Home / ಕಥೆ / ಕಿರು ಕಥೆ / ರಾವಣನ ವೇದಾಂತ

ರಾವಣನ ವೇದಾಂತ

ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ್ನು ತಿಳಿಸಿ ಹೇಳಿದನು. ಮಾನವ ಕುಲವು ಒಂದೇ ಆಗಿದೆ; ಪರಮಾತ್ಮನ ಸಂಕಲ್ಪದಿಂದ ಹುಟ್ಟಿದ ಈ ಪ್ರಪಂಚದಲ್ಲಿ ಜೀವಾತ್ಮ ಜೀವಾತ್ಮರಲ್ಲಿ ಭೇದವೆಣಿಸಕೂಡದು; ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮದ ಉದ್ಧಾರ ಮಾಡಿಕೊಳ್ಳಲು ಈ ಆಯುಷ್ಯವು ಒಂದು ಸಂದರ್ಭ ಮಾತ್ರ; ಸರಿಯಾಗಿ ತಿಳೆದು ನೋಡಿದರೆ ಈ ಜಗತ್ತು ಮಾಯೆಯೇ ಆಗಿದೆ; ಆದರೆ “ಸತ್ಯಂ ಶಿವಂ ಸುಂದರಂ” ಈ ತಿರುಳನ್ನರಿತು ನೀನು ಸೀತಾಮಾತೆಯನ್ನು ಶ್ರೀ ರಾಮಚಂದ್ರದೇವರಿಗೆ ತಿರುಗಿ ಒಯ್ದು ಕೊಟ್ಟು ಮುಕ್ತಿಯನ್ನು ಪಡೆಯು ವಂಥವನಾಗು.

ಈ ಪ್ರವಚನವನ್ನು ಕೇಳಿ ರಾವಣನು ಹತ್ತು ಮುಖಗಳಿಂದ ದಿಗ್ಗಜಗಳು ನುಗ್ಗಾಗುವಂತೆ ಗಹಗಹಿಸಿದನು. ಅನಿರೀಕ್ಷಿತ ಆ ಅಟ್ಟಹಾಸಕ್ಕೆ ಮಾರುತಿಯು ಮಂಕು ಬಡಿದುಹೋದನು. ದಶಮುಖಗಳಿಂದ ಈ ಮಾತು ಹೊರಟವು.

“ಮಾನವ ಕುಲವು ಒಂದೇ ಎಂದು ನಂಬಿ ಜೀವಾತ್ಮರಲ್ಲಿ ಭೇದ ವೆಣಿಸದೆ ಶುದ್ಧ ಹೃದಯದಿಂದಲೇ ಸೀತೆಯನ್ನು ತಂದಿದ್ದೇನೆ. ಮಂಡೋದರಿಯ ಆತ್ಮವನ್ನೂ ಸೀತೆಯ ಆತ್ಮವನ್ನೂ ಒಂದೇ ರೀತಿಯಿಂದ ಕಾಣುತ್ತೇನೆ. ಈ ಜಗತ್ತೇ ಮಾಯೆಯಾಗಿರಲು, ನಾನು ರಾಮನ ಮಡದಿಯನ್ನು ತಂದುದಕ್ಕಾಗಿ ಆತನು ವಿಷಾದಿಸಬೇಕಾಗಿಲ್ಲ. ಈ ಘಟನೆಯೂ ಒಂದು ಮಾಯೆ, ಪರಮಾತ್ಮನ ಸಂಕಲ್ಪ ಎಂದು ತಿಳಿದು ಸುಖವಾಗಿರಲು ಹೇಳು ನಿನ್ನೊಡಯನಿಗೆ. ನನ್ನಾತ್ಮವೂ ಅವನಾತ್ಮವೂ ಒಂದೇ ಎಂಬುದನ್ನು ನಾನು ಬಲ್ಲೆ. ಸುಂದರವಾದುದನ್ನು ಆರಾಧಿಸುವುದೇ ಸತ್ಯದ ಸಾಕ್ಷಾತ್ಕಾರದ ಮಾರ್ಗ. ಅದರಿಂದಲೇ ಶಿವನ ಸಾನ್ನಿಧ್ಯ ಸಾಧ್ಯ- ಇವೆಲ್ಲವೂ ನನಗೆ ವಿದಿತವೇ ಇವೆ. ಕಾರಣ ನೀನು ನೇರವಾಗಿ ಮರಳಿ ರಾಮಚಂದ್ರನಿಗೆ ಇವುಗಳನ್ನೆಲ್ಲ ವಿವರಿಸಿ ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮವನ್ನು ಉದ್ದಾರ ಮಾಡಿ ಕೊಳ್ಳಲು ಹೇಳು.”

ಚಕಾರ ಮಾರ್‍‌ ನುಡಿಯದೆ ಮಾರುತಿಯು ಮರಳಿ ಬಂದನು.

ಮರುದಿನವೇ ಲಂಕೆಗೆ ಸೇತು ಕಟ್ಟಲು ಸುರುವಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...