ನಮ್ಮೂರ ಹೋಳಿ ಹಾಡು – ೨

ಮೂಢತನವು ಸೇರಿತೇ
ರೂಢೀಶ ನಿನ್ನಗೆ
ಬ್ಯಾಡ ಶಿವನ ಕೂಡ ಹಗೆ ||ಪ||

ಜನನ ಸ್ಥಿತಿ ಸಂಹಾರ ಕರ್ತ
ಘನ ಮಹೇಶನು|
ತಾ ಯಾರಿಗೆ ಸಿಲುಕನು ||೧||

ಮನಕೆ ತಿಳಿಯೋ
ಜನಕ ನಿನ್ನ
ತನುಜೆ ಮಾತನು |
ನಾ ಮುಗಿವೆ ಕೈಯನು ||೨||

ಅದಿ ಅಂತ್ಯವಿಲ್ಲದ
ಪರನಾದ ಭಾವವೋ
ತಿಳಿಯದೋ
ಮಹಿಮವು ||೩||

ವೇದಗಳಿಗೆ ನಿಲುಕದಂಥ
ನಾದ ವಸ್ತುವೋ
ಬಿಡು ನೀನಿನ್ನ
ವೈರವೊ ||೪||

ಬ್ರಹ್ಮ-ವಿಷ್ಣು-ಸಂತರುಗಳು
ಒಮ್ಮೆ ಕಾಣರೋ
ಇನ್ನೂ
ಧ್ಯಾನಿಸುತಲಿಹರೋ ||೫||

ಹಮ್ಮಿದ್ಯಾತಕೆ
ಈ ಯಜ್ಞ
ಸಾಕು ಮಾಡಿನ್ನು
ಕೇಳೆಮ್ಮ ಮಾತನ್ನು ||೬||

ಶಿವನು ಇಲ್ಲದಂಥ ಯಜ್ಞ
ಹವಿಯ(ಸ್ಸು?) ಭಾಗವ
ಮತ್ತಾರು
ಕೊಂಬುವಾ ||೭||

ಭುವನದೊಡೆಯ ಕೇಳೋ
ಬೇಗ ನಡೆಯದ್ಯಾಗವ
ಬಿಡು ಸುಮ್ಮನೆ
ವೈರವ ||೮||

ಇಷ್ಟು ಬಗೆಯ ಬುದ್ದಿ
ಹುಟ್ಟಿತ್ಹೇಗೆ
ಇವನೊಳು
ಬಿಡನೆ ಕೆಟ್ಟತನಗಳು ||೯||

ಸಿಟ್ಟಿನಿಂದ ಹೋಮಗೊಂಡ
ಮೆಟ್ಟಿ ಹಾರಲು
ಸತಿ ತಾ
ನಷ್ಟವಾದಳು ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನಮ್ಮ
Next post ಬೆಕ್ಕೇ ಬೆಕ್ಕೇ ಮಾರ್ಜಾಲ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…