ಕಾಯಬಲ್ಲೆ ನಾ ಕೃಷ್ಣ

ಕಾಯಬಲ್ಲೆ ನಾ ಕೃಷ್ಣ ಗೋಪಿಯರ
ಮನೆಗೆ ಹೋಗದಂತೆ
ಹೇಗೆ ಕಾಯಲೇ ಗೋಪಿಯರು
ಅವನ ಕಾಡದಂತೆ ?

ಸಾಕಾಗಿದೆಯೆ ದಿನವೂ ಮನೆಗೆ
ಬರುವರು ಗೋಪಿಯರು
ಶಿಕ್ಷೆಯ ನೆಪದಲಿ ಕೃಷ್ಣನ ಬಾಚಿ
ಕೆನ್ನೆಯ ಹಿಂಡುವರು!

ಸೆರಗನು ಸೆಳೆದ, ಮುಡಿಯನು ಎಳೆದ
ಎನುವರು ಕಳ್ಳಿಯರು
ಸೆರಗು ಮುಡಿಗಳ ಹುಡುಗನ ಕೈಗೆ
ಇವರೇ ಚಾಚುವರು!

ಅರಿಯದ ಕಂದ ಎಳೆದಿರಬಹುದು
ಕೈಗೆ ಸಿಕ್ಕುದನ್ನು.
ಮುಟ್ಟಿ, ಅಪ್ಪಿ, ಶಿಕ್ಷಿಸಲೆಂದೇ
ಅವರ ಎಲ್ಲ ದೂರು!

ಗೋಪಿಯರೆಲ್ಲಾ ಹಿಂಡಿ ಹಿಸುಕಿ
ಹೇಗಾಯಿತೆ ಕಂದ!
ಕಾಯಲಿ ಹೇಗೆ ಈ ಮನ್ಮಥನ
ಗೋಪೀದಾಳಿಯಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೧೦
Next post ಪ್ರಕೃತಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys