ಕನ್ನಡವೆ ಆತ್ಮ

ಕನ್ನಡವೆ ಆತ್ಮ
ಕರ್ನಾಟಕ ದೇಹ
ಬಿದ್ದರೆ ಚೂರಿ ದೇಹಕ್ಕೆ
ಆತ್ಮಕೆ ಯಾವುದು ಗೇಹ?
ನೀ ಹೇಳಬೇಕು ಕನ್ನಡಿಗ
ದಿಟ್ಟಿಸಿ ನೋಡುತ ಈ ಜಗ ||

ಪ್ರತಿ ಕನ್ನಡಿಗರ ಮನೆ ಮೇಲೆ
ಹಾರಿದೆ ಕನ್ನಡ ಬಾವುಟವು
ಆ ಬಾವುಟದ ನೆರಳಿನಲಿ
ಮಕ್ಕಳು ಇಂಗ್ಲಿಷ್ ಕಾನ್ವೆಂಟು
ಎಲ್ಲರಿಗೂ ಬೇಕಿಲ್ಲಿ
ಮಲಗೋವಾ ಮಾವು
ಬಿತ್ತಿದ ಬೀಜ ನಗುತ್ತಿದೆ
ತನ್ನ ಜಾತಿ ಬೇವು

ಆಗಿದೆ ರಾಜ್ಯೋತ್ಸವ ಈಗ
ಎಲ್ಲೆಡೆಯೂ ನಿತ್ಯೋತ್ಸವ
ಬಾಜಾ ಭಜಂತ್ರಿ ಸಮ್ಮೇಳನಗಳು
ಜುಟ್ಟಿಗೆ ಮಲ್ಲಿಗೆ ಉತ್ಸಾಹ
ಕನ್ನಡಾಂಬೆ ಕಣ್ಣಲ್ಲಿ
ಕೋಡಿವರಿದಿದೆ ನೀರು
ನೆರೆಯೂರಲಿ ಸೋದರಿಯರು
ತನಗೆ ದಿಕ್ಕು ಯಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಟ್ಟಿ
Next post ಆನುದೇವಾ ಹೊರಗಣವನು : ನನ್ನ ವರದಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…