ಕನಸುಗಳು

ಕನಸುಗಳು

“ಕನಸು” ನಮ್ಮ ನಿದ್ರೆಯ ಅವಿಭಾಜ್ಯ ಅಂಗ. ಮಿದುಳಿನ ಹೈಪೋಥಲಮಸ್ ನಿದ್ರೆಯನ್ನು ನಿಯಂತ್ರಿಸುವ ಭಾಗ. ಹೀಗಾಗಿ ಕನಸು ಮೆದುಳಿನ ಚಟುವಟಿಕೆಯಾಗಿದೆ. ನಾವು ಒಂದು ಗಂಟೆ ನಿದ್ರೆ ಮಾಡಿದರೆ ಹತ್ತು ನಿಮಿಷ ಕನಸು ಕಾಣುತ್ತೇವೆ! ಅಂದರೆ ಪ್ರತಿರಾತ್ರಿ ನಾವು ಹತ್ತತ್ತು ನಿಮಿಷಗಳ ಕಾಲ ಐದಾರು ಸಲ ಕನಸು ಕಾಣುತ್ತೇವೆ. ಕನಸುಗಳನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದವರಲ್ಲಿ ಸಿಗ್ಮಂಡ್ ಫ್ರಾಯ್ಡ್ ಪ್ರಮುಖರು. ಇವರ ಪ್ರಕಾರ ನಮ್ಮ ಮನಸ್ಸಿನಲ್ಲಿ ಆಲೋಚನೆಗಳನ್ನು ಮಾಡುವ ಎರಡು ಪ್ರತಿನಿಧಿಗಳಿವೆ. ಒಂದು ಸುಪ್ತ ಮನಸ್ಸಿನಲ್ಲಿ ಇದ್ದರೆ ಇನ್ನೊಂದು ಜಾಗೃತ ಮನಸ್ಸಿನಲ್ಲಿರುತ್ತದೆ. ಒಂದನೆಯದು ಜಾಗೃತ ಮನಸ್ಸಿಗೆ ಬರಬೇಕಾದರೆ ಇನ್ನೊಂದರ ಮೂಲಕವೇ ಹಾದು ಬರಬೇಕು. ಹೀಗೆ ಬರುವಾಗ “ದಂಡ ದಾರಿ”ಯನ್ನೂ ಹಾಯಬೇಕು. ನಮ್ಮ ಜಾಗೃತ ಮನಸ್ಸಿಗೆ ಪಥ್ಯವಾಗದ ಆಲೋಚನೆಗಳನ್ನು ಈ ದಂಡ ದಾರಿ ತಡೆಹಿಡಿದು ಹಿಂದಕ್ಕೆ ಕಳುಹಿಸುತ್ತದೆ. ಈ ರೀತಿ ಹಿಂದಕ್ಕೆ ಹೋದ ಆಲೋಚನೆಗಳು ದಮನ ಸ್ಥಿತಿಯಲ್ಲಿರುತ್ತವೆ. ನಿದ್ರೆಯಲ್ಲಿ ದಂಡ ದಾರಿ ಸ್ವಲ್ಪ ಸಡಿಲವಾಗುತ್ತದೆ. ಆಗ ಈ ಆಲೋಚನೆಗಳು ಮೇಲೇರಿ ಬರುತ್ತವೆ. ಸಡಿಲವಾದರೂ ನಿಯಂತ್ರಣ ಇದ್ದೇ ಇರುವುದರಿಂದ ಆಲೋಚನೆಗಳು ರಾಜಿಮಾಡಿಕೊಂಡು ಬದಲಾದ ರೂಪದೊಂದಿಗೆ ಕನಸಾಗಿ ಕಾಣಿಸಿಕೊಳ್ಳುತ್ತವೆ.

ಕನಸು ಕೇವಲ ದೃಶ್ಯಗಳ ಸರಪಳಿಯಾಗಿರದೆ ಜೀವಂತ ಅನುಭವವಾಗಿದೆ. ಏಕೆಂದರೆ ತಕ್ಕ ಭಾವನೆಗಳ ಸಹಿತ ನಾವು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ ದುಃಖದ ಕನಸು ಬಿದ್ದಾಗ ಬಿಕ್ಕಿಬಿಕ್ಕಿ ಅಳುತ್ತೇವೆ. ಆದರೆ ಶರೀರ ನಿಷ್ಕ್ರಿಯವಾಗಿರುತ್ತದೆ. ಕೈಕಾಲುಗಳು ಚಲಿಸಲಾಗುವ ದಿಲ್ಲ. ಹೃದಯದ ಬಡಿತ, ರಕ್ತದೊತ್ತಡ, ಉಸಿರಾಟಗಳು ಏರುಪೇರಾಗುತ್ತವೆ.

ಕನಸುಗಳು ನಮ್ಮ ಮನಸ್ಥಿತಿಯ ಕನ್ನಡಿ. ಮನಸ್ಸು ಸಮಾಧಾನ, ಸಂತೃಪ್ತಿಯಲ್ಲಿದ್ದಾಗ ಬೀಳುವ ಕನಸೇ ಬೇರೆ. ಗಾಬರಿ, ಭಯ, ದುಃಖದಿಂದ ಕೂಡಿರುವಾಗ ಬೀಳುವ ಕನಸೇ ಬೇರೆ.

ನಮಗೆ ಬೀಳುವ ಹೆಚ್ಚಿನ ಕನಸುಗಳು ವರ್ಣಮಯ. ಕೆಲವು ಸಲ ಕಪ್ಪು-ಬಿಳುಪು ಅಥವಾ ಬೂದುಬಣ್ಣದ ಕನಸುಗಳು ಬೀಳಬಹುದು.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎನಗ್ಯಾಕೆ ಕಾವ್ಯದ ಹಂಗು ?
Next post ಅವ್ವ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys