ನಮ್ಮೂರ ಹೋಳಿ ಹಾಡು – ೨

ಮೂಢತನವು ಸೇರಿತೇ
ರೂಢೀಶ ನಿನ್ನಗೆ
ಬ್ಯಾಡ ಶಿವನ ಕೂಡ ಹಗೆ ||ಪ||

ಜನನ ಸ್ಥಿತಿ ಸಂಹಾರ ಕರ್ತ
ಘನ ಮಹೇಶನು|
ತಾ ಯಾರಿಗೆ ಸಿಲುಕನು ||೧||

ಮನಕೆ ತಿಳಿಯೋ
ಜನಕ ನಿನ್ನ
ತನುಜೆ ಮಾತನು |
ನಾ ಮುಗಿವೆ ಕೈಯನು ||೨||

ಅದಿ ಅಂತ್ಯವಿಲ್ಲದ
ಪರನಾದ ಭಾವವೋ
ತಿಳಿಯದೋ
ಮಹಿಮವು ||೩||

ವೇದಗಳಿಗೆ ನಿಲುಕದಂಥ
ನಾದ ವಸ್ತುವೋ
ಬಿಡು ನೀನಿನ್ನ
ವೈರವೊ ||೪||

ಬ್ರಹ್ಮ-ವಿಷ್ಣು-ಸಂತರುಗಳು
ಒಮ್ಮೆ ಕಾಣರೋ
ಇನ್ನೂ
ಧ್ಯಾನಿಸುತಲಿಹರೋ ||೫||

ಹಮ್ಮಿದ್ಯಾತಕೆ
ಈ ಯಜ್ಞ
ಸಾಕು ಮಾಡಿನ್ನು
ಕೇಳೆಮ್ಮ ಮಾತನ್ನು ||೬||

ಶಿವನು ಇಲ್ಲದಂಥ ಯಜ್ಞ
ಹವಿಯ(ಸ್ಸು?) ಭಾಗವ
ಮತ್ತಾರು
ಕೊಂಬುವಾ ||೭||

ಭುವನದೊಡೆಯ ಕೇಳೋ
ಬೇಗ ನಡೆಯದ್ಯಾಗವ
ಬಿಡು ಸುಮ್ಮನೆ
ವೈರವ ||೮||

ಇಷ್ಟು ಬಗೆಯ ಬುದ್ದಿ
ಹುಟ್ಟಿತ್ಹೇಗೆ
ಇವನೊಳು
ಬಿಡನೆ ಕೆಟ್ಟತನಗಳು ||೯||

ಸಿಟ್ಟಿನಿಂದ ಹೋಮಗೊಂಡ
ಮೆಟ್ಟಿ ಹಾರಲು
ಸತಿ ತಾ
ನಷ್ಟವಾದಳು ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನಮ್ಮ
Next post ಬೆಕ್ಕೇ ಬೆಕ್ಕೇ ಮಾರ್ಜಾಲ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys