ಮುಂದೆ ಸಾಗುವ ಮುನ್ನ

ಮುಂದೆ ಸಾಗುವ ಮುನ್ನ
ಹಿಂದೆ ನೋಡಬಾರದೆ ಒಮ್ಮೆ
ನದಿಯಲ್ಲವೇ ನಾನು
ತುದಿಯಲ್ಲಿರುವೆ ನೀನು
ನಿಲ್ಲು ನಿಲ್ಲು ನೀ ನನ್ನ ಮಗಳೆ…

ಹಿಟ್ಟು-ರೊಟ್ಟಿಯ ಸುಡುತ
ಹರಕೆ-ಮುಡಿಪುಗಳನಿಡುತ
ತಿಳಿದ ಹಾಡುಗಳ ಹಾಡಿ
ನೂರು ದೇವರ ಕಾಡಿ
ನಿನ್ನ ಪಡೆದೆ

ಉಟ್ಟ ಸೀರೆಯೇ ಮೂರು
ಹಣೆಗೆ ಕುಂಕುಮದ ಚೂರು
ಎದೆಗವಚಿಕೊಂಡೇ ನಿನ್ನ
ರಂಗೋಲೆಯ ಬರೆದೆ

ದೇಶ ನೋಡಲೇ ಇಲ್ಲ
ಕೋಶ ಓದಲೇ ಇಲ್ಲ
ಕಾಡ ಕಣಗಿಲೆ ನಾನು
ಚಿಗುರು ಕೆಂಪೆಲೆ ನೀನು
ಆಚೆ ದಡದಲ್ಲೇನಿದೆಯೋ
ನಾನೇನು ಬಲ್ಲೆ?

ನಿನ್ನ ಆಶೆಯೇ ಬೇರೆ
ನನ್ನ ಭಾಷೆಯ ಬೇರೆ
ಬೇರಲ್ಲವೇ ನಾನು
ಹೂವಲ್ಲವೇ ನೀನು
ತಿರುಗಿ ನೋಡೊಮ್ಮೆ ನನ್ನ ಮಗಳೆ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೪
Next post ದಂಡ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…