ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ
ಹೊಂದಿಕೊಳ್ಳುವಂತಿದ್ದರೆ
ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ
ಮಲ್ಲಿಗೆಯ ಮಂಪರೇ
ನೆಲಮುಗಿಲ ಹಬ್ಬಿನಿಂತಿದ್ದರೆ,
ಹೀಗೆಲ್ಲ ಆಗುವಂತಿದ್ದರೆ,

ಕನಸುಗಳ ಜೀವ ಚಿಗುತುಕೊಳ್ಳುವುದೇ
ಹಾಗೆ
ಗಾಜು ಗುಜ್ಜಿನ ಬೆಳಕಿಗಿಂತ
ಹನಿ ಬಿಂದು ಮಣ್ಣಿನೆಲದ
ಕಣಕಣ ವ್ಯಾಮೋಹಿಸಿಬಿಡುತ್ತದೆ.
ದಿನಕಳೆದಂತೆಲ್ಲಾ ಬೆಳಕು ಹಿಗ್ಗುತ್ತಲೇ
ಬಯಲ ಬಿದಿರು ಬಿಮ್ಮನೆ
ಆಗಸಕ್ಕೆ ಏಣಿಯಾಗುತ್ತದೆ.
ಆಶೆ ಸ್ಥಾವರದ ದಿಕ್ಕಿನೆಡೆಗೆ ಸಣ್ಣ ನೋಟ
ಚಿಮುಕಿಸಿದರೂ ಸಾಕು
ತುಂಡು ತುಂಡು ನಕ್ಷತ್ರಗಳು
ಫಳ್ಳನೆ ಹೊಳೆದಂತಾಗುವುದು. ಆ
ನಕ್ಷತ್ರಗಳೇ ನಾವಾಗುವಂತಿದ್ದರೆ,

ಢಂಬ ಬದುಕಿನ ತುಂಬಾ
ಚಕಮಕಿ ಚೆಲ್ಲಿ ಬಿದ್ದರೂ ಜೀವ ತಹತಹ
ಅದೇಕೋ ನಿಲ್ಲುವುದೇ ಇಲ್ಲ
ನಾದದ ತಂಬೂರಿ ಮೀಟಿದಂತೆಲ್ಲಾ
ದಣಿವು ದುಮ್ಮಾನ ಬದಿಗೊತ್ತಿ
ಮಿಡುಕುವ ಮನಗಳು
ಉಕ್ಕಿದ ತೆನೆಗಳ ಬಳುಕಾಟಕ್ಕೆ
ಹೊಸೆದುಕೊಂಡರೆ
ಉದ್ದಕ್ಕೂ ಹಾಸಿ ಬೀಸುವ
ಮಲಯಪರ್ವತದ
ಕುಳಿರ್‍ಗಾಳಿ ಎದೆಯನ್ನೆ ಪುಷ್ಪವಾಗಿಸುತ್ತದೆ.
ಪುಷ್ಪವೇ ನಾವಾಗುವಂತಿದ್ದರೆ,

ನಾಳೆ ಬೀಳುವ ಎಲೆಗೂ ಗಾಳಿ
ಕುಲುಕಿಸಿ ಮೋಡಿ, ಮಗುವಿನ
ಕಿಲಕಿಲ ನಗು ಬೊಚ್ಚು ಬಾಯಿಯಲ್ಲೂ
ಮುದ್ದಾದ ಮಲ್ಲಿಗೆಯನ್ನೆ ಅರಳಿಸಿಬಿಡುತ್ತದೆ.
ಹಸಿರ ಕನಸೇ ಹಾಗೆ
ಕದಪು ಕೆಂದಾವರೆಯಾಗಿ ವಿನ್ಯಾಸಗೊಳ್ಳುತ್ತದೆ
ಮಣ್ಣೊಳಗೆ ಹೂಳಿದರೂ ಬೀಜ
ಚಿಗುರಾಗಿ ಹೊರಗಿಣುಕಿತು.
ಹೊಲದ ಅಂಚಿಗೆ ಅರೆಬರೆಯ ಬದುವು
ಇದ್ದರೂ ಅಂತರ್‍ಗತ ಜಿನುಗು
ಉಕ್ಕಿಸಿ ಬಿಡುತ್ತದೆ ಹಸಿರು
ನಾವೇ ಹಸಿರಾಗುವಂತಿದ್ದರೆ

ಪುಣ್ಯಕೋಟಿಯ ಕೆಚ್ಚಲು ಹಿಗ್ಗಿದಷ್ಟೂ
ಕರುವಷ್ಟೇ ಅಲ್ಲ,
ಕಾಳಿಂಗನ ಕರೆಮೊಗೆಯೂ ಹೀರಿ ಉಕ್ಕಿತು
ಪ್ರೀತಿ ಹೊಳೆವ ತಾರೆ ಹೂ ಹಸಿರು,
ಉಸಿರು ಬಸಿರು
ಪ್ರೀತಿಗೆ ಬೆತ್ತಲಾಗದಿದ್ದರೆ
ಬೆತ್ತಲೆ ಪದವೇ ಬಯಲಲ್ಲಿ ನಿಂತಿತು
ಬಯಲೇ ನಾವಾಗುವಂತಿದ್ದರೆ,
ನಾವೇ ಬಯಲಾದರೆ… ಬೆಳಕಾಗುವಂತಿದ್ದರೆ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೇಯಲ್ಲಿ ಮಳೆ
Next post ಅವರು ಮತ್ತು ನಾವು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys