ಸಿಕ್ಕು

ತೆರೆದ ಮುಚ್ಚಿದ ಬಾಗಿಲುಗಳ
ಸಂದಿಯಲಿ ಜೇಡ ನೇಯ್ದ ಬಲೆ
ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು
ಕಳೆದು ಹೋದವು ದಿನಗಳ ನೇಯ್ಗೆಯ
ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ.

ನಾಡಿನ ದೇವರಿಗೆಲ್ಲಾ ಚೌಕಟ್ಟು
ಪಡೆದು ಕುಂತ ಮಾಡಿನ ಸಂದಿಯಲ್ಲೂ
ಮನಸ್ಸಿನ ಅಲೆ‌ಅಲೆಯ ಬಲೆ ಬಲೆಯ ಸಿಕ್ಕು
ಆದಿ ಅನಾದಿ ನಾಡಿಗೆ ನಿಜ ಬಯಲು
ಕಾವಲು ಹುಡುಕುತ ಹೊರಟಿದೆ ದೇಶಕಾಲ.

ವಾದವಿವಾದಲಿ ಕೌರ್ಯ ಹರಡಿ
ಸದ್ದಿರದೆ ನಡೆದ ಬೆಳಕು ಉಡುಗಿದ ಕತ್ತಲು
ಉರಿದ ಎದೆ ಹಾಲು ನಯದ ವಂಚನೆಯಲಿ
ನೊಂದ ಮಕ್ಕಳು ನೇಯ್ದ ನೇಯ್ಗೆ ಸೆರೆಮನೆ
ಬಿಡದೇ ಕಾಡಿದೆ ತುಸು ಸಿಟ್ಟು ನೂಕುನುಗ್ಗಲಿನಲಿ.

ಹಳ್ಳ ಅರಿಯದೇ ಬಳ್ಳ ತುಂಬದೇ
ಹಸುಗಳ ಹೆಜ್ಜೆ ಮೂಡಿದ ಗೋಧೂಳಿ
ಹರಳುಗಟ್ಟದ ಬೀಜ ಮೋಡಗಳು
ಸುರಿಸದೇ ಮಳೆ ಹಾರಿಹೋದವು
ಸುದ್ದಿಯಿಲ್ಲದೇ ಕಲ್ಲು ಗಂಟಾಗಿ ಕಾಡಿತು ಮನದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇನು: ಆಹಾರ-ಔಷಧಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೧

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…