Home / ಕವನ / ಹನಿಗವನ / ಹನಿಗಳು

ಹನಿಗಳು

ಇಲ್ಲಿ
ಸಣ್ಣಗೆ ಮಳೆ
ನಿನ್ನೆದುರು
ಕುಳಿತು
ಧ್ಯಾನಿಸಿದಂತೆ


ಮಗು
ಆಕೆಯ ತೊಡೆಯ
ಮೇಲೆ
ಹರಿದಾಡಿತು
ನದಿ
ನಡೆದು
ಹಾಡಿದಂತೆ


ನಿನ್ನೆದುರೇ
ರಮ್ಯತೆ
ಹುಟ್ಟುವುದಾದರೆ
ನಾನು
ಮರವಾಗುವೆ
ನೀ ಅಲ್ಲಿ
ಹೂವಾಗು


ಕಡಲು ಅಬ್ಬರಿಸುತ್ತಿದೆ
ಮೋಡ ಧ್ಯಾನಿಸುತ್ತಿದೆ
ಆಕಾಶದ ಬಯಲಲ್ಲಿ
ಆಕೆ
ಬರುವ ಸುಳಿವು ಸಿಕ್ಕಿದೆ
ಮುಂಗಾರಿನ ಹಂಗಾಮಿನಲ್ಲಿ


ಬಿಸಿಲ ಬಯಲ ಕಡಲ ಮೇಲೆ
ಸುಳಿದು ಬೀಸುವ ಗಾಳಿ
ಆಕೆಯ ನೆನಪಗಂಧವ ತರಲು
ದಂಡೆಯಲ್ಲಿನ ಹಕ್ಕಿ ನಾಚಿತು


ದಂಡೆಯಲ್ಲಿ ಅವರು
ನಡೆದು ಹೋದರು
ಜೋಡಿ ಹೆಜ್ಜೆಗೆ ನೆರಳು ಸಾಕ್ಷಿ
ಹೆಜ್ಜೆಗಳಲ್ಲಿ ಒಲವು ನಗುತ್ತಿತ್ತು
ಅವರ
ಪಾದಗಳಿಗೆ
ಮುತ್ತಿಕ್ಕಿದ್ದ ಅಲೆ
ಪ್ರೇಮ ಪಲ್ಲವಿ ಬರೆಯುತ್ತಿತ್ತು.


ಬಟಾ ಬಯಲು
ವಿಶಾಲ ಕಡಲ ಬಾಗಿಲೊಳಗೆ
ನುಸುಳಿದೆ ಬೆಳಗು
ಅದು ಬೇರೇನು ಅಲ್ಲ ;
ನಿನ್ನದೇ ಉಸಿರು


ಉರಿ ಉರಿ ಬಿಸಿಲು
ಬರ ಬರನೆ ಬೀಸುವ ಗಾಳಿ
ಗಾಳಿಗೆ ಮೈ ಮುರಿದೇಳುವ ಕಡಲು
ಮುಗಿಲಿಗೆ ದಿಗಿಲು ಬಡಿದಂತೆ
ನೋಡುವ ಅವಳು


ಸಾಕು ಸಾಕಾಗಿದೆ ಈ ಬಿಸಿಲು
ಎಷ್ಟು ಋತುಗಳ ಕಳೆದೆನೋ ಹೀಗೆ
ಒಂಟಿಯಾಗಿ ಒಬ್ಬಂಟಿಯಾಗಿ
ಏಕಾಂಗಿಯಾಗಿ
ಜೊತೆಗೆ ಬುದ್ಧನೂ ನಿಲ್ಲಲಿಲ್ಲ
ರೂಮಿಯೂ ನಿಲ್ಲಲಿಲ್ಲ
ಎಲ್ಲರೂ ಬೆಳಕ ಬೆನ್ನ ಹತ್ತಿದವರೇ
ನಾನು ಕಾದಿದ್ದೇನೆ
ನಿನಗಾಗಿ ; ನಿನ್ನ ಕಿರುನಗೆಗಾಗಿ


ಇರುಳು ಹಗಲು ನದಿ ಕಡಲು
ಬೆಡಗು ಬಯಲು ಹಕ್ಕಿ ಚುಕ್ಕಿ
ಇಳೆ ಮಳೆ ಆಕಾಶ ಚಂದಿರ
ಒಂದಾದವು
ಒಂದಾದ ಮೇಲೊಂದರಂತೆ
ದಶಕಗಳು ಕಳೆದವು
ನಾವು ಇಲ್ಲೇ ಇದ್ದೇವೆ
ಚಲನೆಯೊಳಗೂ ಚಲನೆ ಮರೆತು
ಮೌನದೊಳಗು ಮಾತು ಮೊರೆತು


ಬಯಲ ಬೆಳಕು ಕೂಡಿತು
ಕ್ಷಿತಿಜ ಭೂ ಆಕಾಶ ಬೆಸೆಯಿತು
ಅದರಾಚೆಯ ಹುಡುಕಾಟ
ನನಗೂ ನಿನಗೂ


Tagged:

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...