ಏನೋ ನರಸಿಂಹಣ್ಣ

ಏನೋ ನರಸಿಂಹಣ್ಣ
ಏನೋ ಮರಿ ಭೀಮಣ್ಣ
ಯಾಕೆ ಹೀಗೆ ಅಳುತೀಯೋ
ಹೇಳೋ ನಮ್ಮನೆ ಕಾಮಣ್ಣ

ಅರಳೀ ಚಿಗುರಿನ ಎಳೆಮುಖವು
ಕೆರಳಿ ಕೆಂಪಾಗಿದೆಯಲ್ಲೋ
ಕುಲು ಕುಲು ಗುಲು ಗುಲು ನಗೆದನಿಯು
ಬಿರುಮಳೆ ಸಿಡಿಲಾಗಿದೆಯಲ್ಲೋ!

ಬಿಳಿಮೊಲದಂಥ ಎಳೆಕಂದ
ಹುಲಿಮರಿಯಂತೆ ಆಡ್ತೀಯ,
ಹಟ ಹಿಡಿದರೆ ನೀ ಮುಗಿದ್ಹೋಯ್ತು
ಉಸಿರೇ ಕಟ್ಟಿಸಿಬಿಡ್ತೀಯ!

ತೂಗೀ ತೂಗೀ ಸಾಕಾಯ್ತು
ಎರಡೂ ತೋಳು ಬಿದ್ಹೋಯ್ತು
ಮನೆಗೆಲಸಕ್ಕೆ ಇಡೀ ದಿನ
ರಜಾಚೀಟಿಯ ಬರೆದಾಯ್ತು

ಪ್ರಸನ್ನನಾಗೋ ಹುಲಿಯಣ್ಣ
ಗುಡುಗು ಸಿಡಿಲು ನಿಲಿಸಣ್ಣ,
ಹೂ ಬಿಸಿಲಂಥ ನಗೆಯೊಂದ
ಮುಖದಲಿ ಹರಡೋ ಸೂರ್ಯಣ್ಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೇಡಿಯೋ
Next post ಮಂಥನ – ೫

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…