‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು “ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ” ಎಂಬುದರ ಸಂಕ್ಷಿಪ್ತರೂಪ.

ಇಂದಿನ ಕನ್ನಡ ಯುವಕರು ತಮ್ಮ ಪದವಿ ಮತ್ತು ಡಿಪ್ಲೋಮಾ ಶಿಕ್ಷಣವನ್ನು ಮುಗಿಸಿದ ಮೇಲೆ ತತ್ಷಣವೇ ಒಂದು ನಿಷ್ಫಲಪರಿಸರವನ್ನು ಪ್ರವೇಶಿಸುವಂತಾಗುತ್ತದೆ. ನೌಕರಿಗಳಿಲ್ಲ, ಉದ್ಯಮ ಚಟುವಟಿಕೆಯಿಲ್ಲ, ಹತ್ತಿರದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೌಕರ್ಯಗಳಿಲ್ಲ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿಲ್ಲ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಸೌಕರ್ಯಗಳಿಲ್ಲ.

೧೦,೦೦೦ ನೌಕರಿಗಳನ್ನು ಸೃಷ್ಟಿಸುವ ದೊಡ್ಡ ಕಾರ್ಖಾನೆಗಳನ್ನು ಕಟ್ಟುತ್ತೇವೆ. ದುರ್ದೈವದಿಂದ ಅವುಗಳಲ್ಲಿ ೧೦೦೦ ಕನ್ನಡಿಗರಿಗೆ ಮಾತ್ರ ನೌಕರಿ ದೊರೆಯ ಬಹುದು. ರೇಲ್ವೆ ಇಲಾಖೆಯಲ್ಲಿ, ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ನೌಕರಿ ದೊರೆಯುವುದು ಕಷ್ಟವಾಗಿದೆ. ‘ಕಪ್ರೋಸಂ’ ಕಂಡುಕೊಂಡಿದ್ದೇನೆಂದರೆ ನೌಕರಿಗಳಿಗೆ ಆಯ್ಕೆ ಮಾಡಲು ಎಲ್ಲೆಲ್ಲಿ ಸ್ಪರ್ಧಾ ಪರೀಕ್ಷೆಗಳು ನಡೆದಿವೆಯೋ ಅಲ್ಲಿ ಕನ್ನಡಿಗರ ನಿರ್ವಹಣೆಯು ತೃಪ್ತಿಕರವಾಗಿರಲಿಲ್ಲ. ತತ್ಫಲವಾಗಿ ಪ್ರತಿ ವರ್ಷವೂ ಸಾವಿರಾರು ಕನ್ನಡಿಗರಿಗೆ ಹುದ್ದೆಗಳು ಕಳೆದುಹೋಗುತ್ತಿವೆ. ಹೊರಗಿನವರು ಅವುಗಳನ್ನು ಪಡೆದು ಕೊಂಡು ಸುಖವಾಗಿದ್ದಾರೆ. ಪಿಯುಸಿ ಅಥವಾ ಡಿಗ್ರಿ ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಉತ್ತಮಿಕೆಯನ್ನು ತೋರಿಸುವುದು ಹೇಗೆಂಬ ಬಗ್ಗೆ ಅಧ್ಯಯನ ವಿಷಯವೊಂದಿರಬೇಕು. ಇದು ಕನ್ನಡಯುವಕರಿಗೆ ಅತ್ಯಂತ ತುರ್ತಾದ ಆವಶ್ಯಕತೆಯಾಗಿದೆ. ನಕಾರಾತ್ಮಕ ವಾತಾವರಣದ ಕಾರಣ ಕನ್ನಡ ಯುವಕರು ಕೀಳರಿಮೆಯನ್ನು ಬೆಳೆಸಿಕೊಳ್ಳುವುದು ಕನ್ನಡ ಸಮಾಜಕ್ಕೆ ಒಳ್ಳೆಯದಲ್ಲ. ಈ ಕಾಲದ ಕನ್ನಡಯುವಕರ ಮೇಲೆ ಎರಡು ಆಪಾದನೆಗಳಿವೆ. ಎರಡೂ ಗಂಭೀರ ವಾದವುಗಳೇ. ಒಬ್ಬ ವಿವಿ‌ಐಪಿ ಅವರನ್ನು ಕೊಳಕು ಜನವೆಂದೂ ಇನ್ನೊಬ್ಬಾತ ಅವರನ್ನು ತಲೆಬಾಗುವ ಸಾಧುಗಳೆಂದೂ ಕರೆದಿದ್ದಾರೆ. ಆ ಇಬ್ಬರೂ ವಿಶಿಷ್ಠ ವ್ಯಕ್ತಿಗಳಾಗಿದ್ದು ಒಂದು ಜನಸಮುದಾಯವನ್ನು ಅಂದಾಜು ಮಾಡಲು ತಿಳಿದವರಾಗಿದ್ದಾರೆ. ಇಂದಿನ ತಲೆಮಾರಿನವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಿದ್ದಿಕೊಳ್ಳುವ ಕೆಲಸವನ್ನು ಮಾಡಬೇಕು. ನಮ್ಮ ತಲೆಮಾರಿ ನವರೂ ಇಂತಹ ನಕಾರಾತ್ಮಕ ಟೀಕೆಗಳನ್ನು ಪಡೆದಿದ್ದರೂ ಅವುಗಳನ್ನು ಗಂಭೀರವಾಗಿ ಎಣಿಸದ ದುರ್ದೈವದಿಂದ ತಿದ್ದಿಕೊಂಡು ಉತ್ತಮಪಡಿಸಿಕೊಂಡು ಒಳ್ಳೆಯ ಬಿಂಬವನ್ನು ಮೂಡಿಸುವ ಪ್ರಯತ್ನದ ಬಗ್ಗೆ ನಮ್ಮ ತಲೆಮಾರು ಆಲೋಚಿಸಲಿಲ್ಲ. ನಕ್ಕು ಸಹಿಸಿಕೊಂಡು ಹೋಗುವ ಮನೋಭಾವವನ್ನು ಅಳವಡಿಸಿಕೊಂಡೆವು. ಅಪಜಯ ಸ್ವೀಕಾರದ ಸೌಮ್ಯ ಸ್ವರೂಪವಾಗಿತ್ತು. ಮುಂದಿನ ತಲೆಮಾರಿನವರಿಗೂ ಕೊರತೆಗಳನ್ನು ವರ್ಗಾಯಿಸಿದೆವು. ಕನ್ನಡ ಜನರನ್ನು ಆವರಿಸಿರುವ ನಿಷೇಧಾತ್ಮಕ ಬಿಂಬಗಳನ್ನು ಮುಂದಿನ ಜನಾಂಗಕ್ಕೂ ವರ್ಗಾಯಿಸದಂತೆ ಮಾಡುವ ಭಾರಿ ಜವಾಬ್ದಾರಿಯೂ ಇಂದಿನ ತಲೆಮಾರಿನ ಮೇಲಿದೆ.

