ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ
ಯಾಕೋ ಮಂಕಾಗಿ
ಅವನ ಬಣ್ಣವೆ ಜಿಗುಟಾಗಿ…
ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ
ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ
ಗೂಡಿಗೆ ಮರಳುತ್ತಿದ್ದವು.

ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ
ಒರಲಿ ಉರುಳಾಡಿ ಶಬ್ಧಗಳೇ
ಸರಿದು ಹೋಗಿ ಎಲ್ಲೆಲ್ಲೂ ಮೌನ
ಓಣಿ ಎರೆದು ಮಲಗಿಸಿ ಕಂದನಂತೆ
ತೆಪ್ಪಗೆ ಮಲಗಿತ್ತು ಮಂಕಾದ ಸೂರ್ಯ
ಬೇರೆ ನಾಡಿಗೆ ಬೆಳಕು ಮಾರಾಟ ಮಾಡಲು.
ಹೋದ.

ಮರದಲ್ಲಿ ಅರಳದ ಹೂವಿನ
ಮೊಗ್ಗುಗಳಿಗೆ ಮೌನದ ಕತ್ತಲು
ಕಚುಗುಳಿ ಇಟ್ಟು ಅನುರಣಿಸಿದಾಗ
ಕೈ ಕಾಲು ಮಡಚಿ ಮಲಗಿದ ಕತ್ತಲೆ
ಕೋಣೆ ತುಂಬಾ ಕಂತಿದ ಸೂರ್ಯ
ಹಳದಿ ಬಣ್ಣ, ಕಣ್ಣು ಮುಚ್ಚಾಲೆಯಾಟದಲಿ
ಗೆದ್ದವರು ಯಾರೋ ಸೋತವರ ಯಾರೋ
ಸಣ್ಣ ಬೀಜಗಳ ಮರ ಮಾಡುವ ಸೂರ್ಯ
ಮತ್ತೆ ರಾಜಾರೋಷವಾಗಿ ಉದಯಿಸಿದ.

ಹೊಸ ಪಲ್ಲಕ್ಕಿ ಸಾಗಿದ ಮಾರ್ಗ ಗುಂಟ
ಮತ್ತೆ ಗೌಜುಗದ್ದಲ, ಒಬ್ಬರ ಮೇಲೊಂದು
ಮಗದೊಂದು ಪಾದದ ಗುರುತುಗಳು
ಸಾಗಿ ತೇಲಿ ಹೋದ. ಇರುವೆಗಳ ಸಾಲು.
ದಾರಿ ಬದಿಯ ಗಿಡ ಟೊಂಗೆಗಳಿಂದ ಇಣುಕಿದ
ಸೂರ್ಯ ಸೂಸಿ ರಾಗ ಧ್ವನಿಗಳು ಚೈತನ್ಯಗಳು

ಕಂತುವ ಸೂರ್ಯ ಹುಟ್ಟುವ ಸೂರ್ಯ
ನಮ್ಮ ನಿಮ್ಮಲ್ಲಿ ಏನು ಮಜಾ ಹುಟ್ಟಿಸಿದ್ದಾನೆ.
ವಿಸ್ಮಯ ರಂಗುಗಳಿಗೆ ಬೆಪ್ಪಾದ ಜನಪದ
ಬದುಕು ಕವಿತೆಗಳಲ್ಲಿ ಅವನನ್ನು ಹಣಿದಿದ್ದೇ
ಹಣೆದಿದ್ದು ಮತ್ತೆ ಎಲ್ಲಾ ಜೀವದ
ಉಸಿರಾದುದಕ್ಕೆ ಚಿಗುರಿ ಚಿಮ್ಮಿದಕ್ಕೆ
ಪೂರ್ಣ ಅರಳಿದ ಹೂ, ಕಳಿತ ಹಣ್ಣು
ಮಾಗಿದ ಎಲೆ ಸೋಗೆಯ ಮನೆ, ಆಳದ
ಬೇರು ಎಲ್ಲವೂ ಅವನಾಗಿದ್ದು ವಿಸ್ಮಯ ತಾಯ್ಗಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌರಶಕ್ತಿ : ಬಳಕೆಯಲ್ಲಿನ ತಿಳುವಳಿಕೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೭

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…