ಬಾ ಬಾ ಹೊಸ ಗಾಳಿಯೆ

ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ
ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ
ಮಳೆಗಾಲದ ನವನೀರದ ಹರಸುವ೦ತೆ ಬಾ
ಬತ್ತಿ ಹೊಲದ ಚಿತ್ತದಲ್ಲಿ ಜಲ ಚಿಮ್ಮಿಸು ಬಾ

ಉದಾಸೀನ ಜೀವಹೀನವಾದುದೆಲ್ಲವೂ
ಕೊನೆಯಿರುಳಿನ ಕಣ್ಣೀರಲಿ ಕೊಚ್ಚಿ ಹೋಗಲಿ;
ಸೃಷ್ಟಿಶಕ್ತಿ ತೀರಿಹೋದ ವಸ್ತುವೆಲ್ಲವೂ
ತನ್ನೊಡಲನು ಹೊಸಸೃಷ್ಟಿಗೆ ತೆರವು ಮಾಡಲಿ

ಬಾ ಬಾ ಹೊಸಗಾಳಿಯೆ ಈ
ಹಳೆ ಬಾಳಿಗೆ ಬಾ,
ಸರಿದುಹೋದ ಹರೆಯವನ್ನು
ಮರಳಿ ತಿರೆಗೆ ತಾ;
ಪ್ರಾಣವೀಣೆಯನ್ನು ದನಿಸಿ
ಕರಣಗಣಕೆ ಕೆಚ್ಚನುಣಿಸಿ
ಕಾಯದ ಕಣಕಣವ ಕುಣಿಸಿ
ಸಾವನೊದ್ದು ಬಾ,

ಚೈತ್ರದ ಹೊಸ ಮೈತ್ರಿಯಲ್ಲಿ
ಜಗವ ಹೂಡು ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧
Next post ಭರತಖಂಡದ ಬರಗೂರಿನಿಂದ ಇಂಗ್ಲೆಂಡಿನ ‘ಲೀಡ್ಸ್’ದವರೆಗೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…