ಹರಿನಾಮದ ಪಾನದ ರುಚಿ

ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ
ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ
ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ
ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ.

ನಿಜವೆ, ನಾನು ಹುಚ್ಚಿಯೇ
ಜನದ ಕಣ್ಣಿಗೆ!
ಲಜ್ಜೆ ಏಕೆ ಕೃಷ್ಣ ಮೆಚ್ಚಿ
ಕರೆದ ಹೆಣ್ಣಿಗೆ?
ನೆಲದ ಕುಲದ ಹಂಗು ಬೇಕೆ
ಹರಿಯ ದಾಸಿಗೆ?
ಕ್ಳಷ್ಣನನ್ನು ಜರಿವ ಕುಲ
ನನಗೆ ಹೇಸಿಗೆ.

ಯಾವುದೇ ಕುಲ ವಂಶ ಬಲ ನನ್ನ ಸೆಳೆಯದು,
ಕ್ಳಷ್ಣನಿರದ ಒಂದೇ ಕ್ಷಣ ಜೀವ ಉಳಿಯದು;
ವಿರಹದ ಬಾಣಲೆಗೆ ಬಿದ್ದು ಕಾದುಹೋದೆನೇ
ಗಿರಿಧರನ ಕೊಳಲು ಸೇರಿ ನಾದವಾದೆನೇ!

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೨
Next post ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಬಟ್ಟೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys