ಕುಲೀನ ಯುವತಿಯ ಎರಡನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ನಿನ್ನ ಕಾಲ್ಗಳ ನಡುವೆ ಮಲಗಲು
ಎಂಥ ವ್ಯಕ್ತಿಯು ಬರುವನು?
ಇರಲಿ ಬಿಡು ಯಾರಾದರೇನು?
ನಾವು ಕೇವಲ ಸ್ತ್ರೀಯರು.
ಮಿಂದು ಬಾ, ಲೇಪಿಸಿಕೊ ಪರಿಮಳ
ಗೂಡುಗಳಲಿವೆ ಅತ್ತರು,
ತಳೆದೆ ಹೊದಿಕೆಗೆ ಎತ್ತಲೂ.
ದೇವರೇ ಕ್ಷಮಿಸೆಮ್ಮನು.

ಮೈಯೆ ಇಲ್ಲವೊ ಎಂಬ ತರದಲಿ
ಪ್ರೀತಿಸುವ ನನ್ನಾತ್ಮವ,
ಆತ್ಮದೆಡೆ ತಡೆ ಇರದೆ ಉಣ್ಣುವ
ಅವನು ನಿನ್ನೀ ದೇಹವ.
ಪ್ರೇಮ ಎರಡೂ ರೀತಿಗೊಲಿದೂ
ತೆರೆವುದೊಂದೇ ಅರ್‍ಥವ.
ದೇವರೇ ಕ್ಷಮಿಸೆಮ್ಮನು.

ಆತ್ಮ ಕಲಿಯಲೆಬೇಕು ನನ್ನೀ
ಹೃದಯಕೊಗ್ಗುವ ಪ್ರೇಮವ,
ಅಂಗಗಳು ಕಲಿಯುವುವು ಮೃಗಗಳ
ಮೈಗೆ ಒಗ್ಗುವ ಕಾಮವ;
ಕಾಣುವಾತ್ಮವೊ, ಮಿಡಿವ ದೇಹವೊ
ಹೇಳು ಯಾವುದು ಉತ್ತಮ?
ದೇವರೇ ಕ್ಷಮಿಸೆಮ್ಮನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೨೧
Next post ಜಯತು ಕನ್ನಡ ಮಾತೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…