ನಮ್ಮೂರ ಅಜ್ಜ

ನಮ್ಮೂರ ಕೇರಿಯ
ರಸ್ತೆಯ ಅಂಚಿನಲ್ಲಿ
ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ

ಅರವತ್ತು ವಸಂತಗಳ
ಅರಿವಿನ ಅಗಾಧ ಶಕ್ತಿಯ
ಬದುಕಲಿ ಬಳಲಿದ ಹಿರಿಜೀವ

ಮುದುಡಿದ ನೆರೆಗಳ ಮುಖದಿ
ಕಳೆದಿಹ ಬದುಕಿನ…
ಬಾಳಸಂಜೆಯ ಎದುರುನೋಡುತಿಹನು

ಬರಲಿರುವ ದಿನಗಳ
ಸಮಯವ ಕಾಯುತ
ಸಮೀಪದ ಹೆಜ್ಜೆಗಳ ಗುಣಿಸುತ್ತಿರುವನು

ಯಾರು ಕಾಯುವವರಿಲ್ಲ
ಮಾತನಾಡಿಸುವವರಿಲ್ಲ
ಕರೆದು ಕೇಳುವರಿಲ್ಲ

ಆದರೂ ನಮ್ಮಜ್ಜ ಬದುಕಿದ್ದಾನೆ
ಬದುಕುತ್ತಾ ಭವಿಷ್ಯ ಎದುರು ನೋಡುತ್ತಿದ್ದಾನೆ
ನಿಸರ್ಗದ ಮಡಿಲಲ್ಲಿ ಒಬ್ಬನೇ ಕುಳಿತು

ನೆನಪಾಗುತ್ತಿವೆ ಕಳೆದ ದಿನಗಳು
ಕಣ್ಣು ಮುಂದೆ ನಿಲ್ಲುತ್ತವೆ
ಬಾಲ್ಯ ಪ್ರಾಯದ ಹಗಲು-ರಾತ್ರಿಗಳು

ಕಳೆದಿರುವ ಬದುಕು
ದಿನವಿಡಿ ತಳ್ಳುತ್ತಿದೆ
ಒಣಗಿದ ಬೋಳು ಆಲದ ಮರದಂತೆ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು
Next post ಆತ್ಮ ಶೋಧನೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys