ಅಲಿ ಸೂತ್ತರದಾಟಾ

ಅಲಿ ಸೂತ್ತರದಾಟಾ ಐಸುದದಿ
ಅಲಾವಿ ಬಲುದಾಟಾ                         ||ಪ||

ಕಲಿಯೊಳಗ ಹೆಚ್ಚಾದಿತು ಕರ್ಮವು
ಕೊಲಿಯುಕ್ಕಿ ಬರಬರಿತು ಭೂಮಿಗೆ
ದುಷ್ಕಾಳದ ಮಾಟ ಐಸುರದಿ
ಅಲಾವಿ ಬಲುದಾಟಾ                       ||ಅ.ಪ.||

ನೊಂದಿತು ಬಹುಮಂದಿ
ಗಂಜಿ ಕುಡಿ ಕುಡಿದು ಹೋದರು ಕುಂದಿ
ಮಂದಿ ಕೆಡಸಿ ಹನ್ನೊಂದು ಜಿಲ್ಹೆಯೊಳು
ಹೆಂಡರು ಮಕ್ಕಳು ಮಾರಿಕೊಂಡು ಒಳೆ
ದಂಡಿನ ಪಡಿಪಾಟಾ ಐಸುರದಿ
ಅಲಾವಿ ಬಲುದಾಟ                          ||೧||

ಮಲ್ಲಾಡ ಹಳವದೊಳಗೆ
ಕೂಳಿಲ್ಲದೆ ತಿಂದಾರೋ ಕೊಬ್ಬಟ್ಟ
ತಾಳಿ ಹರಿದು ಬಡಕೊಂಡು ಗಳಿಸಿದವ
ತಾಳಿಬಳ್ಳಿ ಪಡಿಜೋಳಕ ಸಾಲದೆ
ಕೂಳಿನ ಮೊಬ್ಬಾಟ ಐಸುರದಿ
ಅಲಾವಿ ಬಲುದಾಟ                       ||೨||

ಬಹಳ ತಿಳಿಯದರವು
ರಮಲ ರಟ ಕಾಲಜ್ಞಾನದ ಕುರುಹು
ಮೂಲ ತಿಳಿದು ಉಸುರಿದನು ರಿವಾಯತ
ಭೂಮಿಪ ಶಿಶುನಾಳಧೀಶನು ತಾನು
ಹೇಳಿದ ಘಟ್ಟಿಮುಟ್ಟಾ ಐಸುರದಿ
ಅಲಾವಿ ಬಲುದಾಟ                          ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೆ ಹೇಗೆ ಚಿಮ್ಮುತ್ತಿತ್ತು!!
Next post ದಲಿತರು ಸಾಬ್ರು ಹಿಂದುಳಿದೋರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…