Home / ಕವನ / ಕವಿತೆ / ಬಸಿಯಿಂದ ಕುಡಿಯುವದು

ಬಸಿಯಿಂದ ಕುಡಿಯುವದು

ನನಗೆಂದೂ ಅದೃಷ್ಟ ಒಲಿದಿಲ್ಲ
ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ
ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ
ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ !

ಸಾಗುತಿರುವ ನನ್ನೀ ಪಯಣದ ದಾರಿಯಲಿ
ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ.
ನಾ ಬಸಿಯಿಂದಲೇ ಕುಡಿಯುತಿರುವೆ,
ಯಾಕೆನ್ನಿ,ನನ್ನ ಕಪ್ಪು ತುಂಬಿ ತುಳುಕಿದೆ !

ನಾನೇನು ಮಹಾ ಸಿರಿವಂತನೇನಲ್ಲ;
ಅಗೊಮ್ಮೆ ಈಗೊಮ್ಮೆ ದುರ್ಭರ ಎನಿಸಿದೆ
ಆದರೂ,ಸಂಬಂಧಿಕರ,ಸ್ನೇಹಿತರ ಒಲವಿನಿಂದಾಗಿ,
ನಾನೂ, ಸಾಕಷ್ಟು ಸಿರಿವಂತ ಎಂದೆನಿಸುತಿದೆ !

ಆ ದೇವನ ಆಶೀರ್ವಾದಕೆ ಧನ್ಯವಾದಗಳು
ಅವನ ಕೃಪೆ ಎನ್ನ ಮೇಲೆ ಪೂರ್ಣ ಇದೆ
ನಾ ಬಸಿಯಿಂದಲೇ ಕುಡಿಯುತಿರುವೆ
ಯಾಕೆನ್ನಿ ನನ್ನ ಕಪ್ಪು ತುಂಬಿ ತುಳುಕಿದೆ !

ಧೈರ್ಯ, ಸಾಮರ್ಥ್ಯ ಗಳು ಅವನವೇ ಬಳುವಳಿ
ಸಾಗುವ ದಾರಿ,ಏರು ದುರ್ಗಮ ಎನಿಸಿದಾಗೆಲ್ಲ,
ಮತ್ತೊಮ್ಮೆ,ಹಾರೈಸು ಎಂದು ನಾ ಬೇಡುವುದೇ ಇಲ್ಲ
ಈಗಾಗಲೇ ಸಾಕಷ್ಟು ಹರಸಿರುವ ಅವನು !

ನಾವು ಎಂದೂ ನಿರತರಾಗದೇ ಇರೋಣ
ಮತ್ತೊಂದು ಸಹಾಯಕ ಭಾರ ಭರಿಸೋಣ
ಆಗ ನಾವೆಲ್ಲರೂ ಬಸಿಯಿಂದಲೇ ಕುಡಿಯೋಣ
ನಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕಿದಾಗ !

ನಿಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕುವಂತಾಗಲಿ

ಮೂಲ: ಜಾನ್ ಪಾಲ್ ಮೂರ್
Drinking From The Saucer by John Paul Moore


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...