Home / ಲೇಖನ / ವಿಜ್ಞಾನ / ಜೇನು: ಆಹಾರ-ಔಷಧಿ

ಜೇನು: ಆಹಾರ-ಔಷಧಿ

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು.

ಜೇನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಆಯುರ್‍ವೇದ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜೇನು ಹಾಲಿಗಿಂತಲೂ ಆರು ಪಟ್ಟು ಪೌಷ್ಟಿಕತೆ ಹೊಂದಿದೆ. ಬಿಳಿ ಬಣ್ಣದ ಜೇನು ತುಪ್ಪಕ್ಕಿಂದ ಕಂದು ಬಣ್ಣದ ಜೇನಿನಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಾಗಿರುತ್ತದೆ. ಶಕ್ತಿಯನ್ನು ಒದಗಿಸುವಲ್ಲಿ ಜೇನಿಗೇ ಮೊದಲನೆ ಸ್ಥಾನ. ೧೦ ಟೇಬಲ್ ಚಮಚ (೨೦೦ ಗ್ರಾಂ)ದಷ್ಟು ಜೇನು, ೩೩೦ ಗ್ರಾಂ ಮಾಂಸ ಅಥವಾ ೧೦ ಕೋಳಿಮೊಟ್ಟೆ ಅಥವಾ ೮ ಕಿತ್ತಳೆಹಣ್ಣು ಅಥವಾ ೧ ಲೀಟರ್‍ ಹಾಲು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆಯೆಂದಾಗ ಅದರ ಶಕ್ತಿಯ ಅರಿವಾಗದಿರದು. ಸುಮಾರು ೨೧ ಗ್ರಾಂ ಜೇನುತುಪ್ಪ ಸುಮಾರು ೬೭ ಕ್ಯಾಲೋರಿಗಳಷ್ಟು ಶಕ್ತಿಯನ್ನು ಒದಗಿಸಬಲ್ಲದು.

ಮುಖ್ಯವಾಗಿ ಜೇನಿನಲ್ಲಿ ಲೆವ್ಯೂಲೋಸ್ ಮತ್ತು ಡೆಕ್ಸ್‌ಟ್ರೋಸ್ ಎಂಬ ಸಕ್ಕರೆಗಳು ಇರುತ್ತವಾದರೂ, ಅದರಲ್ಲಿ ದೇಹಾರೋಗ್ಯಕ್ಕೆ ಅಗತ್ಯವಿರುವ ಹೆಚ್ಚು ಕಡಿಮೆ ಎಲ್ಲಾ ಖನಿಜ-ಲವಣಾಂಶಗಳು ಮತ್ತು ವಿಟಾಮಿನ್‌ಗಳು ಸಾಕಷ್ಟಿವೆ. ಜೇನುತುಪ್ಪದಲ್ಲಿರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು ನೇರವಾಗಿ ಸಂಪೂರ್‍ಣವಾಗಿ ದೇಹದಲ್ಲಿ ಅರಗಿಕೊಂಡು ಬರುತ್ತವೆ. ಇದರ ಜೊತೆಗೆ ಇತರ ಪದಾರ್‍ಥಗಳು ಕೂಡ ಇದರ ಸಾನಿಧ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಗಿ ಹೆಚ್ಚು ಗುಣಗಳನ್ನು ಶೀಘ್ರವಾಗಿ ಕೊಡುತ್ತವೆ.

ಜೇನಿನಲ್ಲಿ ಬಹು ಸರಳ ರೂಪದ ಸಕ್ಕರೆಯಿರುವುದೇ ಅದರ ಹಿರಿಮೆಗೆ ಕಾರಣ. ಸುಲಭವಾಗಿ ಜೀರ್‍ಣವಾಗುವ ಶಕ್ತಿದಾಯಕವಾದ ಸರಳ ಸಕ್ಕರೆಯಿಂದಾಗಿ ಅಸ್ವಸ್ಥತೆಯಲ್ಲಾಗಲೀ, ಆರೋಗ್ಯದಲ್ಲಾಗಲೀ ಜೇನನ್ನು ನಿರಾತಂಕವಾಗಿ ಎಲ್ಲರೂ ಸೇವಿಸಬಹುದು.

ರೋಗ ನಿವಾರಕ

ಜೇನುತುಪ್ಪ ಪ್ರಬಲ ರೋಗ ನಿರೋಧಕ. ಕೆಂಪು ರಕ್ತಕಣಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದು ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ತಡೆಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿಯೂ, ಕಣ್ಣಿನ ವ್ರಣ, ನಾಲಿಗೆ ವ್ರಣ, ಗಂಟಲು ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಬಹಳಷ್ಟು ಗುಣಕಾರಿಯಾಗಿದೆ.

ಮುಖದ ಮೇಲೆ ಮೊಡವೆಗಳುಳ್ಳವರು ಸ್ವಲ್ಪ ನಿಂಬೆರಸದೊಡನೆ ಜೇನನ್ನು ಬೆರಸಿ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುವುದಲ್ಲದೆ ಚರ್‍ಮವೂ ಶುದ್ಧಿಯಾಗುತ್ತದೆ.

ದುಡಿತದಿಂದ ತುಂಬಾ ಬಳಲಿದವರು ಒಂದುವರೆ ಟೇಬಲ್ ಚಮಚ ಜೇನನ್ನು, ಚಳಿಗಾಲದಲ್ಲಾದರೆ ೧ ಗ್ಲಾಸ್ ಬಿಸಿ ನೀರಿನಲ್ಲಿ, ಬೇಸಿಗೆಯಲ್ಲಾದರೆ ತಣ್ಣಿರಿನಲ್ಲಿ ಸೇವಿಸಿದರೆ ತನ್ನ ಕಳೆದುಹೋದ ಶಕ್ತಿಯನ್ನು ಪುನಃ ಪಡೆಯುತ್ತಾರೆ.

ಕಂದುಬಣ್ಣದ ಜೇನುತುಪ್ಪದಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯಿಂದ ಅನಿಮಿಯಾ ರೋಗವು ಕ್ರಮೇಣ ಗುಣ ಹೊಂದುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...