Home / ಕವನ / ಕವಿತೆ / ಸೃಷ್ಟಿ ಚಿಮ್ಮಿದೆ !

ಸೃಷ್ಟಿ ಚಿಮ್ಮಿದೆ !

ಸೃಷ್ಟಿ ಚಿಮ್ಮಿದೇ; ಪಕ್ಕ ಬಡೆದು ಹಾರಿದೆ
ಅತ್ತಲಿತ್ತ ಸುತ್ತು ಓಡಿ ಉಕ್ಕಿ ಹರಿದಿದೆ
ಮೊಗ್ಗೆಯಲ್ಲಿ ನೆಗೆದು ಪಕಳೆರೂಪ ತಾಳಿದೆ
ಅಗ್ಗ ಹುಲ್ಲಿನಲ್ಲಿ ಸಗ್ಗ ಸೊಗವ ತುಂಬಿದೆ
ಭ್ರಮರವಾಗಿ ಬಂದಿದೆ, ಹೂವಾಗಿ ಕರೆದಿದೆ
ಭ್ರಮೆಗೆಟ್ಟು ಭ್ರಮಿಸುವಾ ಕಬ್ಬಿಗನಾಗಿದೆ
ದಿಬ್ಬದಾ ಹುಲ್ಲಲ್ಲಿ ಕಾಲುದಾರಿ ಕೊರೆದಿದೆ
ಅಬ್ಬಾ ! ಅದರ ನೋಟ ಹರುಷ ತರಿಸಿದೆ
ಕೊಳದಲ್ಲಿ ತೆರೆಯಾಗಿ ಮುಂದೆ ನುಗ್ಗಿದೆ
ಹರುಷದಾ ಹೊಳೆಯಾಗಿ ಅಕೋ ಹಿಗ್ಗಿದೆ.
ಸರರಾಣಿ ತಿಲಕವೊಲ್ ಕಮಲಾಗಿ ಎದ್ದಿದೆ
ಕೋಗಿಲೆಯ ಗಾನದಲಿ ಬಲೆಯ ಬೀಸಿದೆ
ಗದ್ದೆಯಾ ಬದುವಿನಲಿ ಹಾವಾಗಿ ಸರಿದಿದೆ
ಗುಡ್ಡದಾ ಎದುರಿನಲಿ ತಗ್ಗಾಗಿ ಉಳಿದಿದೆ
ಟೆಂಗಿನಾ ಗರಿಯೊಳು ಗಾಳ್ಯಾಗಿ ಸುಳಿದಿದೆ
ಮುಳ್ಳಿನಾ ಬೇಲಿಯಲಿ ಬಳ್ಯಾಗಿ ಬೆಳೆದಿದೆ
ಮೋಡ ತೂರಿ ತಂಪು ಮಾಡಿ ಹರುಷ ಗೈದಿದೆ
ಗುಡುಗು ಮಿಂಚು ತಾಳಿ ಚಪ್ಪಾಳೆ ಹೊಯ್ದಿದೆ
ರಫಾ ಧಫಾ ನಿರತರೆಸಿ ಅರಬು ಜೈಸಿದೆ
ಅಪ್ಪಾ! ಅಬ್ಬಾ!! ಸೃಷ್ಟಿ ಸೊಬಗು ಸಗ್ಗವನೆ ಕೊಯ್ಸಿದೆ
ಕವಿಯ ಕಟ್ಟಿ ತಂದು ಕಪಿಯಾಗಿ ಮಾಡಿದೆ
ನಿನ್ನ ಬಲೆ! ಈ ಕಲೆ!! ಎಲೆಲೊ ಬಲೇ ಭಲೇ
ಅಹುದೆಲೋ ನಿನ್ನ ಮಂತ್ರ ಎನ್ನ ಮನ ಕದ್ದಿದೆ
ಎಂಥ ಮಾಟವೆನುತ ನಗಲೂ ಅಳಲೋ ಹೇಳಲೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...