ನೆನಪುಗಳು ಮಾಸುವುದಿಲ್ಲ

ನೆನಪುಗಳು ಮಾಸುವುದಿಲ್ಲ
ಹಸಿರಾಗೇ ಉಳಿಯುತ್ತವೆ
ಘೋರ ತಪವನು ಗೈದ
ವಿಶ್ವಾಮಿತ್ರನ ಮೇನಕೆ
ತನ್ನತ್ತ ಸೆಳೆದ ಹಾಗೆ ||

ಕಲೆಗಾರನ ಕುಂಚದಲ್ಲಿ
ನವರಸ ಲಾಸ್ಯವಾಡಿ
ಕವಿದ ಮೋಡಗಳು
ಚಂದ್ರನ ಮರೆಮಾಡಿ
ಗುಡುಗು, ಸಿಡಿಲು, ಮಿಂಚಾದ ಹಾಗೆ ||

ಮುಂಗಾರಿನ ಅನುರಣೀಯ
ಶೃಂಗಾರಗೀತ ರಂಭೆ, ಊರ್ವಶಿ
ತಿಲೋತ್ತಮೆ ನಾಟ್ಯವಾಡಿ
ಬಣ ಗುಟ್ಟಿದ ಧರೆಯು ತಂಪಾಗಿ
ಘಮ್ಮನೆ ಬಿರಿದ ಹಾಗೆ ||

ಹಸಿರಾದ ಬನ ಸಿರಿಯ
ಹೂ ಮನಗಳಲಿ ದುಂಬಿಗಳ
ಝೇಂಕಾರ ಉನ್ಮತ್ತದಿಂ ಒಲಿದ
ಕತ್ತಲು ಬೆಳಕಿನ ಸಿಂಚನ
ದೊಲುಮೆಯಲಿ ನಲಿದ ಹಾಗೆ ||

ವರುಷ ಹರುಷ ಕಲೆತ
ಸಾಮ್ಯತೆಯ ಗೀಳಿನ
ಹಕ್ಕಿಯ ಮಾನವತೆಯ
ಬಯಕೆಗಳ ಸಾಕಾರಕೆ
ಇಳೆಗೆ ಇಳಿದು ಉಲಿದ ಹಾಗೆ ||

ಸೆರೆ ಸಿಕ್ಕ ಪಂಜರದ ಹಕ್ಕಿ
ಸ್ವತಂತ್ರಕ್ಕಾಗಿ ಹಪಹಪಿಸಿ
ಎಂದೋ ಕಳೆದು ಹೋದ
ಇನಿಯನ ಮನವ ಹೊಕ್ಕು
ಪ್ರೀತಿಯ ಹುಡುಕುವ ಹಾಗೆ ||

ಕಲೆಗಾರರು ಬಿಡಿಸಿದ
ಚಿತ್ರ ಸ್ಪಂದನದಲಿ
ವಿಶ್ವಾಮಿತ್ರನ ಮೋಹಪಾಶದಲಿ
ಬಂಧಿಸಿ ಬಡಿದೆಬ್ಬಿಸಿದ ಮೇನಕೆ ಹಾಗೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ – ಸಾಧನಾಭಾವ
Next post ಒಂದು ಹಾಡು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…