ಇದು ಮೊದಲು

ಪ್ರಿಯ ಸಖಿ
ಅನ್ನವನು ಕೊಡು ಮೊದಲು
ಬಟ್ಟೆಯನು ಕೊಂಡು ಉಡಲು
ಕಟ್ಟಿಕೊಡು ಮನೆಗಳನು
ಬಳಿಕ ನೀನು ಕವಿಯಾಗಿ ಬಾ
ನೀತಿವಿದನಾಗಿ ಬಾ
ಶಾಸ್ತ್ರಿಯಾಗಿ ಧಾರ್ಮಿಕನಾಗಿ
ಮನುಜಕತೆಯನು ಕಲಿಸು ಬಾ
ಇವನದನು ಕಲಿಯ ಬಲ್ಲ!
ಇದು ಮೊದಲು ಆಮೇಲೆ ಉಳಿದುದೆಲ್ಲ!
ಗೋಪಾಲಕೃಷ್ಣ ಅಡಿಗರ ‘ಇದು ಮೊದಲು’ ಕವನದ ಈ ಕೊನೆಯ ಸಾಲುಗಳು ಮನವನ್ನು ಹೊಕ್ಕು ಎಷ್ಟೊಂದು ಆಳವಾಗಿ ತಟ್ಟುತ್ತವೆಯಲ್ಲವೇ ಸಖಿ? ಶಾಸ್ತ್ರ,  ನೀತಿ, ತತ್ವ, ಮೌಲ್ಯ, ಕಾನೂನು, ಮಾನವೀಯತೆ ಎಷ್ಟೆಲ್ಲಾ ಬುದ್ದಿ ಹೇಳಲು ತಯಾರಾಗಿದ್ದೇವೆ ನಾವು! ಆದರೆ ಹಸಿದ ಹೊಟ್ಟೆಗೆ ಅನ್ನ ನೀಡದೇ, ಮೈ ಮುಚ್ಚಲು ಬಟ್ಟೆ ಕೊಡದೇ, ಸುರಕ್ಷಿತವಾಗಿರಲು ಮನೆಯ ನೀಡದೇ ಏನು ಹೇಳಿದರೇನು? ಎಲ್ಲ ವ್ಯರ್ಥ ಎನ್ನುತ್ತಾರೆ ಕವಿ.

ಹಸಿದ ಹೊಟ್ಟೆಯ ಮುಂದೆ, ಬದುಕಿಗೆ ಬೇಕೇಬೇಕಾದ ಕೆಲವೊಂದು ಮೂಲಭೂತ ಅವಶ್ಶಕತೆಗಳ ಮುಂದೆ ಯಾವುದೇ ನೀತಿ-ತತ್ವಗಳೂ ಬೆಲೆಯಿಲ್ಲದ್ದಾಗುತ್ತದೆ. ಹೇಗಾದರೂ ಸರಿ ಏನು ಮಾಡಿಯಾದರೂ ಸರಿ ಹೊಟ್ಟೆ ತುಂಬಿಸಿಕೊಳ್ಳುವದು, ತನ್ಮೂಲಕ ಬದುಕುಳಿಯುವುದು ಹಸಿದವನ ಗುರಿಯಾಗಿರುತ್ತದೆ. ಅಲ್ಲಿ ಯಾವುದೇ ನೀತಿ-ನಿಯಮವೂ ಅವನನ್ನು ಎಚ್ಚರಿಸುವುದಿಲ್ಲ.

ಸಖಿ, ಇಂದಿನ ಸಮಾಜದ ಭ್ರಷ್ಟತೆಗೆ ಮೂಲ ಕಾರಣವೂ ಹಸಿವೇ ಆಗಿದೆ ಎಂಬುದು ಸಮಾಜವಾದಿಗಳ ನಿಲುವು. ಹಸಿವು ಹಿಂಗದ ಲಕ್ಷಾಂತರ ಒಡಲುಗಳು ಯಾವ ಕೀಳು ಮಟ್ಟಕ್ಕಾದರೂ ಇಳಿದು ಹಸಿವು ಹಿಂಗಿಸಿಕೊಳ್ಳಲು ಹಾತೊರೆಯುತ್ತವೆ. ಅದಕ್ಕೆಂದೇ ಕವಿ ಶೇಕ್ಸ್‍ಪಿಯರ್ “ಹಸಿವು ಎಲ್ಲವನ್ನೂ ಕಲಿಸುತ್ತದೆ” ಎನ್ನುತ್ತಾನೆ. ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಮನುಷ್ಯನ ಮೂಲಭೂತ ಅವಶ್ಶಕತೆಗಳನ್ನು ಪೂರೈಸಬೇಕು. ನಂತರವಷ್ಟೇ ನೀತಿ, ಕಾನೂನು, ಧರ್ಮ, ಕಲೆ, ಮಾನವೀಯತೆ ಇತ್ಯಾದಿ ಅವನಿಗೆ ಅರ್ಥವಾದಾವು. ಈ ಕುರಿತು ನಿನ್ನ ನಿಲುವೇನು ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡೋರೆಲ್ಲಾ ಅದೇ ರೀತಿ
Next post ಆದರ್ಶಕ್ಕೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys