ಅಲಿ ಸೂತ್ತರದಾಟಾ

ಅಲಿ ಸೂತ್ತರದಾಟಾ ಐಸುದದಿ
ಅಲಾವಿ ಬಲುದಾಟಾ                         ||ಪ||

ಕಲಿಯೊಳಗ ಹೆಚ್ಚಾದಿತು ಕರ್ಮವು
ಕೊಲಿಯುಕ್ಕಿ ಬರಬರಿತು ಭೂಮಿಗೆ
ದುಷ್ಕಾಳದ ಮಾಟ ಐಸುರದಿ
ಅಲಾವಿ ಬಲುದಾಟಾ                       ||ಅ.ಪ.||

ನೊಂದಿತು ಬಹುಮಂದಿ
ಗಂಜಿ ಕುಡಿ ಕುಡಿದು ಹೋದರು ಕುಂದಿ
ಮಂದಿ ಕೆಡಸಿ ಹನ್ನೊಂದು ಜಿಲ್ಹೆಯೊಳು
ಹೆಂಡರು ಮಕ್ಕಳು ಮಾರಿಕೊಂಡು ಒಳೆ
ದಂಡಿನ ಪಡಿಪಾಟಾ ಐಸುರದಿ
ಅಲಾವಿ ಬಲುದಾಟ                          ||೧||

ಮಲ್ಲಾಡ ಹಳವದೊಳಗೆ
ಕೂಳಿಲ್ಲದೆ ತಿಂದಾರೋ ಕೊಬ್ಬಟ್ಟ
ತಾಳಿ ಹರಿದು ಬಡಕೊಂಡು ಗಳಿಸಿದವ
ತಾಳಿಬಳ್ಳಿ ಪಡಿಜೋಳಕ ಸಾಲದೆ
ಕೂಳಿನ ಮೊಬ್ಬಾಟ ಐಸುರದಿ
ಅಲಾವಿ ಬಲುದಾಟ                       ||೨||

ಬಹಳ ತಿಳಿಯದರವು
ರಮಲ ರಟ ಕಾಲಜ್ಞಾನದ ಕುರುಹು
ಮೂಲ ತಿಳಿದು ಉಸುರಿದನು ರಿವಾಯತ
ಭೂಮಿಪ ಶಿಶುನಾಳಧೀಶನು ತಾನು
ಹೇಳಿದ ಘಟ್ಟಿಮುಟ್ಟಾ ಐಸುರದಿ
ಅಲಾವಿ ಬಲುದಾಟ                          ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೆ ಹೇಗೆ ಚಿಮ್ಮುತ್ತಿತ್ತು!!
Next post ದಲಿತರು ಸಾಬ್ರು ಹಿಂದುಳಿದೋರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys