Home / ಕವನ / ಕವಿತೆ / ಅಹವಾಲು

ಅಹವಾಲು

ಸರಿಯೇನೆ ದೀಪಿಕಾ ಇದು ಸರಿಯೇನೇ?
ಈ ಜಂಭ, ನಾಲಿಗೆಯಲಿ ಬೆನ್ನಿರಿಯುವ ಉರಿವ್ಯಂಗ್ಯ
ಅಡಬಹುದೇನೇ ದೀಪಿಕಾ ಕಾಡಬಹುದೇನೇ?
ಮಾತಲ್ಲಿ ಕೂದಲು ಸೀಳಿ ಬಗೆಯಬಹುದೇನೇ ಎದೆಯ
ನನ್ನ ಮನೆಯಲ್ಲೇ ನನ್ನ
ಹುಗಿಯಬಹುದೇನೇ?

ಇಲ್ಲವೆ, ಕೈಗೆ ಬಿದ್ದರೂ ನಾ ಕೇಳದೆ ಹಣ್ಣು ಸುಲಿಯುವುದಿಲ್ಲವೆ,
ಮಾರುಗಾಲಿದ್ದರೂ ನಿನ್ನ ನೀತಿಯ ಕಂದರ ಜಿಗಿಯುವುದಿಲ್ಲವೆ.
ನಿನ್ನ ಕಣ್ಣಬೆಳಕಲ್ಲಿ ನಾಲ್ಕು ಕನಸು ಹಚ್ಚಿಕೊಳ್ಳುತ್ತೇನೆ
ನಿನ್ನ ತುಟಿರಂಗಿನಲ್ಲಿ ನನ್ನ ಹೃದಯ ಸ್ವಲ್ಪ ತೊಳೆಯುತ್ತೇನೆ
ನಿನ್ನ ಜಡೆಯಲ್ಲೇ ಅಡಿಸಿಕ್ಕಿ ಒದ್ದಾಡುವ ನನ್ನ ಕಲ್ಪನೆಗೆ
ಅಲ್ಲೇ ಆ ನುಣುಪುಗಲ್ಲದ ಮೇಲೇ ಮಲಗಿಬಿಡು ಮರಿ ಎನ್ನುತ್ತೇನೆ.

ನಿನ್ನ ಒಂದೊಂದು ಮಾತೂ ಕಿವಿಯಲ್ಲಿ ಕೂತು
ನೂರು ಅರ್ಥ ಬಿಚ್ಚುತ್ತದೆ,
ಕಚ್ಚುತ್ತದೆ ಎದೆಯೊಳಗೆ ಯಾವುದೋ ಮಿದುಭಾಗವನ್ನ
ಗೆಜ್ಜೆಕಟ್ಟಿ ಜೀವ ಕಾಲು ಬಡಿಯುತ್ತದೆ
ತೋಟಕ್ಕೆಲ್ಲ ನೀರು ನುಗ್ಗಿ
ಬಾಳೆಯಗೊನೆ ನೆಲಕ್ಕೆ ಜಗ್ಗಿ
ಉರುಹೊಡೆದ ಎಲ್ಲ ಮಗ್ಗಿ ಮರೆತುಹೋಗುತ್ತದೆ.

ನೀ ಬರುವಾಗ ನಿನ್ನ ಸಮಾಜನೀತಿಯನ್ನೆಲ್ಲ ಉಟ್ಟು ಬರುವುದ?
ಅದರ ಮೈಗಾವಲಲ್ಲಿ ಒರಗಿ ಕಣ್ಣಲ್ಲಿ ಹಣ್ಣಿನಂಗಡಿ ತೆರೆಯುವುದ?
ಉರಿಮಾತೋ ನರಿಮಾತೋ ಆಡಿ
ಮಾಸುತ್ತಿರುವ ನೀತಿಯ ಗೆರೆ ತೀಡಿ
ನೀರಲ್ಲಿ ಕುಣಿಯುವ ಮೀನನ್ನ ದಡಕ್ಕೆ ಎಸೆಯುವುದ?

ಒಂದು ದಿನ ಈ ಕಂದರಕ್ಕೆ
ನೀನೇ ಕಲ್ಲು ಹಾಕುತ್ತೀಯ ದೀಪಿಕಾ;
ಗುದ್ದಲಿ ಹಿಡಿದು ಇಡೀ ದಿನ ಅಗೆದು
ನೀನೇ ಮಣ್ಣು ಎಳೆಯುತ್ತೀಯ.
ಆಗ ಗುಲಾಬಿ ತೋಟಕ್ಕೆ ನುಗ್ಗುತ್ತೇನೆ,
ಗೊಂಚಲು ಗೊಂಚಲನ್ನೇ ತಬ್ಬುತ್ತೇನೆ.
ಹಚ್ಚಿಕೊಂಡ ಹಿಲಾಲಿನಲ್ಲಿ
ಕತ್ತಲೆಯನ್ನು ಬೆತ್ತಲೆ ಸುಡುತ್ತೇನೆ.
*****
ದೀಪಿಕಾ ಕವನಗುಚ್ಛ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...