Home / ಕವನ / ಕೋಲಾಟ / ಸುಗ್ಗಿಯ ಕುಣಿತದ ಕೋಲಾಟ

ಸುಗ್ಗಿಯ ಕುಣಿತದ ಕೋಲಾಟ

ಟಗರನು ಕೂಡಲು ಗೂಳಿಯು ಬಂದು
ಚಿಗುರಿದ ಬೇವಿಗೆ ಬೆಲ್ಲವು ಸಂದು

ಸಾಗಿತು ಕರಗವು ಕಬ್ಬಿನ ಗಾಣ
ಈಗೀಗ ಹೊರಟಿವೆ ಹುಬ್ಬಿನ ಕಂಪು

ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ
|| ಹುಯ್ಯೋ ಹುಯ್ಯೋ, ಹುವ್ವಿನ ಕೋಲ |

ಅವಳಿಯ ಕೂಟವ ನಳ್ಳಿಯು ನೋಡೆ
ಜವದೊಳು ಬಂದಿತು ವಡ್ಡಂತಿಯೂಟ

ಧಾವತಿಯಿತ್ತವು ಬಿತ್ತನೆ ಬೇಗೆ
ಭಾವಿಸಿ ಬಂದಿತು ಮುಂಗಾರ ಮಿಂಚು

ಹುಯ್ಯೋ, ಹುಯ್ಯೋ, ಪಾನಕ ಮಜ್ಜಿಗೆ
|| ಹುಯ್ಯೋ, ಹುಯ್ಯೋ, ಗಂಗೆಯ ಕೋಲ ||

ಓಡಲು ಅಂಗನೆ ಸಿಂಗನ ಮುಂದೆ
ಆಡಲು ಅಂಗಳದೆಲ್ಲೆಲ್ಲ ಗಂಗೆ

ಕಾಡಿಸೆ ಪಡುವಣ ಮೋಡವ ಸಿಡಿಲು
ಆಡಿತು ಭಾದ್ರದ ಮುಡಿಯೆಲ್ಲ ಸಡಲಿ

ಸುಯ್ಯೋ, ಸುಯ್ಯೋ, ಜಡಿಮಳೆ ಸುಯ್ಯೋ
|| ಹುಯ್ಯಲು ಜಡಿಮಳೆ ಹುಯ್ಯರಿ ಕೋಲ ||

ತಕ್ಕಡಿ ಯಾಡಿಸೆ ಚೇಳಿನ ಕೊಂಡಿ
ವಕ್ಕಲ ಮಕ್ಕಳ ಬೊಕ್ಕಸ ಬಿರಿಯೆ

ಜೋಕು ದೀಪಾವಳಿ ಅಂಬಿನ ನೌಮಿ
ಹಾಕು ಚಾಮುಂಡಿಗೆ ಹಣ್ಣಿನ ದೌನ

ಹುಯ್ಯೋ, ದೀಪ ಸಹಸ್ರಕೆ ಹುಯ್ಯೋ
|| ಹುಯ್ಯೋ ಭಾವ ! ಬನ್ನಿಯ ಕೋಲ ||

ಬಿಲ್ಲೆದ್ದು ಬಾಗಲು ಹೋತನ ಮುಂದೆ
ಎಲ್ಲ ಮಂದೇವರು ಹತ್ತಿತು ತೇರ

ವಾಲಾಡುತಿತ್ತಲೆ ಪರಿಷೆಗೆ ಬಾರೋ
ತೇಲಾಡಿದಾಮೋಡವೆಲ್ಲಿದೆ ನೋಡೋ

ತುಯ್ಯೋ, ತುಯ್ಯೋ, ತೇರಿನ ಮಿಣಿಯ
|| ಹುಯ್ಯೋ ಹುಯ್ಯೋ, ದೇವರ ಕೋಲ ||

ಮಡಕೆಯಲಾಡಲು ಮೀನಿನ ಬಾಲ
ಮೃಡನವ ತಪಸಲಿ ಕೂರುವ ಕಾಲ

ಕಾಡುವ ಮಾಗಿಗೆ ಧಾವಳಿ ಜೋಡಿ
ಜೋಡು ಕಂಗ್ಗಂಬಳಿ ಕಾಮನ ದಿನಕೆ

ಕಾಯೋ ಕಾಯೋ ಕಾಮನ ಬೆಂಕಿ
|| ಹುಯ್ಯೋ ಹುಯ್ಯೋ, ಭಾಗ್ಯದ ಕೋಲ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...