Home / ಕವನ / ಕವಿತೆ / ಕನಸು

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ
ಆನಂದಿಸುವ ಕನಸನ್ನು
ಚಿರುಗುಮೀಸೆಯ ಹುಡುಗ ಕಾಣದಿದ್ದರೆ,

ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು,
ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ
ಹೋಲಿರಂಗು,
ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ,

ಕೂಸಿನ ಹಾಲು ನಗು, ಜೇನು ತೊದಲು,
ಅವ್ವು-ಅಮ್ಮಿ ಇವನೆಲ್ಲ
ಗರ್ಭಿಣಿಯು ಕನಸು ಕಾಣದಿದ್ದರೆ,

ತನ್ನ ಮಗನ ನಿಲುವಂಗಿ-ಡಿಗ್ರಿ, ಆಫೀಸರ್ ಗಿರಿ
ಅವನ ಸೂಟು-ನೋಟು
ಇವನ್ನು ತನ್ನ ಮೀಸೆ ತಿರುವಿನಲ್ಲಿ ಬೀಗಿ ತಂದೆಯು ಕಲ್ಪಿಸದಿದ್ದರೆ,

ತನ್ನ ಮಗನ ಹೆಂಡತಿ ತನ್ನನೋಲೈಸಿ ಸೇವೆ ಮಾಡಿ,
ಬಯ್ದರೂ-ತಿವಿದರೂ ತಲೆ‌ಎತ್ತದೆ ಬಾಗಿ ನಡಕೊಳ್ಳುವ
ಅತ್ತೆತನವ ತಾಯಿ ತನ್ನ ಮಗುವಿನ ಮುಂದೆ ಊಹಿಸಿ ಉಬ್ಬದಿದ್ದರೆ,

ಇಷ್ಟೆಲ್ಲ ಆಗಿ ತನ್ನ ಒಣಕೈಯಲ್ಲಿ
ಒಂದು ಹಸುಗೂಸು ತನ್ನಂತೆ ಬೊಚ್ಚು ಬಾಯಿ ತೆರೆದು
ಹಾಲುಗುಳುತ್ತ ಜಾಜಾ ಜೀಜೀ ಎಂಬುದನ್ನು
ಮೊಮ್ಮಗನ ಪಡೆಯದ ಅತ್ತೆ ಆಶಿಸದಿದ್ದರೆ,

ಕೂಸಾಗಿ-ಬೆಳೆದು-ನಂತರ
ಜೋಡಿ ಪಾರಿವಾಳಗಳಂತೆ ಒಂದು ಪುಟ್ಟ ಹೆಣ್ಣಿನೊಡನೆ ತನ್ನ
ಮುಂದೆ ಹಸೆಮೇಲೆ ಕುಳಿತಿರುವುದನ್ನು
ಮುದುಕಿ ತನ್ನ ಮಬ್ಬುಗಣ್ಣಿನಿದಿರು ಕಟ್ಟಿಕೊಳ್ಳದಿದ್ದರೆ

ಮನುಜರೆಲ್ಲ ತಮಗಿರುವುದಕ್ಕಿಂತ
ಇನ್ನು ಹೆಚ್ಚು ಹೆಚ್ಚು ಸುಖಗಳಿಗಾಗಿ ಹಂಬಲಿಸಿ-ಕನಸಿ-ನನಸದಿದ್ದರೆ
ಈ ಬದುಕಿನಲ್ಲಿ ಬಾಳಬೇಕು ಎಂಬಂಥಾದ್ದು ಏನಿದ್ದಿತು
ಇಲ್ಲ-ಬದುಕನ್ನು ನಡೆಸುವುದೇ ಕನಸು
ನಾಳಿನ ಸವಿಗನಸು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್