Home / ಕವನ / ಕವಿತೆ / ಸೂರ್‍ಯ

ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ
ಯಾಕೋ ಮಂಕಾಗಿ
ಅವನ ಬಣ್ಣವೆ ಜಿಗುಟಾಗಿ…
ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ
ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ
ಗೂಡಿಗೆ ಮರಳುತ್ತಿದ್ದವು.

ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ
ಒರಲಿ ಉರುಳಾಡಿ ಶಬ್ಧಗಳೇ
ಸರಿದು ಹೋಗಿ ಎಲ್ಲೆಲ್ಲೂ ಮೌನ
ಓಣಿ ಎರೆದು ಮಲಗಿಸಿ ಕಂದನಂತೆ
ತೆಪ್ಪಗೆ ಮಲಗಿತ್ತು ಮಂಕಾದ ಸೂರ್ಯ
ಬೇರೆ ನಾಡಿಗೆ ಬೆಳಕು ಮಾರಾಟ ಮಾಡಲು.
ಹೋದ.

ಮರದಲ್ಲಿ ಅರಳದ ಹೂವಿನ
ಮೊಗ್ಗುಗಳಿಗೆ ಮೌನದ ಕತ್ತಲು
ಕಚುಗುಳಿ ಇಟ್ಟು ಅನುರಣಿಸಿದಾಗ
ಕೈ ಕಾಲು ಮಡಚಿ ಮಲಗಿದ ಕತ್ತಲೆ
ಕೋಣೆ ತುಂಬಾ ಕಂತಿದ ಸೂರ್ಯ
ಹಳದಿ ಬಣ್ಣ, ಕಣ್ಣು ಮುಚ್ಚಾಲೆಯಾಟದಲಿ
ಗೆದ್ದವರು ಯಾರೋ ಸೋತವರ ಯಾರೋ
ಸಣ್ಣ ಬೀಜಗಳ ಮರ ಮಾಡುವ ಸೂರ್ಯ
ಮತ್ತೆ ರಾಜಾರೋಷವಾಗಿ ಉದಯಿಸಿದ.

ಹೊಸ ಪಲ್ಲಕ್ಕಿ ಸಾಗಿದ ಮಾರ್ಗ ಗುಂಟ
ಮತ್ತೆ ಗೌಜುಗದ್ದಲ, ಒಬ್ಬರ ಮೇಲೊಂದು
ಮಗದೊಂದು ಪಾದದ ಗುರುತುಗಳು
ಸಾಗಿ ತೇಲಿ ಹೋದ. ಇರುವೆಗಳ ಸಾಲು.
ದಾರಿ ಬದಿಯ ಗಿಡ ಟೊಂಗೆಗಳಿಂದ ಇಣುಕಿದ
ಸೂರ್ಯ ಸೂಸಿ ರಾಗ ಧ್ವನಿಗಳು ಚೈತನ್ಯಗಳು

ಕಂತುವ ಸೂರ್ಯ ಹುಟ್ಟುವ ಸೂರ್ಯ
ನಮ್ಮ ನಿಮ್ಮಲ್ಲಿ ಏನು ಮಜಾ ಹುಟ್ಟಿಸಿದ್ದಾನೆ.
ವಿಸ್ಮಯ ರಂಗುಗಳಿಗೆ ಬೆಪ್ಪಾದ ಜನಪದ
ಬದುಕು ಕವಿತೆಗಳಲ್ಲಿ ಅವನನ್ನು ಹಣಿದಿದ್ದೇ
ಹಣೆದಿದ್ದು ಮತ್ತೆ ಎಲ್ಲಾ ಜೀವದ
ಉಸಿರಾದುದಕ್ಕೆ ಚಿಗುರಿ ಚಿಮ್ಮಿದಕ್ಕೆ
ಪೂರ್ಣ ಅರಳಿದ ಹೂ, ಕಳಿತ ಹಣ್ಣು
ಮಾಗಿದ ಎಲೆ ಸೋಗೆಯ ಮನೆ, ಆಳದ
ಬೇರು ಎಲ್ಲವೂ ಅವನಾಗಿದ್ದು ವಿಸ್ಮಯ ತಾಯ್ಗಂಡ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...