ಸಮ್ಮಿಲನ

ಜೀವನವೊಂದು ಸುಖ-ದುಃಖಗಳ
ಸುಂದರ ಸುದೀರ್ಘ ಯಾತ್ರೆ
ಭೇದವ ಬೆರೆಸದೆ-ಮಿಂದು
ಮುಂದೆ.. ಮುಂದೆ ಸಾಗಬೇಕು
ದ್ವೇಷ-ಅಸೂಯೆ ಬದಿಗೊತ್ತುತಲಿ
ಜಾತಿ-ಮತಗಳ ಭೇದವ ತುಳಿಯುತ
ಒಂದೇ ತಾಯಿಯ ಉದರದಿ ಜನಿಸಿದ
ಮನುಕುಲದ ಕುಡಿಗಳೆನ್ನುತಲಿ
ಮಿಂದು ಮುಂದೆ-ಮುಂದೆ ಸಾಗಬೇಕು

ನ್ಯಾಯ-ನೀತಿಯನು ಎತ್ತಿ ಹಿಡಿಯುತ
ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ
ಯುವಶಕ್ತಿಯನ್ನೆಲೆಡೆ ಮೆರೆಸುತ
ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ
ಅಳುಕದೆ… ಅರಳುತಲಿ… ಮುನ್ನಡೆಯುವಾ

ಮಾನವೀಯತೆಯ ಮರದಡಿಯಲಿ
ಪ್ರೀತಿ-ಪ್ರೇಮಗಳ ಬಲೆಯಲಿ
ನಾವುಗಳೆಲ್ಲ ಸಹೋದರರೆನ್ನುತಾ…
ಬಿಗುಮಾನಗಳ ಕೊಂಡಿಯ ಕಳಚಿ
ಸ್ವಾಭಿಮಾನದ ಕಿಡಿ-ಕಿಡಿಯಾಗಿ…

ಶಾಂತಿಧಾಮದ ಹಸಿರು ಬಳ್ಳಿಯಾಗುತಲಿ
ಸತ್ಯ-ಶಾಂತಿ, ಸೌಹಾರ್ದತೆ ಚಿಲುಮೆಯಾಗುತ
ಅರಿತು-ಬೆರೆತು-ಒಗ್ಗಟ್ಟಲಿ…
ಮುಂದೆ… ಮುಂದೆ… ಸಾಗಬೇಕು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಂಡೆತಿಮ್ಮ ಉವಾಚ
Next post ಭಾವೋನ್ಮಾದ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…