ಓ ಒಲವೇ

ಇಲ್ಲವೆನ್ನುವ ಭಾವ
ಉಲಿಯದಿರು… ಒಲವೇ,
ಇರುವುದಾದರೂ ಪ್ರೇಮ
ಎದೆಯ ಒಳಗೆ.

ಬೆಳಗು ಬಿಮ್ಮನೆ ಬಂದು
ಬೆಳಗುತಿದೆ ಮುಗಿಲು
ಕಣ್ಣಂಚಲಿ ಗುನುಗುತಿದೆ
ಮಧುರ ಸೆಲೆಯು.

ನೀನಿಲ್ಲದಿರೆ ಒಲವೇ
ಮನೆಯಂಗಳದ ಹೂ
ಕಮರಿ ಹೆಣ್ಣಹೆರಳಿನ ಗಂಟು
ಸಡಿಲವಿವುದು.

ಬತ್ತಿಹೋದ ಬರಡು
ಹೊಂಡದಲಿ ಜಲವಿಲ್ಲ:
ಜಳದ ಕಾವು ಹರಡಿ
ಮುಸುಕಿದಂದು.

ಗೊನೆ ಕಡಿದ ಬಾಳೆ
ಬದುಕದದು ಬಹಳ
ಬೆಂಡಾಗಿ ನರಳಿ
ಉರುಳುವುದು ಶೀಘ್ರ.

ಇಷ್ಟ ಕಷ್ಟವ ಕೇಳಿ
ರಮಿಸುವವರಿಲ್ಲದಿರೆ
ಒಡಲ ಕಡಲಿಗೆ ಸುನಾಮಿ
ಉಕ್ಕದಿರದು.

ಬಿಲದಲ್ಲಿ ಮೊಲವಿಹುದು
ಮುಗ್ಧ ಮಳೆಯಲಿ ಮಿಂದು
ಮೊಗೆಮೊಗೆವ ಪ್ರೀತಿಗದು
ಮಿಡುಕುತಿಹುದು.

ಮೂಲೆಸೇರಿದ ಬುಟ್ಟಿ
ಕಸದ ತೊಟ್ಟಿ ಸುಳ್ಳಲ್ಲ
ಮೋಹದಾ ಮಂದರಿಯ
ಹೊದೆಯದಿರೆ ಅದು ಬಾಳಲ್ಲ

ಕರುಣಿಸು ಒಲವೇ
ಕಮರದಂತೆ ಕನಸು
ಅನುಗ್ರಹಿಸು ನಿನ್ನೊಲವ
ಮರೆಯದಂತೆ ಮನಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು
Next post ಸುಗ್ಗಿಯ ಕುಣಿತದ ಕೋಲಾಟ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys