ಸಮ್ಮಿಲನ

ಜೀವನವೊಂದು ಸುಖ-ದುಃಖಗಳ
ಸುಂದರ ಸುದೀರ್ಘ ಯಾತ್ರೆ
ಭೇದವ ಬೆರೆಸದೆ-ಮಿಂದು
ಮುಂದೆ.. ಮುಂದೆ ಸಾಗಬೇಕು
ದ್ವೇಷ-ಅಸೂಯೆ ಬದಿಗೊತ್ತುತಲಿ
ಜಾತಿ-ಮತಗಳ ಭೇದವ ತುಳಿಯುತ
ಒಂದೇ ತಾಯಿಯ ಉದರದಿ ಜನಿಸಿದ
ಮನುಕುಲದ ಕುಡಿಗಳೆನ್ನುತಲಿ
ಮಿಂದು ಮುಂದೆ-ಮುಂದೆ ಸಾಗಬೇಕು

ನ್ಯಾಯ-ನೀತಿಯನು ಎತ್ತಿ ಹಿಡಿಯುತ
ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ
ಯುವಶಕ್ತಿಯನ್ನೆಲೆಡೆ ಮೆರೆಸುತ
ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ
ಅಳುಕದೆ… ಅರಳುತಲಿ… ಮುನ್ನಡೆಯುವಾ

ಮಾನವೀಯತೆಯ ಮರದಡಿಯಲಿ
ಪ್ರೀತಿ-ಪ್ರೇಮಗಳ ಬಲೆಯಲಿ
ನಾವುಗಳೆಲ್ಲ ಸಹೋದರರೆನ್ನುತಾ…
ಬಿಗುಮಾನಗಳ ಕೊಂಡಿಯ ಕಳಚಿ
ಸ್ವಾಭಿಮಾನದ ಕಿಡಿ-ಕಿಡಿಯಾಗಿ…

ಶಾಂತಿಧಾಮದ ಹಸಿರು ಬಳ್ಳಿಯಾಗುತಲಿ
ಸತ್ಯ-ಶಾಂತಿ, ಸೌಹಾರ್ದತೆ ಚಿಲುಮೆಯಾಗುತ
ಅರಿತು-ಬೆರೆತು-ಒಗ್ಗಟ್ಟಲಿ…
ಮುಂದೆ… ಮುಂದೆ… ಸಾಗಬೇಕು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಂಡೆತಿಮ್ಮ ಉವಾಚ
Next post ಭಾವೋನ್ಮಾದ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys