ನಾಳೆ ಎಂಬುದು ಹಾಳು ಕಾಣಿರೊ

ನಾಳೆ ಎಂಬುದು ಹಾಳು ಕಾಣಿರೊ – ಓ ನರ ಮಾನವರೇ
ನಾಳೆ ಎಂಬುದು ಹಾಳು ಕಾಣಿರೊ \\ಪ\\

ಇಂದು ಮಾಡುವುದು ಉತ್ತಮವು
ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\

ಗತಿಸಿದ ಕಾಲ ಬರುವುದೆ ಹೇಳು
ನುತಿಸಿದ ದೈವ ಹೆಲ್ಪ್‌ಲೆಸ್ ಕೇಳು!
ಒಡೆದ ಗಾಜು ಕೂಡುವುದಿಲ್ಲ
ಮಡಿದ ಮನುಜ ಮರಳುವುದಿಲ್ಲ

ನಾಳೆಯನಾರೂ ಕಂಡವರಿಲ್ಲ
ವೀಳೆಯವನ್ನು ತೊರೆದವರಿಲ್ಲ
ಸಂದ ಕಾಲವ ಒದ್ದರೆ ಕಾಲಲಿ
ನಿನಗೇನುಂಟು ಹೇಳು ಜಗದಲಿ?

ಹೋದವರಾರೂ ಬಂದವರಿಲ್ಲ
ಬಂದವರಿಲ್ಲಿ ಉಳಿಯುವುದಿಲ್ಲ
ಸಂದ ದಿನದಲಿ ಸಲ್ಲದೆ ಹೋದರೆ
ಸಂದಾಯವೇನು ಹೊಂದಿದ ಜನ್ಮಕೆ?

ಕಾಲವನಾರೂ ಗೆದ್ದವರಿಲ್ಲ
ಕಾಲನೆ ಶರಣು ಅದಕ್ಕೆ ಇಲ್ಲಿ
ಇದರ ವಿವೇಚನೆ ವರ್ತಮಾನವು
ಇನ್ನೇತಕೆ ಜೋತಿಷ್ಯ ಭವಿಷ್ಯವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೧೩
Next post ಹೇಳಿದರೆ ನಕ್ಕು ಬಿಡುವಿರಿ ಕೇಳಿ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys