ಸಿಕ್ಕು

ತೆರೆದ ಮುಚ್ಚಿದ ಬಾಗಿಲುಗಳ
ಸಂದಿಯಲಿ ಜೇಡ ನೇಯ್ದ ಬಲೆ
ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು
ಕಳೆದು ಹೋದವು ದಿನಗಳ ನೇಯ್ಗೆಯ
ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ.

ನಾಡಿನ ದೇವರಿಗೆಲ್ಲಾ ಚೌಕಟ್ಟು
ಪಡೆದು ಕುಂತ ಮಾಡಿನ ಸಂದಿಯಲ್ಲೂ
ಮನಸ್ಸಿನ ಅಲೆ‌ಅಲೆಯ ಬಲೆ ಬಲೆಯ ಸಿಕ್ಕು
ಆದಿ ಅನಾದಿ ನಾಡಿಗೆ ನಿಜ ಬಯಲು
ಕಾವಲು ಹುಡುಕುತ ಹೊರಟಿದೆ ದೇಶಕಾಲ.

ವಾದವಿವಾದಲಿ ಕೌರ್ಯ ಹರಡಿ
ಸದ್ದಿರದೆ ನಡೆದ ಬೆಳಕು ಉಡುಗಿದ ಕತ್ತಲು
ಉರಿದ ಎದೆ ಹಾಲು ನಯದ ವಂಚನೆಯಲಿ
ನೊಂದ ಮಕ್ಕಳು ನೇಯ್ದ ನೇಯ್ಗೆ ಸೆರೆಮನೆ
ಬಿಡದೇ ಕಾಡಿದೆ ತುಸು ಸಿಟ್ಟು ನೂಕುನುಗ್ಗಲಿನಲಿ.

ಹಳ್ಳ ಅರಿಯದೇ ಬಳ್ಳ ತುಂಬದೇ
ಹಸುಗಳ ಹೆಜ್ಜೆ ಮೂಡಿದ ಗೋಧೂಳಿ
ಹರಳುಗಟ್ಟದ ಬೀಜ ಮೋಡಗಳು
ಸುರಿಸದೇ ಮಳೆ ಹಾರಿಹೋದವು
ಸುದ್ದಿಯಿಲ್ಲದೇ ಕಲ್ಲು ಗಂಟಾಗಿ ಕಾಡಿತು ಮನದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇನು: ಆಹಾರ-ಔಷಧಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೧

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys