Home / ಕವನ / ಕವಿತೆ / ಗುಬ್ಬಿ

ಗುಬ್ಬಿ

ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು!
ವಿರಸವರಿಯದ ಸರಸ ಸೊಗಸು ಏನು?
ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು
ಸುಖಜನ್ಮ ಸಾರ್ಥಕತೆ ನಿಮಗೆ ಏನು?

ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ?
ಆಚೆಯಾ ಗಿಡದ ಪಕ್ಕದಾ ಹೊಲಕೋ?
ಗುಡ್ಡದೋರೆ‌ಇಂದಿಳೆವ ತಿಳಿ ಝರಿಯ ಸುಧೆಗೋ ?
ಓ ನಿಮ್ಮ ತಿಳ್ಳಿಯಾಟ ತಿಳಿಯದೇಕೋ!

ಎನಿತು ಸೊಗಸಿನ ಇರವು! ಜೀವ ಪಾವನವು!!
ಅರಮನೆಯ ಆ ವಾಸ ಇದಕೆ ಇನ್ನೇನು?
ಮಾರುತನು ತೂಗುವಾ ಟೊಂಗೆಯೊಳು ನಿಮ್ಮ ಬಿಲವು
ಎತ್ತರದ ಮನೆಯಲ್ಲೂ ನಿಮ್ಮ ಇರವೇನು!

ಚಿಕ್ಕ ಒಡಲಿನ ಮೇಲೆ ಕಿರಿಯ ರೆಕ್ಕೆಗಳಿಹವು
ಏನು ಗಾರುಡಿ! ಅಂದದುಕ್ಕೇನು, ಜಂಭವೇನು!
ಹಾರುತೆ ಗಾಳಿ ಬಯಲೊಳಗೆ ಆಡುವ ನೀವು,
ಸರ್ಗ ಜೀವಿಗೂ ನಿಮಗೂ ಅಂತರವೇನು?

ಮುತ್ತಿನುಂಡೆಯ ಕಾಳೇ ನಿಮ್ಮ ಆಹಾರವು
ಹಾ! ಎನಿತು ಸವಿಯಹುದು ನಿಮ್ಮ ಬಾಳು!
ಹಾಲ್ಗಾಳು-ಸಜ್ಜೆ-ಕಡಲೆ-ಹೆಸರು ನಿಮ್ಮವು
ಈ ಸೃಷ್ಟಿ ಸೌಖ್ಯ ಇನ್ನಾರಿಗೆ ಹೇಳು

ನಿಮ್ಮ ಮೆಲುಧ್ವನಿಯಲಿ ಮೆಲ್ಲುವಿರಿ ಕಾಳನ್ನು
ಗುಬ್ಬಿಗಳೋ ನೀವು ? ಅಬ್ಬ ನಿಜವು!
ತಾಯ ಗುಟುಕಿನ ಕಾಳ್ಗೆ ಬಾಯ್ಗೊಡುವ ಮರಿಯನ್ನು
ನೋಡಬೇಕು; ಕಣ್ಗಳಿಗೆಂತ ನುಣ್ಗಬ್ಬವು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...