ಕೆ.ಎಸ್. ನರಸಿಂಹಸ್ವಾಮಿ

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ
ಮಾತನೆತ್ತಿದ ಜಾಣ, ನೇರಗಿಡದಿಂದಲೇ
ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ
ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ
ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ.
ಮಲ್ಲಿಗೆಯ ಹೆದೆಯಲ್ಲಿ ಹೂಡಿ ಚಿಮ್ಮಿದ ನುಡಿಗೆ
ಇಡಿಯ ನಾಡೇ ಸ್ತಬ್ಧ, ಸಂತೃಪ್ತ. ಆದರೂ
ಜೊತೆಯವರ ಕೊಂಕುನುಡಿ: “ಎಷ್ಟು ದಿನ ನಡೆದೀರಿ
ಸೀರೆಯ ಸೆರಗ ಹಿಡಿದು? ಬಿಟ್ಟು ಬಿಡಿ” ಬಿಟ್ಟ ಕವಿ,
ಹತ್ತಿ ಹಚ್ಚಿದ ಶಿಖಿರದಿಂದ ಶಿಖಿರಕ್ಕೇರಿ
ಬೆಟ್ಟದ ಮುಡಿಗೆ ಬೆಳಕ. ಕಣಿವೆಯೊಳಕ್ಕೂ ಈಗ
ಮಾತನಾಡುವ ತವಕ, ಟೀಕಾಕಾರ ಮೂಕ.

ನಿಮ್ಮಂತೆ ಅರಳಿ, ಸುತ್ತೆಲ್ಲ ಪರಿಮಳ ಚೆಲ್ಲಿ ಯಾರು ಬಾಳಿದರು?
ಜನದ ಎದೆ‌ಎದೆಯಲ್ಲೂ ಸಿಂಹಾಸನವನೇರಿ ಯಾರು ಆಳಿದರು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಣ
Next post ಜಗವೇ ಯೋಗಂ ಮಾಧುರ್ಯಂ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…