Home / ಲೇಖನ / ಭಾಷೆ / ‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು “ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ” ಎಂಬುದರ ಸಂಕ್ಷಿಪ್ತರೂಪ.

ಇಂದಿನ ಕನ್ನಡ ಯುವಕರು ತಮ್ಮ ಪದವಿ ಮತ್ತು ಡಿಪ್ಲೋಮಾ ಶಿಕ್ಷಣವನ್ನು ಮುಗಿಸಿದ ಮೇಲೆ ತತ್ಷಣವೇ ಒಂದು ನಿಷ್ಫಲಪರಿಸರವನ್ನು ಪ್ರವೇಶಿಸುವಂತಾಗುತ್ತದೆ. ನೌಕರಿಗಳಿಲ್ಲ, ಉದ್ಯಮ ಚಟುವಟಿಕೆಯಿಲ್ಲ, ಹತ್ತಿರದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೌಕರ್ಯಗಳಿಲ್ಲ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿಲ್ಲ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಸೌಕರ್ಯಗಳಿಲ್ಲ.

೧೦,೦೦೦ ನೌಕರಿಗಳನ್ನು ಸೃಷ್ಟಿಸುವ ದೊಡ್ಡ ಕಾರ್ಖಾನೆಗಳನ್ನು ಕಟ್ಟುತ್ತೇವೆ. ದುರ್ದೈವದಿಂದ ಅವುಗಳಲ್ಲಿ ೧೦೦೦ ಕನ್ನಡಿಗರಿಗೆ ಮಾತ್ರ ನೌಕರಿ ದೊರೆಯ ಬಹುದು. ರೇಲ್ವೆ ಇಲಾಖೆಯಲ್ಲಿ, ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ನೌಕರಿ ದೊರೆಯುವುದು ಕಷ್ಟವಾಗಿದೆ. ‘ಕಪ್ರೋಸಂ’ ಕಂಡುಕೊಂಡಿದ್ದೇನೆಂದರೆ ನೌಕರಿಗಳಿಗೆ ಆಯ್ಕೆ ಮಾಡಲು ಎಲ್ಲೆಲ್ಲಿ ಸ್ಪರ್ಧಾ ಪರೀಕ್ಷೆಗಳು ನಡೆದಿವೆಯೋ ಅಲ್ಲಿ ಕನ್ನಡಿಗರ ನಿರ್ವಹಣೆಯು ತೃಪ್ತಿಕರವಾಗಿರಲಿಲ್ಲ. ತತ್ಫಲವಾಗಿ ಪ್ರತಿ ವರ್ಷವೂ ಸಾವಿರಾರು ಕನ್ನಡಿಗರಿಗೆ ಹುದ್ದೆಗಳು ಕಳೆದುಹೋಗುತ್ತಿವೆ. ಹೊರಗಿನವರು ಅವುಗಳನ್ನು ಪಡೆದು ಕೊಂಡು ಸುಖವಾಗಿದ್ದಾರೆ. ಪಿಯುಸಿ ಅಥವಾ ಡಿಗ್ರಿ ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಉತ್ತಮಿಕೆಯನ್ನು ತೋರಿಸುವುದು ಹೇಗೆಂಬ ಬಗ್ಗೆ ಅಧ್ಯಯನ ವಿಷಯವೊಂದಿರಬೇಕು. ಇದು ಕನ್ನಡಯುವಕರಿಗೆ ಅತ್ಯಂತ ತುರ್ತಾದ ಆವಶ್ಯಕತೆಯಾಗಿದೆ. ನಕಾರಾತ್ಮಕ ವಾತಾವರಣದ ಕಾರಣ ಕನ್ನಡ ಯುವಕರು ಕೀಳರಿಮೆಯನ್ನು ಬೆಳೆಸಿಕೊಳ್ಳುವುದು ಕನ್ನಡ ಸಮಾಜಕ್ಕೆ ಒಳ್ಳೆಯದಲ್ಲ. ಈ ಕಾಲದ ಕನ್ನಡಯುವಕರ ಮೇಲೆ ಎರಡು ಆಪಾದನೆಗಳಿವೆ. ಎರಡೂ ಗಂಭೀರ ವಾದವುಗಳೇ. ಒಬ್ಬ ವಿವಿ‌ಐಪಿ ಅವರನ್ನು ಕೊಳಕು ಜನವೆಂದೂ ಇನ್ನೊಬ್ಬಾತ ಅವರನ್ನು ತಲೆಬಾಗುವ ಸಾಧುಗಳೆಂದೂ ಕರೆದಿದ್ದಾರೆ. ಆ ಇಬ್ಬರೂ ವಿಶಿಷ್ಠ ವ್ಯಕ್ತಿಗಳಾಗಿದ್ದು ಒಂದು ಜನಸಮುದಾಯವನ್ನು ಅಂದಾಜು ಮಾಡಲು ತಿಳಿದವರಾಗಿದ್ದಾರೆ. ಇಂದಿನ ತಲೆಮಾರಿನವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಿದ್ದಿಕೊಳ್ಳುವ ಕೆಲಸವನ್ನು ಮಾಡಬೇಕು. ನಮ್ಮ ತಲೆಮಾರಿ ನವರೂ ಇಂತಹ ನಕಾರಾತ್ಮಕ ಟೀಕೆಗಳನ್ನು ಪಡೆದಿದ್ದರೂ ಅವುಗಳನ್ನು ಗಂಭೀರವಾಗಿ ಎಣಿಸದ ದುರ್ದೈವದಿಂದ ತಿದ್ದಿಕೊಂಡು ಉತ್ತಮಪಡಿಸಿಕೊಂಡು ಒಳ್ಳೆಯ ಬಿಂಬವನ್ನು ಮೂಡಿಸುವ ಪ್ರಯತ್ನದ ಬಗ್ಗೆ ನಮ್ಮ ತಲೆಮಾರು ಆಲೋಚಿಸಲಿಲ್ಲ. ನಕ್ಕು ಸಹಿಸಿಕೊಂಡು ಹೋಗುವ ಮನೋಭಾವವನ್ನು ಅಳವಡಿಸಿಕೊಂಡೆವು. ಅಪಜಯ ಸ್ವೀಕಾರದ ಸೌಮ್ಯ ಸ್ವರೂಪವಾಗಿತ್ತು. ಮುಂದಿನ ತಲೆಮಾರಿನವರಿಗೂ ಕೊರತೆಗಳನ್ನು ವರ್ಗಾಯಿಸಿದೆವು. ಕನ್ನಡ ಜನರನ್ನು ಆವರಿಸಿರುವ ನಿಷೇಧಾತ್ಮಕ ಬಿಂಬಗಳನ್ನು ಮುಂದಿನ ಜನಾಂಗಕ್ಕೂ ವರ್ಗಾಯಿಸದಂತೆ ಮಾಡುವ ಭಾರಿ ಜವಾಬ್ದಾರಿಯೂ ಇಂದಿನ ತಲೆಮಾರಿನ ಮೇಲಿದೆ.

