ನೀರು… ನೀರು… ನೀರು…

ನೀರು… ನೀರು… ನೀರು…
ಬದುಕಿಗೆ ಅಲ್ಲವೆ ಅದು ಬೇರು
ಬೇರು ಇಲ್ಲದ ಮರವುಂಟೆ?
ಇದ್ದರೂ ಅದಕೆ ಉಸಿರುಂಟೆ?? /ಪ//

ಗೆದ್ದನು ಜಗವ ಅಲೆಗ್ಸಾಂಡರ
ಕಡೆಗೆ ಸತ್ತನು ಕಾಣದೆ ನೀರ
ಹೆಣ್ಣನು ಗೆದ್ದ ಭಾವ ಮದಲಿಂಗ
ಕೂಡ ಸೇರಿದ ಅದೇ ಜವನೂರ
ಏನೇ ಆದರೂ ಏನೇ ಹೋದರೂ
ಅಲ್ಲಿ ಪ್ರವಾಹ, ಇಲ್ಲಿ ಬರ
ಈ ನಿಜಕಿಂತಲೂ ಆಳದ ನಿಜವು
ನಮ್ಮ ವಿವೇಕಕೆ ಕೂಡ ಬರ!

ನೀರಿಗೆ ನಾವ್ ಬೆಲೆ ಕೊಡಲೇ ಇಲ್ಲ
ಅದಕೆ ಬಾಟಲಿ ಸೇರಿದೆ ನೀರು
ಆದರೂ ಶ್ರೀಮಂತ ಹುಂಬತನ
ಅದಕೆ ಪಶುಪಕ್ಷಿಗೆ ಕಣ್ಣೀರು
ಇದನು ಕಂಡಿದೆ ಬೆಟ್ಟ ಅರಣ್ಯ
ಕೊಡಲಿ ಪೆಟ್ಟನು ಬುಡದಲಿ ತಿಂದು
ಸತ್ತರೆ ಭೂಮಿ ಕಾಯ್ವುದೆ ಗಗನ
ಎಂದು ಕೇಳಿದೆ ನಿಸರ್ಗ ನೊಂದು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರೇ ಪಾರುಮಾಡಿದಿ ಕಂಡಿಯಾ
Next post ಒಂದು ಹಳೆಯ ಕತೆ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…