Home / ಕವನ / ಕವಿತೆ / ನನ್ನಮ್ಮ

ನನ್ನಮ್ಮ

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ!
ನವ ನವ ಮಾಸಗಳೋ… ಸ್ವರ್ಗ ಸೋಪಾನವೇ…
ನವ ನವ ವಸಂತದ, ಚೈತ್ರ ಯಾತ್ರೆ…
ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ!
ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು…
ಸುಖ, ಶಾಂತಿ, ನೆಮ್ಮದಿಗೆ, ಯೋಗಾಯೋಗ ನಿದ್ರಾ ತಾಣ!
ಇಂಥಾ ಯೋಗಾ ಯೋಗಾ ದೇವತೆಗಳಿಗುಂಟೇ??


ಬಲು ಬಲು ದುಃಖಮಯ…
ಈ ನೆಲ ಸೋಂಕಿದಂದನಿಂದಲೇ…
ತೆರೆದ ಬಾಯಿ, ಮುಚ್ಚಿಲ್ಲ.
ಮುಗಿಯದ ಗೋಳಿದು!
ಮರುಗಟ್ಟಿದೆ ಎಷ್ಟು ಅತ್ತರೂ ತಿರುಗಿ ನೋಡದಾಮಂದಿ!
ರಾತ್ರಿಯಿಟ್ಟು ಹಗಲು ಭವಣೆ ತೀರಿತು.


‘ಈ ನರ ಜನ್ಮ, ತಾಳಿದ ಬಳಿಕ, ಏನೆಲ್ಲ ಇದ್ದದ್ದೇ…’
ಎಂದು… ಎರಡೂ ಸ್ವಾಟ್ಟಿಗೆಟ್ಟಿ, ತಲೆ ತಲೆಗೇ ಮೋಟಿ,
ಊರಹಂದಿಯಂಗೆ ‘ಅಡ್ರುಗ್’ ಎನ್ನುವ, ಮಂದಿ ಮಧ್ಯೆ
ನನ್ನಮ್ಮ ದುರುಗವ್ವ ನೆನಪಾಗುವಳು! ಸಹಜವಾಗಿಯೇ…
ಬಿಸಿಲು ಬೆಳದಿಂಗಳಾಗುವಳು ಅಮ್ಮ…
ತಾವರೆ ತಿಳಿಗೊಳದಂತೇ…
ಅಮ್ಮ ಅಮ್ಮಗಲ್ಲದೆ, ಬೊಮ್ಮಗೆ ಸಾಧ್ಯನೇ?!
ಬೆಟ್ಟದಶ್ಟು, ಕಶ್ಟ ಹೊತ್ತ, ಭೂಮಿ ನೀ…
ಯಾವ ಋಣದ, ಮಣ ಭಾರ ನಾಽ…
ಒದ್ದೆ ಕಂಗಳ, ಮುದ್ದು ಮಾಡಿ, ಮಂತ್ರಿಸಿಬಿಟ್ಟೆ!


‘ಓ… ದೇವರೇ! ಸಾಕಿನ್ನು ಸಾಕು!
ಈ ಕ್ಷಣ ನನ್ನುಸಿರನ್ನೊಮ್ಮೆ ನಿಲ್ಲಿಸಿ ಬಿಡು!
ನೀ ಬಂದು ಪುಣ್ಯವನ್ನೆಲ್ಲ ಕಟ್ಟಿಕೋ…’
ಮೇಲಿಂದಾ ಮೇಲೆ, ನಾ… ಅಂಗಲಾಚುತ್ತೇನೆ! ಈ ಜನರ ತಂತ್ರ, ಕುತಂತ್ರ, ಕುಬುದ್ಧಿಗೆ ತಲೆರೋಸಿಗೆ ಬಂದಿದೆ!
ನಿತ್ಯ ಸಂತೆ ಗದ್ದಲದಲಿ ನನ್ನ ಅಳು, ಕೂಗು, ಕೇಳಿಸಿಕೊಳ್ಳುವವರ್‍ಯಾರು??
ಇಲ್ಲಿ ನಗುವ ಒತ್ತಿಟ್ಟು; ಅಳುವೆಂಬ ವಸ್ತು ಕೊಳ್ಳುತ್ತಿದ್ದಾರೆ!
ನೀರ ಮೇಲಿನ ಗುಳ್ಳೆಗೆ, ಬಾಸಿಂಗ ಕಟ್ಟುತ್ತಾರೆ.
ಈ ಜನ ಚಿನ್ನ
ಈ ನೆಲ ಅನ್ನ
ಈ ಜಲ ರನ್ನ
ಅನ್ನೊದೆಲ್ಲ ಗಿಮಿಕ್!!


ಇಲ್ಲಿ ಜನರಿಲ್ಲಿ… ಸಳ್ಳಿಡಿದು, ಗುಡಿ ಗುಡಿಸಿ, ಗುಡ್ಡೆ ಹಾಕುವುದು ನೋಡಿದರೆ,
ಈ ದೇಶನಾ ಮಸಾಲೆ ಮಾಡಿ, ತಿನ್ನಾದೊಂದೇ ಬಾಕಿ!
ಈ ನೆಲ, ಜಲ, ಜನರ ಒಡಲು, ಬಗೆ ಬಗೆದು, ಬರಿದು ಮಾಡುತ್ತಾ,
ತಮ್ಮ ತಾವು ಮಾರಿಕೊಳ್ಳುವ, ಕೊಂಡುಕೊಳ್ಳುವುದ ಕಂಡರೆ…
ಅಸಹ್ಯ ಹುಟ್ಟುವುದು!
ಬದುಕಿಲ್ಲಿ… ನನ್ನ ಮುಟ್ಟದ ಗಾಳಿ.
ಎಲ್ಲ ಮುಗಿದ ಮೇಲೆ, ಉಳಿಯಲೇನಿದೆ??
ಖಾಲಿ ಕೊಡಗಳೊಂದಿಗೆ ಸಂಸಾರ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...