ನೆನಪುಗಳು ಮಾಸುವುದಿಲ್ಲ

ನೆನಪುಗಳು ಮಾಸುವುದಿಲ್ಲ
ಹಸಿರಾಗೇ ಉಳಿಯುತ್ತವೆ
ಘೋರ ತಪವನು ಗೈದ
ವಿಶ್ವಾಮಿತ್ರನ ಮೇನಕೆ
ತನ್ನತ್ತ ಸೆಳೆದ ಹಾಗೆ ||

ಕಲೆಗಾರನ ಕುಂಚದಲ್ಲಿ
ನವರಸ ಲಾಸ್ಯವಾಡಿ
ಕವಿದ ಮೋಡಗಳು
ಚಂದ್ರನ ಮರೆಮಾಡಿ
ಗುಡುಗು, ಸಿಡಿಲು, ಮಿಂಚಾದ ಹಾಗೆ ||

ಮುಂಗಾರಿನ ಅನುರಣೀಯ
ಶೃಂಗಾರಗೀತ ರಂಭೆ, ಊರ್ವಶಿ
ತಿಲೋತ್ತಮೆ ನಾಟ್ಯವಾಡಿ
ಬಣ ಗುಟ್ಟಿದ ಧರೆಯು ತಂಪಾಗಿ
ಘಮ್ಮನೆ ಬಿರಿದ ಹಾಗೆ ||

ಹಸಿರಾದ ಬನ ಸಿರಿಯ
ಹೂ ಮನಗಳಲಿ ದುಂಬಿಗಳ
ಝೇಂಕಾರ ಉನ್ಮತ್ತದಿಂ ಒಲಿದ
ಕತ್ತಲು ಬೆಳಕಿನ ಸಿಂಚನ
ದೊಲುಮೆಯಲಿ ನಲಿದ ಹಾಗೆ ||

ವರುಷ ಹರುಷ ಕಲೆತ
ಸಾಮ್ಯತೆಯ ಗೀಳಿನ
ಹಕ್ಕಿಯ ಮಾನವತೆಯ
ಬಯಕೆಗಳ ಸಾಕಾರಕೆ
ಇಳೆಗೆ ಇಳಿದು ಉಲಿದ ಹಾಗೆ ||

ಸೆರೆ ಸಿಕ್ಕ ಪಂಜರದ ಹಕ್ಕಿ
ಸ್ವತಂತ್ರಕ್ಕಾಗಿ ಹಪಹಪಿಸಿ
ಎಂದೋ ಕಳೆದು ಹೋದ
ಇನಿಯನ ಮನವ ಹೊಕ್ಕು
ಪ್ರೀತಿಯ ಹುಡುಕುವ ಹಾಗೆ ||

ಕಲೆಗಾರರು ಬಿಡಿಸಿದ
ಚಿತ್ರ ಸ್ಪಂದನದಲಿ
ವಿಶ್ವಾಮಿತ್ರನ ಮೋಹಪಾಶದಲಿ
ಬಂಧಿಸಿ ಬಡಿದೆಬ್ಬಿಸಿದ ಮೇನಕೆ ಹಾಗೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ – ಸಾಧನಾಭಾವ
Next post ಒಂದು ಹಾಡು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…