‘ಕಪ್ರೋಸಂ’ ಪ್ರಕಾರ ಕನ್ನಡಿಗರ ನಮ್ರತೆಗೆ ಕನ್ನಡಿಗರಲ್ಲಿರುವ ಉದ್ಯಮ ಚಟುವಟಿಕೆಯ ಅಭಾವವು ಒಂದು ಕಾರಣವಾಗಿದೆ.

ಕನ್ನಡ ಜನರಿಗೆ ’ಕಪ್ರೋಸಂ’ ಒಂದು ಕಿರುಕಾಣಿಕೆ. ತನ್ನ ಜೀವನದ ಒಂದು ಭಾಗವಾಗಿ ಅದನ್ನು ಪ್ರತಿ ಕನ್ನಡಿಗನೂ ಪಡೆದುಕೊಂಡಿರಬೇಕು. ಕನ್ನಡ ಜನ ಮನಃ ಸ್ಥೈರ್ಯ ಈಗ ಕೆಲ್ವಿನ್ ಶೂನ್ಯದಲ್ಲಿರಬಹುದು. ಆದರೆ ಕಪ್ರೊಸಂನ ಅವಳಿ ಉದ್ದೇಶ್ಯಗಳಾದ ಉನ್ನತ ಸಾಧನೆಗಳಿಗಾಗಿ ಸತತ ಪ್ರಯತ್ನ ಮತ್ತು ಉತ್ಕೃಷ್ಟ ಸಾಧನೆಗಳಿಗಾಗಿ ಸತತ ಸಂಶೋಧನೆ ಇವುಗಳು ಕನ್ನಡಿಗರನ್ನು ಉತ್ತುಂಗ ಶಿಖರದಲ್ಲಿ ಮತ್ತು ಚಾನಲ್ ೩೦ರಲ್ಲಿ ಇರಿಸುತ್ತವೆ. ೨೧ನೇ ಶತಮಾನ ಕನ್ನಡ ಜನರ ಶತಮಾನವಾಗಿ ಮಾಡಲು ಕಪ್ರೋಸಂ ಮೂಲಕ ಸಾಧ್ಯವಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...