ಭಾವಗೀತೆಯ ಮೆರಗು

ಭಾವಗೀತೆಯ ಮೆರಗು
ಹಸಿರ ನೇಸರದಾ ಸೆರಗು
ಮನ ಮನ್ವಂತರವೆ ನೀನು
ನೀನು ನೀನಾಗಿರಲೇನು ಚೆನ್ನ
ತೆರೆಯೆ ಬಾಗಿಲ ಪೊರೆಯೆ ತಾಯೆ
ಕನ್ನಡಾಂಬೆಯೆ ನಿನಗೆ ನನ್ನ ನಮನ||

ಸುಮ ಬಾಳೆ ಬದುಕು
ಹೊಂಬಾಳೆ ಕಾಯೆ ನಮಗೆ
ಚೇತನವೇ ಬಾಳಿಂದು ಮುಡಿಪು
ದೇವಿಯೆ ಕರುನಾಡ ತಾಯೆ
ನೀನು ನೀನಾಗಿರಲೇನು ಚೆನ್ನ
ನಮಿಸುವೆ ನಿನಗೆ ಪೊರೆಯೆ ನನ್ನ
ಕನ್ನಡಾಂಬೆಯೆ ನಿನಗೆ ನನ್ನ ನಮನ||

ಬೇಗುದಿಯ ಬೆಳಕಲಿ
ಹೂಗಳರಳಿದ ಹಾಗೆ
ಸಾಂತ್ವನಕೆ ತಂಗಾಳಿ ಬೀಸಿ
ತಂಪ ನೀಡುವ ಹಾಗೆ
ಕಗ್ಗತ್ತಲಾ ಬಾಳಿಗೆ ಬೆಳಕಾಗಿ ಬಾ
ನೀನು ನೀನಾಗಿರಲೇನು ಚೆನ್ನ
ತೆರೆಯೆ ಬಾಗಿಲ ಪೊರೆಯೆ ನನ್ನ
ಕನ್ನಡಾಂಬೆಯೆ ನಿನಗೆ ನನ್ನ ನಮನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಮಾಣುವೆಂಬುದು ಪ್ರಮಾಣು
Next post ಮೊಬೈಲ್

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys