ಭವ್ಯ ಭಾರತ ಭೂಮಿ

ಭವ್ಯ ಭಾರತ ಭೂಮಿ ನಮ್ಮದು
ನವ್ಯ ಭಾರತ ಭೂಮಿ ನಮ್ಮದು
ಶಾಂತಿ ಸಹನೆ ನೀತಿ ನೇಮ ಗಣ
ಭಾವೈಕ್ಯತೆಯ ಗೂಡು ನಮ್ಮದು ||

ಜನನಿ ಜನುಮ ಭೂಮಿ ಸ್ವರ್‍ಗ
ತಾಳ ಮುಗಿಲ ಕಾನನದೊಳಗಣಾ
ಸಮೃದ್ಧಿ ಚೆಂದ ಗಂಧ ಮೆರೆದ
ಭಾವೈಕ್ಯತೆಯ ಗೂಡು ನಮ್ಮದು ||

ಕನಕ ದೃಷ್ಟಿ ವನಿತ ಭಾವ
ನಿತ್ಯ ವರ್‍ಣ ಚೇತನ ಕಾಮನ
ಸತ್ಯ ಧರ್‍ಮ ಕರ್‍ಮ ಮರ್‍ಮ
ಬೆಸೆದ ಜಗದ ಭೂಮಿ ನಮ್ಮದು ||

ಋತು ಚಕ್ರಧಾರೆಯಲ್ಲಿ ಕೀರ್‍ತಿ
ಶಿಖರ ಕೇರಿ ಉದಯಕಿರಣ
ಸುದಯ ಅಭಿಮಾನದಾನಂದ ಮೆರೆದ
ಪುಣ್ಯ ಭೂಮಿ ದೇಶ ನಮ್ಮದು ||

ಸಂತ ಸಾಧು ವೀರಗಾಥ
ತ್ಯಾಗರೂಪ ದೀಪವಂದನ
ಅಮರ ಗಾನ ವಿರಾಟ ಮನನ
ಜನ್ಮಕರ್‍ಮ ಭೂಮಿ ನಮ್ಮದು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಮನಗಳ ಸುಳಿಯಲ್ಲಿ ಭಾಷೆ
Next post ಬೆನ್ನು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys