Home / ಕವನ / ಹನಿಗವನ / ಹನಿಗಳು

ಹನಿಗಳು

ಇಲ್ಲಿ
ಸಣ್ಣಗೆ ಮಳೆ
ನಿನ್ನೆದುರು
ಕುಳಿತು
ಧ್ಯಾನಿಸಿದಂತೆ


ಮಗು
ಆಕೆಯ ತೊಡೆಯ
ಮೇಲೆ
ಹರಿದಾಡಿತು
ನದಿ
ನಡೆದು
ಹಾಡಿದಂತೆ


ನಿನ್ನೆದುರೇ
ರಮ್ಯತೆ
ಹುಟ್ಟುವುದಾದರೆ
ನಾನು
ಮರವಾಗುವೆ
ನೀ ಅಲ್ಲಿ
ಹೂವಾಗು


ಕಡಲು ಅಬ್ಬರಿಸುತ್ತಿದೆ
ಮೋಡ ಧ್ಯಾನಿಸುತ್ತಿದೆ
ಆಕಾಶದ ಬಯಲಲ್ಲಿ
ಆಕೆ
ಬರುವ ಸುಳಿವು ಸಿಕ್ಕಿದೆ
ಮುಂಗಾರಿನ ಹಂಗಾಮಿನಲ್ಲಿ


ಬಿಸಿಲ ಬಯಲ ಕಡಲ ಮೇಲೆ
ಸುಳಿದು ಬೀಸುವ ಗಾಳಿ
ಆಕೆಯ ನೆನಪಗಂಧವ ತರಲು
ದಂಡೆಯಲ್ಲಿನ ಹಕ್ಕಿ ನಾಚಿತು


ದಂಡೆಯಲ್ಲಿ ಅವರು
ನಡೆದು ಹೋದರು
ಜೋಡಿ ಹೆಜ್ಜೆಗೆ ನೆರಳು ಸಾಕ್ಷಿ
ಹೆಜ್ಜೆಗಳಲ್ಲಿ ಒಲವು ನಗುತ್ತಿತ್ತು
ಅವರ
ಪಾದಗಳಿಗೆ
ಮುತ್ತಿಕ್ಕಿದ್ದ ಅಲೆ
ಪ್ರೇಮ ಪಲ್ಲವಿ ಬರೆಯುತ್ತಿತ್ತು.


ಬಟಾ ಬಯಲು
ವಿಶಾಲ ಕಡಲ ಬಾಗಿಲೊಳಗೆ
ನುಸುಳಿದೆ ಬೆಳಗು
ಅದು ಬೇರೇನು ಅಲ್ಲ ;
ನಿನ್ನದೇ ಉಸಿರು


ಉರಿ ಉರಿ ಬಿಸಿಲು
ಬರ ಬರನೆ ಬೀಸುವ ಗಾಳಿ
ಗಾಳಿಗೆ ಮೈ ಮುರಿದೇಳುವ ಕಡಲು
ಮುಗಿಲಿಗೆ ದಿಗಿಲು ಬಡಿದಂತೆ
ನೋಡುವ ಅವಳು


ಸಾಕು ಸಾಕಾಗಿದೆ ಈ ಬಿಸಿಲು
ಎಷ್ಟು ಋತುಗಳ ಕಳೆದೆನೋ ಹೀಗೆ
ಒಂಟಿಯಾಗಿ ಒಬ್ಬಂಟಿಯಾಗಿ
ಏಕಾಂಗಿಯಾಗಿ
ಜೊತೆಗೆ ಬುದ್ಧನೂ ನಿಲ್ಲಲಿಲ್ಲ
ರೂಮಿಯೂ ನಿಲ್ಲಲಿಲ್ಲ
ಎಲ್ಲರೂ ಬೆಳಕ ಬೆನ್ನ ಹತ್ತಿದವರೇ
ನಾನು ಕಾದಿದ್ದೇನೆ
ನಿನಗಾಗಿ ; ನಿನ್ನ ಕಿರುನಗೆಗಾಗಿ


ಇರುಳು ಹಗಲು ನದಿ ಕಡಲು
ಬೆಡಗು ಬಯಲು ಹಕ್ಕಿ ಚುಕ್ಕಿ
ಇಳೆ ಮಳೆ ಆಕಾಶ ಚಂದಿರ
ಒಂದಾದವು
ಒಂದಾದ ಮೇಲೊಂದರಂತೆ
ದಶಕಗಳು ಕಳೆದವು
ನಾವು ಇಲ್ಲೇ ಇದ್ದೇವೆ
ಚಲನೆಯೊಳಗೂ ಚಲನೆ ಮರೆತು
ಮೌನದೊಳಗು ಮಾತು ಮೊರೆತು


ಬಯಲ ಬೆಳಕು ಕೂಡಿತು
ಕ್ಷಿತಿಜ ಭೂ ಆಕಾಶ ಬೆಸೆಯಿತು
ಅದರಾಚೆಯ ಹುಡುಕಾಟ
ನನಗೂ ನಿನಗೂ


Tagged:

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಹರಪನಹಳ್ಳಿ ನಾಗರಾಜ್