ಕರುಣಿಕರು ಕೊಟ್ಟ ಅರಪಾವ ಜೋಳ

ಕರುಣಿಕರು ಕೊಟ್ಟ ಅರಪಾವ ಜೋಳದಿಂದ
ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ||

ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ
ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.||

ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ
ನಾಮವನು ಕೇಳಿ ಬಂದೆಲ್ಲೋ ಮನಸೇ
ಇವನ್ನು ಕೊಡುತಿದ್ದಿಲ್ಲ ಶಿವನೇ ಸದ್ಗುರು ಬಲ್ಲಾ
ಅವರಪ್ಪ ಬಲು ಜ್ಞಾನಿಯೋ ಮನಸೇ ||೧||

ಸತಿ ಸುತರ ಹಸಿವಿಗೊದಗದ ಕಾಳು ಮನಿಗೊಯ್ಯೋ
ಮತಿಗೇಡಿಯೆನ್ನುತಿಹರೋ ಮನಸೇ
ಜತನದಲಿ ಮಹಾರಾಯನ ಸರಕಿನೊಳಗೆ ಸುರುವಿ
ಹಿತದಿ ಹಿಂದಕ್ಕೆ ನೀ ನಡಿಯಲೋ ಮನಸೇ ||೨||

ಆರು ಬೇಡಿದರಿಲ್ಲಾ ಆರು ಕಾಡಿದರಿಲ್ಲಾ
ಪ್ರಾರಬ್ದ ಕೃತಭೋಗವು ಮನಸೇ
ಚಾರುತರದ ವೃಷಭನಮಂತ್ರ ಬಲವಿರಲು
ನರರ ಹಂಗಿನ್ನೇನಲೋ ಮನಸೇ ||೩||

ಇಂದಿಗೆ ದುಷ್ಕಾಳ ವಂದೇ ಎನ್ನಲಿಬ್ಯಾಡಾ
ಮುಂದೆ ಪ್ರಳಯ ಕಾಲವೋ ಮನಸೇ
ಬಂದ ಭವಾ ಕಳಿದು ಶಿಶುನಾಳ ಮಂದಿರದಿ ಗೋ-
ವಿಂದ ಗುರುವಿನ ಹೊಂದಿಕೋ ಮನಸೇ ||೪||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿನ್ಮಯಿ
Next post ಹೆಂಡಗಡಂಗಿನ ಚಿತ್ರ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys