Home / ಕವನ / ಕವಿತೆ / ಕನ್ನಡಿ ನನ್ನನ್ನು ನೋಡಿತು

ಕನ್ನಡಿ ನನ್ನನ್ನು ನೋಡಿತು

(ಝೆನ್‌ಗುರು ಚುಅಂಗ್‌ತ್ತು ಹೀಗೆ ಹೇಳುತ್ತಾನೆ: ಕನ್ನಡಿಯನ್ನು ನೋಡಿ – ಅದು ಏನನ್ನೂ ಸ್ವೀಕರಿಸುವುದಿಲ್ಲ. ಏನನ್ನೂ ತಿರಸ್ಕರಿಸುವುದಿಲ್ಲ. ಅದು ಏನಿದ್ದರೂ ಗ್ರಹಿಸುತ್ತದೆ)

ಕನ್ನಡಿ ನನ್ನನ್ನು ನೋಡಿತು.

ನನ್ನ ಕಣ್ಣಂಚಿನ ನೀರನ್ನೂ
ತನ್ನ ತುಟಿಯಂಚಿನ ನಗೆಯನ್ನೂ
ನನ್ನ ಕೆನ್ನೆಯಲ್ಲಿನ ಲಜ್ಜೆಯನ್ನೂ
ಕನ್ನಡಿ ನೋಡಿತು.

ನನ್ನ ಗಂಟಲೊಳಗಿನ ಮಾತನ್ನೂ
ನನ್ನ ನಾಲೆಗೆಯೊಳಗಿನ ರುಚಿಯನ್ನೂ
ನನ್ನ ಕಿವಿಯೊಳಗಿನ ಲಜ್ಜೆಯನ್ನೂ
ಕನ್ನಡಿ ನೋಡಿತು.

ನನ್ನ ಚಿಂತೆಹಣೆ ಸುಕ್ಕುಗಳನ್ನೂ
ಮೋಡದಂತಹ ಮುಂಗುರುಳುಗಳನ್ನೂ
ಒಂದೆರೆಡು ಮಿಂಚಿನ ಗೆರೆಗಳನ್ನೂ
ಕನ್ನಡಿ ನೋಡಿತು.

ನನ್ನ ತೋಳುಗಳ ಅಕ್ಕರೆಯನ್ನೂ
ಬೆರಳುಗಳ ಹಠಮಾರಿತನವನ್ನೂ
ಕಾಲುಗಳ ಕ್ರೌರ್‍ಯವನ್ನೂ
ಉಗುರುಗಳ ಜಾಣತನವನ್ನೂ
ಕನ್ನಡಿ ನೋಡಿತು.

ಹರಿವ ನದಿ ರಕ್ತದಂಥ ನನ್ನ ಆಸೆಗಳನ್ನೂ
ಮೂಳೆಯಷ್ಟು ಗಟ್ಟಿಯಾದ ಅಹಂಕಾರವನ್ನೂ
ಮಾಂಸಲ ಮೃದು ಪ್ರೀತಿಯನ್ನೂ
ಕನ್ನಡಿ ನೋಡಿತು.

ನಾನು ಮೊಳಕೆಯೊಡೆದು ಸಸಿಯಾಗಿ
ಮರವಾಗಿ ಮೆರೆದದ್ದನ್ನು
ಕನ್ನಡಿ ನೋಡಿತು.

ಮೊಗ್ಗರಳಿ ಹೂವಾಗಿ
ಹಣ್ಣಾಗಿ ಮಾಡಿ ಮರುಗಿದ
ನನ್ನನ್ನು ಕನ್ನಡಿ ನೋಡಿತು.

ಕನ್ನಡಿ ನನ್ನನ್ನು ಪ್ರೀತಿಸಲಿಲ್ಲ
ಕನ್ನಡಿ ನನ್ನನ್ನು ತಿರಸ್ಕರಿಸಲಿಲ್ಲ
ಅದು ನನ್ನನ್ನು ಸುಮ್ಮನೆ ನೋಡಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...