ಸುಗ್ಗಿಯ ಕುಣಿತದ ಕೋಲಾಟ

ಟಗರನು ಕೂಡಲು ಗೂಳಿಯು ಬಂದು
ಚಿಗುರಿದ ಬೇವಿಗೆ ಬೆಲ್ಲವು ಸಂದು

ಸಾಗಿತು ಕರಗವು ಕಬ್ಬಿನ ಗಾಣ
ಈಗೀಗ ಹೊರಟಿವೆ ಹುಬ್ಬಿನ ಕಂಪು

ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ
|| ಹುಯ್ಯೋ ಹುಯ್ಯೋ, ಹುವ್ವಿನ ಕೋಲ |

ಅವಳಿಯ ಕೂಟವ ನಳ್ಳಿಯು ನೋಡೆ
ಜವದೊಳು ಬಂದಿತು ವಡ್ಡಂತಿಯೂಟ

ಧಾವತಿಯಿತ್ತವು ಬಿತ್ತನೆ ಬೇಗೆ
ಭಾವಿಸಿ ಬಂದಿತು ಮುಂಗಾರ ಮಿಂಚು

ಹುಯ್ಯೋ, ಹುಯ್ಯೋ, ಪಾನಕ ಮಜ್ಜಿಗೆ
|| ಹುಯ್ಯೋ, ಹುಯ್ಯೋ, ಗಂಗೆಯ ಕೋಲ ||

ಓಡಲು ಅಂಗನೆ ಸಿಂಗನ ಮುಂದೆ
ಆಡಲು ಅಂಗಳದೆಲ್ಲೆಲ್ಲ ಗಂಗೆ

ಕಾಡಿಸೆ ಪಡುವಣ ಮೋಡವ ಸಿಡಿಲು
ಆಡಿತು ಭಾದ್ರದ ಮುಡಿಯೆಲ್ಲ ಸಡಲಿ

ಸುಯ್ಯೋ, ಸುಯ್ಯೋ, ಜಡಿಮಳೆ ಸುಯ್ಯೋ
|| ಹುಯ್ಯಲು ಜಡಿಮಳೆ ಹುಯ್ಯರಿ ಕೋಲ ||

ತಕ್ಕಡಿ ಯಾಡಿಸೆ ಚೇಳಿನ ಕೊಂಡಿ
ವಕ್ಕಲ ಮಕ್ಕಳ ಬೊಕ್ಕಸ ಬಿರಿಯೆ

ಜೋಕು ದೀಪಾವಳಿ ಅಂಬಿನ ನೌಮಿ
ಹಾಕು ಚಾಮುಂಡಿಗೆ ಹಣ್ಣಿನ ದೌನ

ಹುಯ್ಯೋ, ದೀಪ ಸಹಸ್ರಕೆ ಹುಯ್ಯೋ
|| ಹುಯ್ಯೋ ಭಾವ ! ಬನ್ನಿಯ ಕೋಲ ||

ಬಿಲ್ಲೆದ್ದು ಬಾಗಲು ಹೋತನ ಮುಂದೆ
ಎಲ್ಲ ಮಂದೇವರು ಹತ್ತಿತು ತೇರ

ವಾಲಾಡುತಿತ್ತಲೆ ಪರಿಷೆಗೆ ಬಾರೋ
ತೇಲಾಡಿದಾಮೋಡವೆಲ್ಲಿದೆ ನೋಡೋ

ತುಯ್ಯೋ, ತುಯ್ಯೋ, ತೇರಿನ ಮಿಣಿಯ
|| ಹುಯ್ಯೋ ಹುಯ್ಯೋ, ದೇವರ ಕೋಲ ||

ಮಡಕೆಯಲಾಡಲು ಮೀನಿನ ಬಾಲ
ಮೃಡನವ ತಪಸಲಿ ಕೂರುವ ಕಾಲ

ಕಾಡುವ ಮಾಗಿಗೆ ಧಾವಳಿ ಜೋಡಿ
ಜೋಡು ಕಂಗ್ಗಂಬಳಿ ಕಾಮನ ದಿನಕೆ

ಕಾಯೋ ಕಾಯೋ ಕಾಮನ ಬೆಂಕಿ
|| ಹುಯ್ಯೋ ಹುಯ್ಯೋ, ಭಾಗ್ಯದ ಕೋಲ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಒಲವೇ
Next post ಅಲಂಕರಿಸಿವೆ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys