Home / ಕವನ / ಕವಿತೆ / ಕನಸು

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ
ಆನಂದಿಸುವ ಕನಸನ್ನು
ಚಿರುಗುಮೀಸೆಯ ಹುಡುಗ ಕಾಣದಿದ್ದರೆ,

ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು,
ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ
ಹೋಲಿರಂಗು,
ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ,

ಕೂಸಿನ ಹಾಲು ನಗು, ಜೇನು ತೊದಲು,
ಅವ್ವು-ಅಮ್ಮಿ ಇವನೆಲ್ಲ
ಗರ್ಭಿಣಿಯು ಕನಸು ಕಾಣದಿದ್ದರೆ,

ತನ್ನ ಮಗನ ನಿಲುವಂಗಿ-ಡಿಗ್ರಿ, ಆಫೀಸರ್ ಗಿರಿ
ಅವನ ಸೂಟು-ನೋಟು
ಇವನ್ನು ತನ್ನ ಮೀಸೆ ತಿರುವಿನಲ್ಲಿ ಬೀಗಿ ತಂದೆಯು ಕಲ್ಪಿಸದಿದ್ದರೆ,

ತನ್ನ ಮಗನ ಹೆಂಡತಿ ತನ್ನನೋಲೈಸಿ ಸೇವೆ ಮಾಡಿ,
ಬಯ್ದರೂ-ತಿವಿದರೂ ತಲೆ‌ಎತ್ತದೆ ಬಾಗಿ ನಡಕೊಳ್ಳುವ
ಅತ್ತೆತನವ ತಾಯಿ ತನ್ನ ಮಗುವಿನ ಮುಂದೆ ಊಹಿಸಿ ಉಬ್ಬದಿದ್ದರೆ,

ಇಷ್ಟೆಲ್ಲ ಆಗಿ ತನ್ನ ಒಣಕೈಯಲ್ಲಿ
ಒಂದು ಹಸುಗೂಸು ತನ್ನಂತೆ ಬೊಚ್ಚು ಬಾಯಿ ತೆರೆದು
ಹಾಲುಗುಳುತ್ತ ಜಾಜಾ ಜೀಜೀ ಎಂಬುದನ್ನು
ಮೊಮ್ಮಗನ ಪಡೆಯದ ಅತ್ತೆ ಆಶಿಸದಿದ್ದರೆ,

ಕೂಸಾಗಿ-ಬೆಳೆದು-ನಂತರ
ಜೋಡಿ ಪಾರಿವಾಳಗಳಂತೆ ಒಂದು ಪುಟ್ಟ ಹೆಣ್ಣಿನೊಡನೆ ತನ್ನ
ಮುಂದೆ ಹಸೆಮೇಲೆ ಕುಳಿತಿರುವುದನ್ನು
ಮುದುಕಿ ತನ್ನ ಮಬ್ಬುಗಣ್ಣಿನಿದಿರು ಕಟ್ಟಿಕೊಳ್ಳದಿದ್ದರೆ

ಮನುಜರೆಲ್ಲ ತಮಗಿರುವುದಕ್ಕಿಂತ
ಇನ್ನು ಹೆಚ್ಚು ಹೆಚ್ಚು ಸುಖಗಳಿಗಾಗಿ ಹಂಬಲಿಸಿ-ಕನಸಿ-ನನಸದಿದ್ದರೆ
ಈ ಬದುಕಿನಲ್ಲಿ ಬಾಳಬೇಕು ಎಂಬಂಥಾದ್ದು ಏನಿದ್ದಿತು
ಇಲ್ಲ-ಬದುಕನ್ನು ನಡೆಸುವುದೇ ಕನಸು
ನಾಳಿನ ಸವಿಗನಸು
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...