Home / ಕವನ / ಕವಿತೆ / ಶರಣ ಪಥ

ಶರಣ ಪಥ

ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ
ತಿಳಿಯಲಾರೆಯಾ ತಿಂಗಳನ ಬೆಳಕು ?
ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ !
ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು!

ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ
ಆ ಶರಣ ಸಾತ್ವಿಕತೆಯ ಸವಿಯ ಬಾ
ಲಾಸ್ಯ ಲಾವಣ್ಯದ ಲೀಲಾ ಬಲೆಗೆ ನೀನು
ಬಲಿಯಾಗದೇ ಭಾಗ್ಯವರಸ ಬಾ

ಮಿಂಚಿ ಬಂದಿಹವು ಮಾಯಜಾಲದ ಹಕ್ಕಿಗಳು
ಬಣ್ಣ ಬಲುಚಂದ; ನಾದ ಅಂದ
ಹಿಡಿಯಲೆಳಸಿ ಬೆಂಬತ್ತಿದೊಡೆ ಬಾಳು ಹಾಳು
ಕೇಳಿ ತಿಳಿದೇಳು ಶರಣರಿಂದ

ಶ್ಯಾಮವರ್ಣದ ಮಾಯ ಮುಗಿಲಿನಲಿ ಮಿಂಚಾಗಿ
ಚಿಮ್ಮಿಯದ್ದಳದೋ ಮಹದೇವಿಯಕ್ಕ
ಕಾರಿರುಳ ಕರಗಿಸಿ ಸಿಡಿವ ಕಡು ಸಿಡಿಲಾಗಿ
ಬಡಿದಳದೋ ಕಾಡಿಗೆ ಎಮ್ಮ ಭಾಗ್ಯದಕ್ಕ

ಸತ್ಯ ಮಿಥ್ಯದ ಘೋರ ರೌದ್ರ ರಣವು
ಬೆಳಕು ಕತ್ತಲೆಯ ವೀರ ಬಣವು
ನಮ್ಮ ಶರಣವೃಂದದ ಭಕ್ತಿ ಕಹಳೆ ಕೂಗಿದವು
ಶರಣರಿಗಿದಿರಾದ ಅಸುರರಿನ್ನಾವು?

ಮೌಡ್ಯ ಜಾಡ್ಯದ ಜಾಲ ಆವರಿಸಿ ನಿಂದಾಗ
ಬಂದರದೋ ಅವತಾರಿ ಅಲ್ಲಮರು
ಕಲ್ಯಾಣ ಮೇಲೆದ್ದು ; ಶೂನ್ಯಸಿಂಹಾಸನ ನಿಂದಾಗ
ಕ್ರೌರ್ಯ ತಿಮಿರದ ರೌದ್ರ ಶಾಂತ ಮಾಡಿದರು

ಸಾಸಿರಕು ಮಿಗಿಲಾದ ಲಿಂಗದೇವನ ದೂತರು
ಬಂದು ನಿಂದಾಗ ಬಸವಳಿದ ನೀನಾರು?
ದಾರಿಯರಿಯದ ನಿನಗೆ ಕಾದುನಿಂದಾಗ ಶರಣರು
ಎಣ್ಣೆದೀವಿಗೆ ಹಿಡಿದ ಧೀರ ಇನ್ನಾರು ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...