‘ಕಪ್ರೋಸಂ’ ಪ್ರಕಾರ ಕನ್ನಡಿಗರ ನಮ್ರತೆಗೆ ಕನ್ನಡಿಗರಲ್ಲಿರುವ ಉದ್ಯಮ ಚಟುವಟಿಕೆಯ ಅಭಾವವು ಒಂದು ಕಾರಣವಾಗಿದೆ.

ಕನ್ನಡ ಜನರಿಗೆ ’ಕಪ್ರೋಸಂ’ ಒಂದು ಕಿರುಕಾಣಿಕೆ. ತನ್ನ ಜೀವನದ ಒಂದು ಭಾಗವಾಗಿ ಅದನ್ನು ಪ್ರತಿ ಕನ್ನಡಿಗನೂ ಪಡೆದುಕೊಂಡಿರಬೇಕು. ಕನ್ನಡ ಜನ ಮನಃ ಸ್ಥೈರ್ಯ ಈಗ ಕೆಲ್ವಿನ್ ಶೂನ್ಯದಲ್ಲಿರಬಹುದು. ಆದರೆ ಕಪ್ರೊಸಂನ ಅವಳಿ ಉದ್ದೇಶ್ಯಗಳಾದ ಉನ್ನತ ಸಾಧನೆಗಳಿಗಾಗಿ ಸತತ ಪ್ರಯತ್ನ ಮತ್ತು ಉತ್ಕೃಷ್ಟ ಸಾಧನೆಗಳಿಗಾಗಿ ಸತತ ಸಂಶೋಧನೆ ಇವುಗಳು ಕನ್ನಡಿಗರನ್ನು ಉತ್ತುಂಗ ಶಿಖರದಲ್ಲಿ ಮತ್ತು ಚಾನಲ್ ೩೦ರಲ್ಲಿ ಇರಿಸುತ್ತವೆ. ೨೧ನೇ ಶತಮಾನ ಕನ್ನಡ ಜನರ ಶತಮಾನವಾಗಿ ಮಾಡಲು ಕಪ್ರೋಸಂ ಮೂಲಕ ಸಾಧ್ಯವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಲ್ಲಿ ಹೇಳಲಿ ಹೇಳು
Next post ಇನ್ನೊಂದು ಮುಖಾಮುಖಿ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys