Home / ಕವನ / ಕವಿತೆ / ಬಯಲಾಟ

ಬಯಲಾಟ

ಈ ಹಾಡಾಹಗಲೇ ದೇಶರಂಗಮಂಚದಲ್ಲಿ
ಬಟಾಬಯಲಾಟ ನೋಡಿರಣ್ಣಾ
ಬರೀ ರಕ್ಕಸ ಪಾತ್ರಗಳಣ್ಣಾ
ತಿರುಗಾ ಮುರುಗಾ ಅಡ್ಡಾತಿಡ್ಡೀ ಕುಣಿತವಣ್ಣಾ
ಹಾಡಿಗೂ ಕುಣಿತಕ್ಕೂ ತಾಳಕ್ಕೂ ಸಂಗೀತಕ್ಕೂ
ಮುಮ್ಮೇಳ ಹಿಮ್ಮೇಳಕ್ಕೂ ತಾಳಮೇಳವಿಲ್ಲ
ಒಂದಾಟವಾಡಲು, ಅನೇಕ ರಸಪ್ರಸಂಗಗಳ ತೋರಿಸಲು
ಫೋಷಣೆ-ಭಾಷಣ, ಆದವಣ್ಣಾ,

ರಂಗದ ಮೇಲೆ ಪರ ಪರಸಂಗಗಳ
ಬಣ್ಣ ಬದಲಿಸಿ ವೇಷ ಬದಲಿಸಿ ಆಡುವರಣ್ಣಾ,
ಊಸರವಳ್ಳಿಗಳೂ ಇದನು ನೋಡಿ ನಾಚಿದವಣ್ಣಾ,
ನಿಸ್ಸಹಾಯ ಪ್ರೇಕ್ಷಕರ ಹರಣ ಕೀಳುವರಣ್ಣಾ

ಅವರ ಕೂಗಾಟ ಒದರಾಟಗಳ ಕೇಳಿ ಕೇಳಿ,
ಇವರು ಕಿವುಡರಾಗಿದ್ದಾರೆ.
ಅದು ಬೇಡ ಇದು ಬೇಕು ಎಂದೆಂದು ಕೂಗಿ ಕೂಗಿ
ಇವರ ಗಂಟಲು ಬಿದ್ದು ಈಗಿವರು ಬರಿ ಮೂಕರಾಗಿದ್ದಾರೆ
ಆಟದವರಂತೂ ತಮ್ಮ ರಸಾನಂದದಲ್ಲೇ ತಲ್ಲಿನರಣ್ಣಾ

ಕ್ಷಣಕ್ಷಣಕ್ಕೂ ಬೆಳೆಯುವ ಇವರ ಕಳ್ಳ ಬಸುರು ಡೊಳ್ಳ ಹೊಟ್ಟೆಗಳಿಗೆ
ರಂಗ ಮಂಚ ಸಾಲದಾಗಿದೆಯಣ್ಣಾ ಪೂರಾ ಸಾಲದ್ದೇ ಆಗಿದೆಯಣ್ಣಾ
ನೋಡಿ ನೋಡಿ ಜನ ಬೆಂಡಾದರಣ್ಣಾ
ಬೆಂಡಾದಂತೆಲ್ಲಾ ಅವರ ಬಂಡಾಟ ಬಯಲಾಟ ರಂಗೇರಿತಣ್ಣಾ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...