Home / ಲೇಖನ / ವಿಜ್ಞಾನ / ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಚಿತ್ರ: ಮಥಿಯಸ್ ವೇವರಿಂಗ್
ಚಿತ್ರ: ಮಥಿಯಸ್ ವೇವರಿಂಗ್

ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ ಸೈನಿಕರು ಕೆಲವೇ ವರ್ಷಗಳಲ್ಲಿ ರಣರಂಗಕ್ಕೆ ಧುಮುಕಲಿದ್ದಾರೆ ಎಂದರೆ ಆಶ್ಚರ್ಯ ಮತ್ತು ಸಂತೋಷದ ಸಂಗತಿಯೇ. ಮಾನವ ಸಹಜವಾದ ಸೋಲು ಗೆಲುವು ಭೂಮಿಯಲ್ಲಿ ಇದ್ದದ್ದೆ ಆದರೆ ಮಾನವರೇ ಅಲ್ಲದೆ ಮಾನವರಂತೆ ಯುದ್ಧ ವೈಖರಿಯಲ್ಲಿ ತೊಡಗುವ ಸೋಲನ್ನು ಅರಿಯದ ಸೈನಿಕರು ಸಿಕ್ಕುವುದೆಂದರೆ ಮನುಷ್ಯರಲ್ಲದೆ ರಾಕ್ಷಸರೆ!? ರಾಕ್ಷಸಿ ಶಕ್ತಿಯುಳ್ಳ ಮನುಷ್ಯರಲ್ಲದ ರೋಬಟ್ ಸೈನಿಕರಿಂದಲೇ ಈ ಸಾಧನೆ ನಿಜ, ಮಾನವ ಶಕ್ತಿಯ ಹತ್ತಾರುಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿದ ರೋಬಟ್ ಮಾನವರು ಈಗಾಗಲೇ ಫ್ಯಾಕ್ಟರಿಗಳಲ್ಲಿ ವಿದೇಶಿ ಅಡುಗೆ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಲಿವೆ. ಹತ್ತು ಜನ ಮಾಡುವ ಕೆಲಸವನ್ನು ಒಬ್ಬ ರೋಬಟ್ ಮನುಷ್ಯ ಕೆಲವೇ ಘಂಟೆಗಳಲ್ಲಿ ಮಾಡುವುದಾದರೆ ೧೦ ಜನ ಸೈನಿಕರಿಗೆ ತರಬೇತಿ ನೀಡಿ ಅವರ ಸಂಬಳ ಸಾರಿಗೆ, ಇತರೆ ಖರ್ಚುಗಳನ್ನೆಲ್ಲ ನಿಭಾಯಿಸುವುದಕ್ಕಿಂತಲೂ ಒಬ್ಬ ರೋಬನನ್ನು ಯುದ್ಧಕ್ಕೆ ತೊಡಗಿಸಿದರೆ ಎದುರಿಗಿದ್ದ ಮನುಷ್ಯ ಸೈನಿಕರಾಗಲಿ, ಮದ್ದು ಗುಂಡುಗಳಾಗಲಿ ಎಲ್ಲವೂ ಸಪಾಟ್ ಆಗುತ್ತದೆ!!

ಅಮೇರಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದ ಜೆಟ್ ಪ್ರೊಪುಲಶನ್ ಪ್ರಯೋಗಾಲಯ ಇದಕ್ಕಾಗಿ ಅಭಿವೃದ್ದಿ ಪಡಿಸಿದ ಯಂತ್ರಜ್ಞಾನವನ್ನು
ಬೆಳೆಸಿಕೊಂಡಿದೆ. ಮನೆಗೆಲಸಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತೆ ಯುದ್ಧದಲ್ಲಿಯೂ ಕೂಡ ಕೈಯಲ್ಲಿ ಪಿಸ್ತೂಲು, ರೈಫಲ್‌ಗಳ ಗುಂಡಿ ಅದುಮುವ, ಮುಂದೆ ಮುಂದೆ ನುಗ್ಗುವ, ಗಂಡು ಖಾಲಿಯಾದಾಗ ತುಂಬುವ, ಮತ್ತು ಗುರಿ ಇಟ್ಟು ಶತೃಸೈನ್ಯವನ್ನು ನಾಶಪಡಿಸುವ ಯಾಂತ್ರೀಕೃತ ಯಂತ್ರಗಳನ್ನಳವಡಿಸಿದ ರೋಬಟ್‌ಗಳನ್ನು ಸಿದ್ಧಗೊಳಿಸುತ್ತಿದೆ. ರೋಬಟ್ ಸೈನಿಕರು ಭಾರವಿರದೆ ಹಗುರವಾಗಿದ್ದು ಸುಲಭವಾಗಿ ಚಲಿಸುತ್ತವೆಯಂತೆ
ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...