ದೇಶದ ಕೃಷಿಕನೇ

ಕೃಷಿ ಮಾಡುವ ರೈತನೆ ನೀನು
ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು
ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು

ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು
ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು
ತನ್ನ ಸಹಾಯಕ್ಕಾಗಿ ಎರಡೆತ್ತು ತೆಗೆದು
ಹೊಲವನ್ನು ಚನ್ನಾಗಿ ಉಳುಮೆ ಮಾಡುವನು ನೀನು.

ಹೊಲವನ್ನು ಚನ್ನಾಗಿ ಉಳುಮೆ ಮಾಡಿ
ಬೀಜ ಉತ್ತಿಬಿತ್ತಿ ಮಳೆಯರಾಯನಿಗಾಗಿ ಕಾಯುವನು ನೀನು
ಮಳೆರಾಯ ಸರಿಯಾಗಿ ಸಮಯಕ್ಕೆ ಬಂದರೆ
ಭೂತಾಯಿ ಬೆಳೆದು ಹೊತ್ತುಕೊಂಡು ನಿಲುವಳು.

ರಿಕ್ತತೆಯ ಬಡತನದಿ ಬಳಲುತ
ಸುಖಮಯ ಜೀವನ ಸಾಗಿಸುವನು ನೀನು
ಭೂಮಿತಾಯಿ ಹೊತ್ತುಕೊಂಡು ನಿಂತ ಬೆಳೆ
ಕಂಡು ಹೃದಯದಿ ಸಂತಸ ಪಡುವನು ನೀನು.

ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರವೆಂದು
ಅರಿತು ಆರ್ಥಿಕ ಪ್ರಗತಿ ಸಾಧಿಸುವನು ನೀನು
ಹಬ್ಬ ಹರಿದಿನಗಳಲ್ಲಿ ಭೂತಾಯಿಗೆ ಗೌರವದಿ
ಪೂಜ್ಯನೆ ಭಾವದಿ ಆರಾಧಿಸುವನು ನೀನು.

ಯಾರ ಜೀವನದ ಬಗ್ಗೆ ಅವಹೇಳನ ಬಯಸದೇ
ತನ್ನ ಜೀವನದಿ ತಾ ಒಳಿತನು ಬಯಸುವನು
ಯಾರ ವಿಮರ್ಶೆಗೆ ಬಲಿಯಾಗದೇ ತಾ
ಸರೋವರದಂತೆ ಜೀವನ ಸಾಗಿಸುವನು ನೀನು.

ಗುರಿ ಮುಟ್ಟುವದಕ್ಕೆ ಸತತ ಸಾಧನೆ ಗೈದಿ
ಧಾನ್ಯ ಬೆಳೆಸುವಲ್ಲಿ ನೀ ಸಫಲನಾದಿ
ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನಾದಿ
ಜಗವಿರುವವರೆಗೆ ಜಗಭರಿತ ರೈತ ನೀ ನಾದಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು
Next post ಶಾಕಿಂಗ್ ಪ್ರೇಮ ಪ್ರಕರಣ

ಸಣ್ಣ ಕತೆ

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…