Home / ಕಥೆ / ಕಿರು ಕಥೆ / ರಾವಣನ ವೇದಾಂತ

ರಾವಣನ ವೇದಾಂತ

ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ್ನು ತಿಳಿಸಿ ಹೇಳಿದನು. ಮಾನವ ಕುಲವು ಒಂದೇ ಆಗಿದೆ; ಪರಮಾತ್ಮನ ಸಂಕಲ್ಪದಿಂದ ಹುಟ್ಟಿದ ಈ ಪ್ರಪಂಚದಲ್ಲಿ ಜೀವಾತ್ಮ ಜೀವಾತ್ಮರಲ್ಲಿ ಭೇದವೆಣಿಸಕೂಡದು; ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮದ ಉದ್ಧಾರ ಮಾಡಿಕೊಳ್ಳಲು ಈ ಆಯುಷ್ಯವು ಒಂದು ಸಂದರ್ಭ ಮಾತ್ರ; ಸರಿಯಾಗಿ ತಿಳೆದು ನೋಡಿದರೆ ಈ ಜಗತ್ತು ಮಾಯೆಯೇ ಆಗಿದೆ; ಆದರೆ “ಸತ್ಯಂ ಶಿವಂ ಸುಂದರಂ” ಈ ತಿರುಳನ್ನರಿತು ನೀನು ಸೀತಾಮಾತೆಯನ್ನು ಶ್ರೀ ರಾಮಚಂದ್ರದೇವರಿಗೆ ತಿರುಗಿ ಒಯ್ದು ಕೊಟ್ಟು ಮುಕ್ತಿಯನ್ನು ಪಡೆಯು ವಂಥವನಾಗು.

ಈ ಪ್ರವಚನವನ್ನು ಕೇಳಿ ರಾವಣನು ಹತ್ತು ಮುಖಗಳಿಂದ ದಿಗ್ಗಜಗಳು ನುಗ್ಗಾಗುವಂತೆ ಗಹಗಹಿಸಿದನು. ಅನಿರೀಕ್ಷಿತ ಆ ಅಟ್ಟಹಾಸಕ್ಕೆ ಮಾರುತಿಯು ಮಂಕು ಬಡಿದುಹೋದನು. ದಶಮುಖಗಳಿಂದ ಈ ಮಾತು ಹೊರಟವು.

“ಮಾನವ ಕುಲವು ಒಂದೇ ಎಂದು ನಂಬಿ ಜೀವಾತ್ಮರಲ್ಲಿ ಭೇದ ವೆಣಿಸದೆ ಶುದ್ಧ ಹೃದಯದಿಂದಲೇ ಸೀತೆಯನ್ನು ತಂದಿದ್ದೇನೆ. ಮಂಡೋದರಿಯ ಆತ್ಮವನ್ನೂ ಸೀತೆಯ ಆತ್ಮವನ್ನೂ ಒಂದೇ ರೀತಿಯಿಂದ ಕಾಣುತ್ತೇನೆ. ಈ ಜಗತ್ತೇ ಮಾಯೆಯಾಗಿರಲು, ನಾನು ರಾಮನ ಮಡದಿಯನ್ನು ತಂದುದಕ್ಕಾಗಿ ಆತನು ವಿಷಾದಿಸಬೇಕಾಗಿಲ್ಲ. ಈ ಘಟನೆಯೂ ಒಂದು ಮಾಯೆ, ಪರಮಾತ್ಮನ ಸಂಕಲ್ಪ ಎಂದು ತಿಳಿದು ಸುಖವಾಗಿರಲು ಹೇಳು ನಿನ್ನೊಡಯನಿಗೆ. ನನ್ನಾತ್ಮವೂ ಅವನಾತ್ಮವೂ ಒಂದೇ ಎಂಬುದನ್ನು ನಾನು ಬಲ್ಲೆ. ಸುಂದರವಾದುದನ್ನು ಆರಾಧಿಸುವುದೇ ಸತ್ಯದ ಸಾಕ್ಷಾತ್ಕಾರದ ಮಾರ್ಗ. ಅದರಿಂದಲೇ ಶಿವನ ಸಾನ್ನಿಧ್ಯ ಸಾಧ್ಯ- ಇವೆಲ್ಲವೂ ನನಗೆ ವಿದಿತವೇ ಇವೆ. ಕಾರಣ ನೀನು ನೇರವಾಗಿ ಮರಳಿ ರಾಮಚಂದ್ರನಿಗೆ ಇವುಗಳನ್ನೆಲ್ಲ ವಿವರಿಸಿ ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮವನ್ನು ಉದ್ದಾರ ಮಾಡಿ ಕೊಳ್ಳಲು ಹೇಳು.”

ಚಕಾರ ಮಾರ್‍‌ ನುಡಿಯದೆ ಮಾರುತಿಯು ಮರಳಿ ಬಂದನು.

ಮರುದಿನವೇ ಲಂಕೆಗೆ ಸೇತು ಕಟ್ಟಲು ಸುರುವಾಯಿತು.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...