ತುಟಿಯಂಚಿನ ಜೊಲ್ಲಲ್ಲಿ
ನಕ್ಷತ್ರಗಳ ನಗ್ನ ಚಿತ್ರ
ಮಾಯಕದ ದಂಡೆಯೇ ಮುಡಿಗೇರಿದೆ.
ಬೆರಳಿಂದ ಬೆರಳಿಗೆ
ಹೊಕ್ಕಳಿಂದ ಹೊಕ್ಕಳಿಗೆ
ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ.
ಇರುಳ ಹೊಳಪಿಗೆ
ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು
ಕಪ್ಪುರಂಧ್ರದ ಒಳಹೊಕ್ಕವು
ಕಾಲದ ಅರಿವಿಲ್ಲ
ಕನ್ನಡಿಯಲ್ಲಿ ಅಮೋಘ ಘಮ ಘಮದ
ಹೂಗಳು.
ಗಾಳಿಯನ್ನೆ ಹೊದ್ದ ಹಾದಿ
ಜೀವ ಉಸಿರ ಚೆಲುವಿಗೆ
ನಿತಾಂತ ನಡೆಯುತ್ತಲೇ ಇದೆ.
ಲೋಕದ ನಿನಾದಗಳೆಲ್ಲಾ
ಆ ನುಡಿವಣ್ಣನ ನಾಸಿಕದ ತುದಿಯಲ್ಲಿದೆ.
ಮಂದ್ರ ಸ್ಥಾಯಿಯಲ್ಲಿ ಎದೆಗೋಣೆಯ
ಕವಾಟ ಸರಿಸಿ ಗುನುಗುತ್ತಿದ್ದಾಳೆ ಆಕೆ.
ಹೇ… ಕೃಷ್ಣಾ.. ಮುರಾರಿ..
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.