ಏನೋ ನರಸಿಂಹಣ್ಣ

ಏನೋ ನರಸಿಂಹಣ್ಣ
ಏನೋ ಮರಿ ಭೀಮಣ್ಣ
ಯಾಕೆ ಹೀಗೆ ಅಳುತೀಯೋ
ಹೇಳೋ ನಮ್ಮನೆ ಕಾಮಣ್ಣ

ಅರಳೀ ಚಿಗುರಿನ ಎಳೆಮುಖವು
ಕೆರಳಿ ಕೆಂಪಾಗಿದೆಯಲ್ಲೋ
ಕುಲು ಕುಲು ಗುಲು ಗುಲು ನಗೆದನಿಯು
ಬಿರುಮಳೆ ಸಿಡಿಲಾಗಿದೆಯಲ್ಲೋ!

ಬಿಳಿಮೊಲದಂಥ ಎಳೆಕಂದ
ಹುಲಿಮರಿಯಂತೆ ಆಡ್ತೀಯ,
ಹಟ ಹಿಡಿದರೆ ನೀ ಮುಗಿದ್ಹೋಯ್ತು
ಉಸಿರೇ ಕಟ್ಟಿಸಿಬಿಡ್ತೀಯ!

ತೂಗೀ ತೂಗೀ ಸಾಕಾಯ್ತು
ಎರಡೂ ತೋಳು ಬಿದ್ಹೋಯ್ತು
ಮನೆಗೆಲಸಕ್ಕೆ ಇಡೀ ದಿನ
ರಜಾಚೀಟಿಯ ಬರೆದಾಯ್ತು

ಪ್ರಸನ್ನನಾಗೋ ಹುಲಿಯಣ್ಣ
ಗುಡುಗು ಸಿಡಿಲು ನಿಲಿಸಣ್ಣ,
ಹೂ ಬಿಸಿಲಂಥ ನಗೆಯೊಂದ
ಮುಖದಲಿ ಹರಡೋ ಸೂರ್ಯಣ್ಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೇಡಿಯೋ
Next post ಮಂಥನ – ೫

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…