ಬಲವಂತ

ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ
ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ!
ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ!

ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು
ನಿನ್ನಿಂದ ಲಪಟಾಯಿಸುವ ಕನಸು ಕಂಡಿದ್ದೆ ನಾನ-
ನನ್ನ ದುಃಖ ಮತ್ತಷ್ಟು ಉಪ್ಪು-ಮೊನಚಾಗಿ
ಬೆಳೆದ ಮಗುವಿನಂಥ ನನ್ನ ಅಳು ಎಲ್ಲರಿಗೆ ತಾಗಲೆಂದು.

ಪುರಾತನ ನಿಘಂಟಿನ ಮಾಸಿದ ಪುಟಗಳ
ಸವೆದ ಪದಗಳಷ್ಟೇ ನನ್ನ ಸಂಪತ್ತು.
ಅಪರೂಪಕ್ಕೊಮ್ಮೆ ಒಲುಮೆ ಮಿಂಚಲ್ಲಿ ಮಿನುಗಿದ್ದ ಮಾತು
ಈಗ ನಿಶ್ಯಕ್ತವಾಗಿ ಗೋಳಿನ ಅಲಂಕಾರವಾಗಿದೆ.
ಈ ಪದಗಳು, ಎಂಟಾಣೆಗೆ ಸೆರೆಗು ತೆರೆವ ಬೀದಿ ಸೂಳೆಯರು.
ಈ ಪದಗಳು, ತಟ್ಟಾಡುವ ಸುಸ್ತಾದ ನುಡಿಗಟ್ಟುಗಳು.
ಮಂತ್ರಿಗಳು, ರೌಡಿಗಳು, ಗೈಡು ಬರೆಯುವವರು,
ಕುಕವಿಗಳು ನಾಳೆಯೇ ಇವನ್ನೂ ಕದ್ದುಬಿಟ್ಟಾರು.

ನಿನ್ನಮೊರೆತ, ನಿನ್ನ ಆರ್ಭಟ ಏರಿದೆ.
ಸಾಗರ ನೀಲಿಯ ಮೇಲೆ ಹೊಸ ನೆರಳು ಆಡಿದೆ.
ಭಾವ ನನ್ನೆ ಬಿಟ್ಟು ತೆರಳಿದೆ.
ರೂಪವಿಲ್ಲ, ಸ್ಪರ್ಶವಿಲ್ಲ, ಗಂಧವಿಲ್ಲ, ರುಚಿಯಿಲ್ಲ.
ಇಲ್ಲ, ಅರ್ಥವೂ ಇಲ್ಲ, ನನಗೆ ಸೀಮೆಯೂ ಇಲ್ಲ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯಸಿ ಬಂದೆ
Next post ತುಳಿತಕ್ಕೊಳಗಾದವರು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…