ಒಡತಿ

ಸಾಲುಗಟ್ಟಿ ಸಾಗಿದ ಇರುವೆಗಳು
ಕವಿತೆ ಮೆರವಣಿಗೆ ಹೊರಟವೆ
ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ
ಸಿಲುಕಿ ಹೊರ ಬರಲಾರದೇ ಒದ್ದಾಡಿವೆ

ಸುರಿದ ಮಳೆ ಅಂಗಳದ ಥಂಡಿ
ಹರಡಿ ಹಾಸಿದ ಹನಿ ಹನಿಯ
ಹೆಗ್ಗುರುತು ಗುಳಿಯಲಿ ಅವಳ
ಕಣ್ಣುಳು ಏನೋ ಅರಸಿ ಬಳಲಿವೆ

ಕರಿಮೋಡದ ತೇಲು ಬಾನಿನಗಲ
ಹಾಸಿದ ಇರುಳಲ್ಲದ ಹಗಲು ಮುಬ್ಬು
ಸಂಜೆ ಮಲ್ಲಿಗೆ ಅರಳಿ ಸೂಸಿದ ಕಂಪು
ಗಾಳಿಯಲಿ ತೇಲಾಡಿವೆ ಹೊಂಗೂದಲು

ಸುರಿದ ಮಳೆ ಭರತ ಸೆಳೆತ
ತೋಡು ಸಂಕ ನದಿಯಾಗಿ ಸೇರುವ
ಗೊಂದಲದ ಅಲೆಗಳು ಸಾಗರ ತುಂಬಿ
ಆಳದ ನಿರಾಳದಲಿ ನೀರವ ಶಾಂತ ಕವಿತೆ

ಮರಗಿಡಗಳು ಹಕ್ಕಿಕೊರಳು
ಮಿಂದನೆಂದ ನೆಲಮುಗಿಲುಗಳು
ಮನಸ್ಸಿನ ಸೂಕ್ಷ್ಮ ಸಾಮರ್ಥ್ಯಗಳ
ರಹಸ್ಯ ಒಡೆಯುವ ಮಾಟಗಾತಿ ನನ್ನೊಡತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಸರ ಪ್ರಜ್ಞೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೪

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys