Home / ಕವನ / ಕೋಲಾಟ / ಸುಗ್ಗಿಯ ಕುಣಿತದ ಕೋಲಾಟ

ಸುಗ್ಗಿಯ ಕುಣಿತದ ಕೋಲಾಟ

ಟಗರನು ಕೂಡಲು ಗೂಳಿಯು ಬಂದು
ಚಿಗುರಿದ ಬೇವಿಗೆ ಬೆಲ್ಲವು ಸಂದು

ಸಾಗಿತು ಕರಗವು ಕಬ್ಬಿನ ಗಾಣ
ಈಗೀಗ ಹೊರಟಿವೆ ಹುಬ್ಬಿನ ಕಂಪು

ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ
|| ಹುಯ್ಯೋ ಹುಯ್ಯೋ, ಹುವ್ವಿನ ಕೋಲ |

ಅವಳಿಯ ಕೂಟವ ನಳ್ಳಿಯು ನೋಡೆ
ಜವದೊಳು ಬಂದಿತು ವಡ್ಡಂತಿಯೂಟ

ಧಾವತಿಯಿತ್ತವು ಬಿತ್ತನೆ ಬೇಗೆ
ಭಾವಿಸಿ ಬಂದಿತು ಮುಂಗಾರ ಮಿಂಚು

ಹುಯ್ಯೋ, ಹುಯ್ಯೋ, ಪಾನಕ ಮಜ್ಜಿಗೆ
|| ಹುಯ್ಯೋ, ಹುಯ್ಯೋ, ಗಂಗೆಯ ಕೋಲ ||

ಓಡಲು ಅಂಗನೆ ಸಿಂಗನ ಮುಂದೆ
ಆಡಲು ಅಂಗಳದೆಲ್ಲೆಲ್ಲ ಗಂಗೆ

ಕಾಡಿಸೆ ಪಡುವಣ ಮೋಡವ ಸಿಡಿಲು
ಆಡಿತು ಭಾದ್ರದ ಮುಡಿಯೆಲ್ಲ ಸಡಲಿ

ಸುಯ್ಯೋ, ಸುಯ್ಯೋ, ಜಡಿಮಳೆ ಸುಯ್ಯೋ
|| ಹುಯ್ಯಲು ಜಡಿಮಳೆ ಹುಯ್ಯರಿ ಕೋಲ ||

ತಕ್ಕಡಿ ಯಾಡಿಸೆ ಚೇಳಿನ ಕೊಂಡಿ
ವಕ್ಕಲ ಮಕ್ಕಳ ಬೊಕ್ಕಸ ಬಿರಿಯೆ

ಜೋಕು ದೀಪಾವಳಿ ಅಂಬಿನ ನೌಮಿ
ಹಾಕು ಚಾಮುಂಡಿಗೆ ಹಣ್ಣಿನ ದೌನ

ಹುಯ್ಯೋ, ದೀಪ ಸಹಸ್ರಕೆ ಹುಯ್ಯೋ
|| ಹುಯ್ಯೋ ಭಾವ ! ಬನ್ನಿಯ ಕೋಲ ||

ಬಿಲ್ಲೆದ್ದು ಬಾಗಲು ಹೋತನ ಮುಂದೆ
ಎಲ್ಲ ಮಂದೇವರು ಹತ್ತಿತು ತೇರ

ವಾಲಾಡುತಿತ್ತಲೆ ಪರಿಷೆಗೆ ಬಾರೋ
ತೇಲಾಡಿದಾಮೋಡವೆಲ್ಲಿದೆ ನೋಡೋ

ತುಯ್ಯೋ, ತುಯ್ಯೋ, ತೇರಿನ ಮಿಣಿಯ
|| ಹುಯ್ಯೋ ಹುಯ್ಯೋ, ದೇವರ ಕೋಲ ||

ಮಡಕೆಯಲಾಡಲು ಮೀನಿನ ಬಾಲ
ಮೃಡನವ ತಪಸಲಿ ಕೂರುವ ಕಾಲ

ಕಾಡುವ ಮಾಗಿಗೆ ಧಾವಳಿ ಜೋಡಿ
ಜೋಡು ಕಂಗ್ಗಂಬಳಿ ಕಾಮನ ದಿನಕೆ

ಕಾಯೋ ಕಾಯೋ ಕಾಮನ ಬೆಂಕಿ
|| ಹುಯ್ಯೋ ಹುಯ್ಯೋ, ಭಾಗ್ಯದ ಕೋಲ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...