ಬಯಲಾಟ

ಈ ಹಾಡಾಹಗಲೇ ದೇಶರಂಗಮಂಚದಲ್ಲಿ
ಬಟಾಬಯಲಾಟ ನೋಡಿರಣ್ಣಾ
ಬರೀ ರಕ್ಕಸ ಪಾತ್ರಗಳಣ್ಣಾ
ತಿರುಗಾ ಮುರುಗಾ ಅಡ್ಡಾತಿಡ್ಡೀ ಕುಣಿತವಣ್ಣಾ
ಹಾಡಿಗೂ ಕುಣಿತಕ್ಕೂ ತಾಳಕ್ಕೂ ಸಂಗೀತಕ್ಕೂ
ಮುಮ್ಮೇಳ ಹಿಮ್ಮೇಳಕ್ಕೂ ತಾಳಮೇಳವಿಲ್ಲ
ಒಂದಾಟವಾಡಲು, ಅನೇಕ ರಸಪ್ರಸಂಗಗಳ ತೋರಿಸಲು
ಫೋಷಣೆ-ಭಾಷಣ, ಆದವಣ್ಣಾ,

ರಂಗದ ಮೇಲೆ ಪರ ಪರಸಂಗಗಳ
ಬಣ್ಣ ಬದಲಿಸಿ ವೇಷ ಬದಲಿಸಿ ಆಡುವರಣ್ಣಾ,
ಊಸರವಳ್ಳಿಗಳೂ ಇದನು ನೋಡಿ ನಾಚಿದವಣ್ಣಾ,
ನಿಸ್ಸಹಾಯ ಪ್ರೇಕ್ಷಕರ ಹರಣ ಕೀಳುವರಣ್ಣಾ

ಅವರ ಕೂಗಾಟ ಒದರಾಟಗಳ ಕೇಳಿ ಕೇಳಿ,
ಇವರು ಕಿವುಡರಾಗಿದ್ದಾರೆ.
ಅದು ಬೇಡ ಇದು ಬೇಕು ಎಂದೆಂದು ಕೂಗಿ ಕೂಗಿ
ಇವರ ಗಂಟಲು ಬಿದ್ದು ಈಗಿವರು ಬರಿ ಮೂಕರಾಗಿದ್ದಾರೆ
ಆಟದವರಂತೂ ತಮ್ಮ ರಸಾನಂದದಲ್ಲೇ ತಲ್ಲಿನರಣ್ಣಾ

ಕ್ಷಣಕ್ಷಣಕ್ಕೂ ಬೆಳೆಯುವ ಇವರ ಕಳ್ಳ ಬಸುರು ಡೊಳ್ಳ ಹೊಟ್ಟೆಗಳಿಗೆ
ರಂಗ ಮಂಚ ಸಾಲದಾಗಿದೆಯಣ್ಣಾ ಪೂರಾ ಸಾಲದ್ದೇ ಆಗಿದೆಯಣ್ಣಾ
ನೋಡಿ ನೋಡಿ ಜನ ಬೆಂಡಾದರಣ್ಣಾ
ಬೆಂಡಾದಂತೆಲ್ಲಾ ಅವರ ಬಂಡಾಟ ಬಯಲಾಟ ರಂಗೇರಿತಣ್ಣಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ
Next post ದುಡಿತಲೇ ಇರ್‍ತಾಳೆ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…