Home / ಕವನ / ಕವಿತೆ / ಬಸಿಯಿಂದ ಕುಡಿಯುವದು

ಬಸಿಯಿಂದ ಕುಡಿಯುವದು

ನನಗೆಂದೂ ಅದೃಷ್ಟ ಒಲಿದಿಲ್ಲ
ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ
ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ
ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ !

ಸಾಗುತಿರುವ ನನ್ನೀ ಪಯಣದ ದಾರಿಯಲಿ
ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ.
ನಾ ಬಸಿಯಿಂದಲೇ ಕುಡಿಯುತಿರುವೆ,
ಯಾಕೆನ್ನಿ,ನನ್ನ ಕಪ್ಪು ತುಂಬಿ ತುಳುಕಿದೆ !

ನಾನೇನು ಮಹಾ ಸಿರಿವಂತನೇನಲ್ಲ;
ಅಗೊಮ್ಮೆ ಈಗೊಮ್ಮೆ ದುರ್ಭರ ಎನಿಸಿದೆ
ಆದರೂ,ಸಂಬಂಧಿಕರ,ಸ್ನೇಹಿತರ ಒಲವಿನಿಂದಾಗಿ,
ನಾನೂ, ಸಾಕಷ್ಟು ಸಿರಿವಂತ ಎಂದೆನಿಸುತಿದೆ !

ಆ ದೇವನ ಆಶೀರ್ವಾದಕೆ ಧನ್ಯವಾದಗಳು
ಅವನ ಕೃಪೆ ಎನ್ನ ಮೇಲೆ ಪೂರ್ಣ ಇದೆ
ನಾ ಬಸಿಯಿಂದಲೇ ಕುಡಿಯುತಿರುವೆ
ಯಾಕೆನ್ನಿ ನನ್ನ ಕಪ್ಪು ತುಂಬಿ ತುಳುಕಿದೆ !

ಧೈರ್ಯ, ಸಾಮರ್ಥ್ಯ ಗಳು ಅವನವೇ ಬಳುವಳಿ
ಸಾಗುವ ದಾರಿ,ಏರು ದುರ್ಗಮ ಎನಿಸಿದಾಗೆಲ್ಲ,
ಮತ್ತೊಮ್ಮೆ,ಹಾರೈಸು ಎಂದು ನಾ ಬೇಡುವುದೇ ಇಲ್ಲ
ಈಗಾಗಲೇ ಸಾಕಷ್ಟು ಹರಸಿರುವ ಅವನು !

ನಾವು ಎಂದೂ ನಿರತರಾಗದೇ ಇರೋಣ
ಮತ್ತೊಂದು ಸಹಾಯಕ ಭಾರ ಭರಿಸೋಣ
ಆಗ ನಾವೆಲ್ಲರೂ ಬಸಿಯಿಂದಲೇ ಕುಡಿಯೋಣ
ನಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕಿದಾಗ !

ನಿಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕುವಂತಾಗಲಿ

ಮೂಲ: ಜಾನ್ ಪಾಲ್ ಮೂರ್
Drinking From The Saucer by John Paul Moore


Tagged:

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...