ನನ್ನಮ್ಮ

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ!
ನವ ನವ ಮಾಸಗಳೋ… ಸ್ವರ್ಗ ಸೋಪಾನವೇ…
ನವ ನವ ವಸಂತದ, ಚೈತ್ರ ಯಾತ್ರೆ…
ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ!
ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು…
ಸುಖ, ಶಾಂತಿ, ನೆಮ್ಮದಿಗೆ, ಯೋಗಾಯೋಗ ನಿದ್ರಾ ತಾಣ!
ಇಂಥಾ ಯೋಗಾ ಯೋಗಾ ದೇವತೆಗಳಿಗುಂಟೇ??


ಬಲು ಬಲು ದುಃಖಮಯ…
ಈ ನೆಲ ಸೋಂಕಿದಂದನಿಂದಲೇ…
ತೆರೆದ ಬಾಯಿ, ಮುಚ್ಚಿಲ್ಲ.
ಮುಗಿಯದ ಗೋಳಿದು!
ಮರುಗಟ್ಟಿದೆ ಎಷ್ಟು ಅತ್ತರೂ ತಿರುಗಿ ನೋಡದಾಮಂದಿ!
ರಾತ್ರಿಯಿಟ್ಟು ಹಗಲು ಭವಣೆ ತೀರಿತು.


‘ಈ ನರ ಜನ್ಮ, ತಾಳಿದ ಬಳಿಕ, ಏನೆಲ್ಲ ಇದ್ದದ್ದೇ…’
ಎಂದು… ಎರಡೂ ಸ್ವಾಟ್ಟಿಗೆಟ್ಟಿ, ತಲೆ ತಲೆಗೇ ಮೋಟಿ,
ಊರಹಂದಿಯಂಗೆ ‘ಅಡ್ರುಗ್’ ಎನ್ನುವ, ಮಂದಿ ಮಧ್ಯೆ
ನನ್ನಮ್ಮ ದುರುಗವ್ವ ನೆನಪಾಗುವಳು! ಸಹಜವಾಗಿಯೇ…
ಬಿಸಿಲು ಬೆಳದಿಂಗಳಾಗುವಳು ಅಮ್ಮ…
ತಾವರೆ ತಿಳಿಗೊಳದಂತೇ…
ಅಮ್ಮ ಅಮ್ಮಗಲ್ಲದೆ, ಬೊಮ್ಮಗೆ ಸಾಧ್ಯನೇ?!
ಬೆಟ್ಟದಶ್ಟು, ಕಶ್ಟ ಹೊತ್ತ, ಭೂಮಿ ನೀ…
ಯಾವ ಋಣದ, ಮಣ ಭಾರ ನಾಽ…
ಒದ್ದೆ ಕಂಗಳ, ಮುದ್ದು ಮಾಡಿ, ಮಂತ್ರಿಸಿಬಿಟ್ಟೆ!


‘ಓ… ದೇವರೇ! ಸಾಕಿನ್ನು ಸಾಕು!
ಈ ಕ್ಷಣ ನನ್ನುಸಿರನ್ನೊಮ್ಮೆ ನಿಲ್ಲಿಸಿ ಬಿಡು!
ನೀ ಬಂದು ಪುಣ್ಯವನ್ನೆಲ್ಲ ಕಟ್ಟಿಕೋ…’
ಮೇಲಿಂದಾ ಮೇಲೆ, ನಾ… ಅಂಗಲಾಚುತ್ತೇನೆ! ಈ ಜನರ ತಂತ್ರ, ಕುತಂತ್ರ, ಕುಬುದ್ಧಿಗೆ ತಲೆರೋಸಿಗೆ ಬಂದಿದೆ!
ನಿತ್ಯ ಸಂತೆ ಗದ್ದಲದಲಿ ನನ್ನ ಅಳು, ಕೂಗು, ಕೇಳಿಸಿಕೊಳ್ಳುವವರ್‍ಯಾರು??
ಇಲ್ಲಿ ನಗುವ ಒತ್ತಿಟ್ಟು; ಅಳುವೆಂಬ ವಸ್ತು ಕೊಳ್ಳುತ್ತಿದ್ದಾರೆ!
ನೀರ ಮೇಲಿನ ಗುಳ್ಳೆಗೆ, ಬಾಸಿಂಗ ಕಟ್ಟುತ್ತಾರೆ.
ಈ ಜನ ಚಿನ್ನ
ಈ ನೆಲ ಅನ್ನ
ಈ ಜಲ ರನ್ನ
ಅನ್ನೊದೆಲ್ಲ ಗಿಮಿಕ್!!


ಇಲ್ಲಿ ಜನರಿಲ್ಲಿ… ಸಳ್ಳಿಡಿದು, ಗುಡಿ ಗುಡಿಸಿ, ಗುಡ್ಡೆ ಹಾಕುವುದು ನೋಡಿದರೆ,
ಈ ದೇಶನಾ ಮಸಾಲೆ ಮಾಡಿ, ತಿನ್ನಾದೊಂದೇ ಬಾಕಿ!
ಈ ನೆಲ, ಜಲ, ಜನರ ಒಡಲು, ಬಗೆ ಬಗೆದು, ಬರಿದು ಮಾಡುತ್ತಾ,
ತಮ್ಮ ತಾವು ಮಾರಿಕೊಳ್ಳುವ, ಕೊಂಡುಕೊಳ್ಳುವುದ ಕಂಡರೆ…
ಅಸಹ್ಯ ಹುಟ್ಟುವುದು!
ಬದುಕಿಲ್ಲಿ… ನನ್ನ ಮುಟ್ಟದ ಗಾಳಿ.
ಎಲ್ಲ ಮುಗಿದ ಮೇಲೆ, ಉಳಿಯಲೇನಿದೆ??
ಖಾಲಿ ಕೊಡಗಳೊಂದಿಗೆ ಸಂಸಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಹೇಳಿದ್ದು
Next post ನಮ್ಮೂರ ಹೋಳಿ ಹಾಡು – ೨

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys