ನೆನಪುಗಳು ಮಾಸುವುದಿಲ್ಲ

ನೆನಪುಗಳು ಮಾಸುವುದಿಲ್ಲ
ಹಸಿರಾಗೇ ಉಳಿಯುತ್ತವೆ
ಘೋರ ತಪವನು ಗೈದ
ವಿಶ್ವಾಮಿತ್ರನ ಮೇನಕೆ
ತನ್ನತ್ತ ಸೆಳೆದ ಹಾಗೆ ||

ಕಲೆಗಾರನ ಕುಂಚದಲ್ಲಿ
ನವರಸ ಲಾಸ್ಯವಾಡಿ
ಕವಿದ ಮೋಡಗಳು
ಚಂದ್ರನ ಮರೆಮಾಡಿ
ಗುಡುಗು, ಸಿಡಿಲು, ಮಿಂಚಾದ ಹಾಗೆ ||

ಮುಂಗಾರಿನ ಅನುರಣೀಯ
ಶೃಂಗಾರಗೀತ ರಂಭೆ, ಊರ್ವಶಿ
ತಿಲೋತ್ತಮೆ ನಾಟ್ಯವಾಡಿ
ಬಣ ಗುಟ್ಟಿದ ಧರೆಯು ತಂಪಾಗಿ
ಘಮ್ಮನೆ ಬಿರಿದ ಹಾಗೆ ||

ಹಸಿರಾದ ಬನ ಸಿರಿಯ
ಹೂ ಮನಗಳಲಿ ದುಂಬಿಗಳ
ಝೇಂಕಾರ ಉನ್ಮತ್ತದಿಂ ಒಲಿದ
ಕತ್ತಲು ಬೆಳಕಿನ ಸಿಂಚನ
ದೊಲುಮೆಯಲಿ ನಲಿದ ಹಾಗೆ ||

ವರುಷ ಹರುಷ ಕಲೆತ
ಸಾಮ್ಯತೆಯ ಗೀಳಿನ
ಹಕ್ಕಿಯ ಮಾನವತೆಯ
ಬಯಕೆಗಳ ಸಾಕಾರಕೆ
ಇಳೆಗೆ ಇಳಿದು ಉಲಿದ ಹಾಗೆ ||

ಸೆರೆ ಸಿಕ್ಕ ಪಂಜರದ ಹಕ್ಕಿ
ಸ್ವತಂತ್ರಕ್ಕಾಗಿ ಹಪಹಪಿಸಿ
ಎಂದೋ ಕಳೆದು ಹೋದ
ಇನಿಯನ ಮನವ ಹೊಕ್ಕು
ಪ್ರೀತಿಯ ಹುಡುಕುವ ಹಾಗೆ ||

ಕಲೆಗಾರರು ಬಿಡಿಸಿದ
ಚಿತ್ರ ಸ್ಪಂದನದಲಿ
ವಿಶ್ವಾಮಿತ್ರನ ಮೋಹಪಾಶದಲಿ
ಬಂಧಿಸಿ ಬಡಿದೆಬ್ಬಿಸಿದ ಮೇನಕೆ ಹಾಗೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ – ಸಾಧನಾಭಾವ
Next post ಒಂದು ಹಾಡು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys