ಳಿಯಾಗುತಲಿ
ಸತ್ಯ-ಶಾಂತಿ, ಸೌಹಾರ್ದತೆ ಚಿಲುಮೆಯಾಗುತ
ಅರಿತು-ಬೆರೆತು-ಒಗ್ಗಟ್ಟಲಿ…
ಮುಂದೆ… ಮುಂದೆ… ಸಾಗಬೇಕು.

***

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...