ಪ್ರಕೃತಿ

ಕಾಲರಾಯನ ಗರ್ಭದಿಂದ
ಸೀಳಿ ಬಂದೆನು ದೇಹದೊಡನೆ
ವೇಳೆ ಮುಗಿದರೆ ನಿಲ್ಲಲಾರೆನು
ತಾಳು ನಿನ್ನನ್ನು ನುತಿಪೆನು

ನನ್ನ ಹಿಂದಿನ ಸುಕೃತ ಫಲವೊ
ನಿನ್ನ ಕರುಣದ ಸಿದ್ಧಿಬಲವೊ
ಮಾನ್ಯ ಗುರು ಸರ್ವೇಶನೊಲವಿಂ
ಮಾನವತ್ವವ ಪಡೆದೆನು

ಮಾರುಹೋದೆನು ಜಗವ ನೋಡಿ
ಸೂರೆಗೊಂಡೆನು ಸುಧೆಯನಿಲ್ಲಿ
ಯಾರು ಅರಿಯದ ನಿನ್ನ ಕೃತಿಗಿದೊ
ಸರ್ವಶಕ್ತನೆ ಮಣಿವೆನು

ನಿತ್ಯವೆಂಬಾ ಜ್ಞಾನದೊಡನೆ
ಸತ್ಯವೆಂಬಾ ಸೊಡರ ಹೊತ್ತು
ನೂತ್ನ ನೂತನವಾಗಿ ಇಲ್ಲಿ
ಓಡುತಿರುವಳು ಪ್ರಕೃತಿಯು

ಯುಗ ಯುಗಂಗಳ ಸವರಿ ಬಂದು
ಬಗೆ ಬಗೆಯ ಸುದ್ದಿಗಳ ತಂದು
ಸಿಗದೆ ಯಾರನು ಲೆಕ್ಕಿಸದೆ ತಾ-
ನೋಡುತಿರುವಳು ಪ್ರಕೃತಿಯು

ಮಳೆಯ ರೂಪವನೊಮ್ಮೆ ತಾಳಿ
ಬೆಳೆಯ ಗುಣವನು ಒಮ್ಮೆ ತಾಳಿ
ಇಳೆಯ ಜೀವರನೆಲ್ಲ ಸಲಹುತ
ಓಡುತಿರುವಳು ಪ್ರಕೃತಿಯು

ಹರಿವ ಝರಿಗಳ ಮಾಲೆ ಧರಿಸಿ
ಧರೆಯ ತರುಗಳ ಪುಷ್ಪ ಮುಡಿದು
ಗಿರಿಯ ಧ್ವಜಗಳನೆತ್ತಿ ಹಿಡಿದು
ಓಡುತಿರುವಳು ಪ್ರಕೃತಿಯು

ಚೆನ್ನೆ ಚೆಲುವೆಯು ಜಗವ ಬೆಳಗಿ
ತನ್ನ ಬಾಹುಗಳೊಳಗೆ ಅಪ್ಪಿ
‘ಬನ್ನಿರೋ ನನ್ನೊಡನೆ’ ಎಂದು
ಓಡುತಿರುವಳು ಪ್ರಕೃತಿಯು

ಸ್ವರ್ಗ ನರಕವನಿಲ್ಲೆ ಸೃಜಿಸಿ
ಆರ್ಘವೆನಿಸುವ ಋತುವ ನಿಲಿಸಿ
ದಿಗ್ಗಜಂಗಳನೆಲ್ಲ ಬಳಸಿ
ಓಡುತಿರುವಳು ಪ್ರಕೃತಿಯು

ಸ್ನಿಗ್ಧಮಯದಾ ಒಡಲಿನೊಳಗೆ
ಪ್ರಾಜ್ಞರನು ಆದರದಿ ಹೊತ್ತು
ಸಗ್ಗದೂಟವ ಜಗಕೆ ಉಣಿಸುತ
ಓಡುತಿರುವಳು ಪ್ರಕೃತಿಯು

ಲಗ್ಗೆ ಎಬ್ಬಿಸುತೊಮ್ಮೆ ಕುಣಿದು
ನುಗ್ಗಿ ಜಯಿಸುತಲೊಮ್ಮೆ ನಲಿದು
ಅಗ್ನಿಜ್ವಾಲೆಯನೊಮ್ಮೆ ಉಗಿದು
ಓಡುತಿರುವಳು ಪ್ರಕೃತಿಯು

ಸಾರಸುಗುಣೆ ಸರ್ವಶಕ್ತ
ಧೀರೆ ಬಹು ಲಾವಣ್ಯಪೂತೆ
ಕಾರಣಾನ್ವಿತೆ ಅಂತ್ಯರಹಿತೆ
ಓಡುತಿರುವಳು ನಿರುತವು

ದೇವ ನಿನ್ನಯ ಸೃಷ್ಟಿಯೊಳಗೆ
ಆವ ಭಾಗವ ತಿಳಿಯಲಳವು
ಕೋವಿದನೆ ಈ ಪ್ರಕೃತಿ ಮಾತೆಗೆ
ಜನಕಜೆಯು ಕರ ಮುಗಿವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯಬಲ್ಲೆ ನಾ ಕೃಷ್ಣ
Next post ಲಾಲ್‌ಬಾಗ್

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…