Home / ಲೇಖನ / ಇತರೆ / ಇದು ಮೊದಲು

ಇದು ಮೊದಲು

ಪ್ರಿಯ ಸಖಿ
ಅನ್ನವನು ಕೊಡು ಮೊದಲು
ಬಟ್ಟೆಯನು ಕೊಂಡು ಉಡಲು
ಕಟ್ಟಿಕೊಡು ಮನೆಗಳನು
ಬಳಿಕ ನೀನು ಕವಿಯಾಗಿ ಬಾ
ನೀತಿವಿದನಾಗಿ ಬಾ
ಶಾಸ್ತ್ರಿಯಾಗಿ ಧಾರ್ಮಿಕನಾಗಿ
ಮನುಜಕತೆಯನು ಕಲಿಸು ಬಾ
ಇವನದನು ಕಲಿಯ ಬಲ್ಲ!
ಇದು ಮೊದಲು ಆಮೇಲೆ ಉಳಿದುದೆಲ್ಲ!
ಗೋಪಾಲಕೃಷ್ಣ ಅಡಿಗರ ‘ಇದು ಮೊದಲು’ ಕವನದ ಈ ಕೊನೆಯ ಸಾಲುಗಳು ಮನವನ್ನು ಹೊಕ್ಕು ಎಷ್ಟೊಂದು ಆಳವಾಗಿ ತಟ್ಟುತ್ತವೆಯಲ್ಲವೇ ಸಖಿ? ಶಾಸ್ತ್ರ,  ನೀತಿ, ತತ್ವ, ಮೌಲ್ಯ, ಕಾನೂನು, ಮಾನವೀಯತೆ ಎಷ್ಟೆಲ್ಲಾ ಬುದ್ದಿ ಹೇಳಲು ತಯಾರಾಗಿದ್ದೇವೆ ನಾವು! ಆದರೆ ಹಸಿದ ಹೊಟ್ಟೆಗೆ ಅನ್ನ ನೀಡದೇ, ಮೈ ಮುಚ್ಚಲು ಬಟ್ಟೆ ಕೊಡದೇ, ಸುರಕ್ಷಿತವಾಗಿರಲು ಮನೆಯ ನೀಡದೇ ಏನು ಹೇಳಿದರೇನು? ಎಲ್ಲ ವ್ಯರ್ಥ ಎನ್ನುತ್ತಾರೆ ಕವಿ.

ಹಸಿದ ಹೊಟ್ಟೆಯ ಮುಂದೆ, ಬದುಕಿಗೆ ಬೇಕೇಬೇಕಾದ ಕೆಲವೊಂದು ಮೂಲಭೂತ ಅವಶ್ಶಕತೆಗಳ ಮುಂದೆ ಯಾವುದೇ ನೀತಿ-ತತ್ವಗಳೂ ಬೆಲೆಯಿಲ್ಲದ್ದಾಗುತ್ತದೆ. ಹೇಗಾದರೂ ಸರಿ ಏನು ಮಾಡಿಯಾದರೂ ಸರಿ ಹೊಟ್ಟೆ ತುಂಬಿಸಿಕೊಳ್ಳುವದು, ತನ್ಮೂಲಕ ಬದುಕುಳಿಯುವುದು ಹಸಿದವನ ಗುರಿಯಾಗಿರುತ್ತದೆ. ಅಲ್ಲಿ ಯಾವುದೇ ನೀತಿ-ನಿಯಮವೂ ಅವನನ್ನು ಎಚ್ಚರಿಸುವುದಿಲ್ಲ.

ಸಖಿ, ಇಂದಿನ ಸಮಾಜದ ಭ್ರಷ್ಟತೆಗೆ ಮೂಲ ಕಾರಣವೂ ಹಸಿವೇ ಆಗಿದೆ ಎಂಬುದು ಸಮಾಜವಾದಿಗಳ ನಿಲುವು. ಹಸಿವು ಹಿಂಗದ ಲಕ್ಷಾಂತರ ಒಡಲುಗಳು ಯಾವ ಕೀಳು ಮಟ್ಟಕ್ಕಾದರೂ ಇಳಿದು ಹಸಿವು ಹಿಂಗಿಸಿಕೊಳ್ಳಲು ಹಾತೊರೆಯುತ್ತವೆ. ಅದಕ್ಕೆಂದೇ ಕವಿ ಶೇಕ್ಸ್‍ಪಿಯರ್ “ಹಸಿವು ಎಲ್ಲವನ್ನೂ ಕಲಿಸುತ್ತದೆ” ಎನ್ನುತ್ತಾನೆ. ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಮನುಷ್ಯನ ಮೂಲಭೂತ ಅವಶ್ಶಕತೆಗಳನ್ನು ಪೂರೈಸಬೇಕು. ನಂತರವಷ್ಟೇ ನೀತಿ, ಕಾನೂನು, ಧರ್ಮ, ಕಲೆ, ಮಾನವೀಯತೆ ಇತ್ಯಾದಿ ಅವನಿಗೆ ಅರ್ಥವಾದಾವು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್