ಒಡತಿ

ಸಾಲುಗಟ್ಟಿ ಸಾಗಿದ ಇರುವೆಗಳು
ಕವಿತೆ ಮೆರವಣಿಗೆ ಹೊರಟವೆ
ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ
ಸಿಲುಕಿ ಹೊರ ಬರಲಾರದೇ ಒದ್ದಾಡಿವೆ

ಸುರಿದ ಮಳೆ ಅಂಗಳದ ಥಂಡಿ
ಹರಡಿ ಹಾಸಿದ ಹನಿ ಹನಿಯ
ಹೆಗ್ಗುರುತು ಗುಳಿಯಲಿ ಅವಳ
ಕಣ್ಣುಳು ಏನೋ ಅರಸಿ ಬಳಲಿವೆ

ಕರಿಮೋಡದ ತೇಲು ಬಾನಿನಗಲ
ಹಾಸಿದ ಇರುಳಲ್ಲದ ಹಗಲು ಮುಬ್ಬು
ಸಂಜೆ ಮಲ್ಲಿಗೆ ಅರಳಿ ಸೂಸಿದ ಕಂಪು
ಗಾಳಿಯಲಿ ತೇಲಾಡಿವೆ ಹೊಂಗೂದಲು

ಸುರಿದ ಮಳೆ ಭರತ ಸೆಳೆತ
ತೋಡು ಸಂಕ ನದಿಯಾಗಿ ಸೇರುವ
ಗೊಂದಲದ ಅಲೆಗಳು ಸಾಗರ ತುಂಬಿ
ಆಳದ ನಿರಾಳದಲಿ ನೀರವ ಶಾಂತ ಕವಿತೆ

ಮರಗಿಡಗಳು ಹಕ್ಕಿಕೊರಳು
ಮಿಂದನೆಂದ ನೆಲಮುಗಿಲುಗಳು
ಮನಸ್ಸಿನ ಸೂಕ್ಷ್ಮ ಸಾಮರ್ಥ್ಯಗಳ
ರಹಸ್ಯ ಒಡೆಯುವ ಮಾಟಗಾತಿ ನನ್ನೊಡತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಸರ ಪ್ರಜ್ಞೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೪

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…