Home / ಕವನ / ಹನಿಗವನ / ಹನಿಗಳು

ಹನಿಗಳು

ಇಲ್ಲಿ
ಸಣ್ಣಗೆ ಮಳೆ
ನಿನ್ನೆದುರು
ಕುಳಿತು
ಧ್ಯಾನಿಸಿದಂತೆ


ಮಗು
ಆಕೆಯ ತೊಡೆಯ
ಮೇಲೆ
ಹರಿದಾಡಿತು
ನದಿ
ನಡೆದು
ಹಾಡಿದಂತೆ


ನಿನ್ನೆದುರೇ
ರಮ್ಯತೆ
ಹುಟ್ಟುವುದಾದರೆ
ನಾನು
ಮರವಾಗುವೆ
ನೀ ಅಲ್ಲಿ
ಹೂವಾಗು


ಕಡಲು ಅಬ್ಬರಿಸುತ್ತಿದೆ
ಮೋಡ ಧ್ಯಾನಿಸುತ್ತಿದೆ
ಆಕಾಶದ ಬಯಲಲ್ಲಿ
ಆಕೆ
ಬರುವ ಸುಳಿವು ಸಿಕ್ಕಿದೆ
ಮುಂಗಾರಿನ ಹಂಗಾಮಿನಲ್ಲಿ


ಬಿಸಿಲ ಬಯಲ ಕಡಲ ಮೇಲೆ
ಸುಳಿದು ಬೀಸುವ ಗಾಳಿ
ಆಕೆಯ ನೆನಪಗಂಧವ ತರಲು
ದಂಡೆಯಲ್ಲಿನ ಹಕ್ಕಿ ನಾಚಿತು


ದಂಡೆಯಲ್ಲಿ ಅವರು
ನಡೆದು ಹೋದರು
ಜೋಡಿ ಹೆಜ್ಜೆಗೆ ನೆರಳು ಸಾಕ್ಷಿ
ಹೆಜ್ಜೆಗಳಲ್ಲಿ ಒಲವು ನಗುತ್ತಿತ್ತು
ಅವರ
ಪಾದಗಳಿಗೆ
ಮುತ್ತಿಕ್ಕಿದ್ದ ಅಲೆ
ಪ್ರೇಮ ಪಲ್ಲವಿ ಬರೆಯುತ್ತಿತ್ತು.


ಬಟಾ ಬಯಲು
ವಿಶಾಲ ಕಡಲ ಬಾಗಿಲೊಳಗೆ
ನುಸುಳಿದೆ ಬೆಳಗು
ಅದು ಬೇರೇನು ಅಲ್ಲ ;
ನಿನ್ನದೇ ಉಸಿರು


ಉರಿ ಉರಿ ಬಿಸಿಲು
ಬರ ಬರನೆ ಬೀಸುವ ಗಾಳಿ
ಗಾಳಿಗೆ ಮೈ ಮುರಿದೇಳುವ ಕಡಲು
ಮುಗಿಲಿಗೆ ದಿಗಿಲು ಬಡಿದಂತೆ
ನೋಡುವ ಅವಳು


ಸಾಕು ಸಾಕಾಗಿದೆ ಈ ಬಿಸಿಲು
ಎಷ್ಟು ಋತುಗಳ ಕಳೆದೆನೋ ಹೀಗೆ
ಒಂಟಿಯಾಗಿ ಒಬ್ಬಂಟಿಯಾಗಿ
ಏಕಾಂಗಿಯಾಗಿ
ಜೊತೆಗೆ ಬುದ್ಧನೂ ನಿಲ್ಲಲಿಲ್ಲ
ರೂಮಿಯೂ ನಿಲ್ಲಲಿಲ್ಲ
ಎಲ್ಲರೂ ಬೆಳಕ ಬೆನ್ನ ಹತ್ತಿದವರೇ
ನಾನು ಕಾದಿದ್ದೇನೆ
ನಿನಗಾಗಿ ; ನಿನ್ನ ಕಿರುನಗೆಗಾಗಿ


ಇರುಳು ಹಗಲು ನದಿ ಕಡಲು
ಬೆಡಗು ಬಯಲು ಹಕ್ಕಿ ಚುಕ್ಕಿ
ಇಳೆ ಮಳೆ ಆಕಾಶ ಚಂದಿರ
ಒಂದಾದವು
ಒಂದಾದ ಮೇಲೊಂದರಂತೆ
ದಶಕಗಳು ಕಳೆದವು
ನಾವು ಇಲ್ಲೇ ಇದ್ದೇವೆ
ಚಲನೆಯೊಳಗೂ ಚಲನೆ ಮರೆತು
ಮೌನದೊಳಗು ಮಾತು ಮೊರೆತು


ಬಯಲ ಬೆಳಕು ಕೂಡಿತು
ಕ್ಷಿತಿಜ ಭೂ ಆಕಾಶ ಬೆಸೆಯಿತು
ಅದರಾಚೆಯ ಹುಡುಕಾಟ
ನನಗೂ ನಿನಗೂ


Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...