ದೇಶದ ಕೃಷಿಕನೇ

ಕೃಷಿ ಮಾಡುವ ರೈತನೆ ನೀನು
ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು
ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು

ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು
ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು
ತನ್ನ ಸಹಾಯಕ್ಕಾಗಿ ಎರಡೆತ್ತು ತೆಗೆದು
ಹೊಲವನ್ನು ಚನ್ನಾಗಿ ಉಳುಮೆ ಮಾಡುವನು ನೀನು.

ಹೊಲವನ್ನು ಚನ್ನಾಗಿ ಉಳುಮೆ ಮಾಡಿ
ಬೀಜ ಉತ್ತಿಬಿತ್ತಿ ಮಳೆಯರಾಯನಿಗಾಗಿ ಕಾಯುವನು ನೀನು
ಮಳೆರಾಯ ಸರಿಯಾಗಿ ಸಮಯಕ್ಕೆ ಬಂದರೆ
ಭೂತಾಯಿ ಬೆಳೆದು ಹೊತ್ತುಕೊಂಡು ನಿಲುವಳು.

ರಿಕ್ತತೆಯ ಬಡತನದಿ ಬಳಲುತ
ಸುಖಮಯ ಜೀವನ ಸಾಗಿಸುವನು ನೀನು
ಭೂಮಿತಾಯಿ ಹೊತ್ತುಕೊಂಡು ನಿಂತ ಬೆಳೆ
ಕಂಡು ಹೃದಯದಿ ಸಂತಸ ಪಡುವನು ನೀನು.

ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರವೆಂದು
ಅರಿತು ಆರ್ಥಿಕ ಪ್ರಗತಿ ಸಾಧಿಸುವನು ನೀನು
ಹಬ್ಬ ಹರಿದಿನಗಳಲ್ಲಿ ಭೂತಾಯಿಗೆ ಗೌರವದಿ
ಪೂಜ್ಯನೆ ಭಾವದಿ ಆರಾಧಿಸುವನು ನೀನು.

ಯಾರ ಜೀವನದ ಬಗ್ಗೆ ಅವಹೇಳನ ಬಯಸದೇ
ತನ್ನ ಜೀವನದಿ ತಾ ಒಳಿತನು ಬಯಸುವನು
ಯಾರ ವಿಮರ್ಶೆಗೆ ಬಲಿಯಾಗದೇ ತಾ
ಸರೋವರದಂತೆ ಜೀವನ ಸಾಗಿಸುವನು ನೀನು.

ಗುರಿ ಮುಟ್ಟುವದಕ್ಕೆ ಸತತ ಸಾಧನೆ ಗೈದಿ
ಧಾನ್ಯ ಬೆಳೆಸುವಲ್ಲಿ ನೀ ಸಫಲನಾದಿ
ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನಾದಿ
ಜಗವಿರುವವರೆಗೆ ಜಗಭರಿತ ರೈತ ನೀ ನಾದಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು
Next post ಶಾಕಿಂಗ್ ಪ್ರೇಮ ಪ್ರಕರಣ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…