ನಗ್ನ ನಕ್ಷತ್ರ

ತುಟಿಯಂಚಿನ ಜೊಲ್ಲಲ್ಲಿ
ನಕ್ಷತ್ರಗಳ ನಗ್ನ ಚಿತ್ರ
ಮಾಯಕದ ದಂಡೆಯೇ ಮುಡಿಗೇರಿದೆ.
ಬೆರಳಿಂದ ಬೆರಳಿಗೆ
ಹೊಕ್ಕಳಿಂದ ಹೊಕ್ಕಳಿಗೆ
ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ.

ಇರುಳ ಹೊಳಪಿಗೆ
ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು
ಕಪ್ಪುರಂಧ್ರದ ಒಳಹೊಕ್ಕವು
ಕಾಲದ ಅರಿವಿಲ್ಲ
ಕನ್ನಡಿಯಲ್ಲಿ ಅಮೋಘ ಘಮ ಘಮದ
ಹೂಗಳು.

ಗಾಳಿಯನ್ನೆ ಹೊದ್ದ ಹಾದಿ
ಜೀವ ಉಸಿರ ಚೆಲುವಿಗೆ
ನಿತಾಂತ ನಡೆಯುತ್ತಲೇ ಇದೆ.
ಲೋಕದ ನಿನಾದಗಳೆಲ್ಲಾ
ಆ ನುಡಿವಣ್ಣನ ನಾಸಿಕದ ತುದಿಯಲ್ಲಿದೆ.
ಮಂದ್ರ ಸ್ಥಾಯಿಯಲ್ಲಿ ಎದೆಗೋಣೆಯ
ಕವಾಟ ಸರಿಸಿ ಗುನುಗುತ್ತಿದ್ದಾಳೆ ಆಕೆ.
ಹೇ… ಕೃಷ್ಣಾ.. ಮುರಾರಿ..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೨
Next post ಮುಸ್ಸಂಜೆಯ ಮಿಂಚು – ೧೯

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys