ಅಪ್ಪ

ಹೆದ್ದಾರಿ ಬದಿಯಲಿ ನನ್ನಪ್ಪ
ಸಮಾಧಿಯಾಗಿ ಕೂತಿದ್ದಾನೆ
ಮೇಲೆ ಹಸಿರಾಗಿ ಕಂಗೊಳಿಸುವ
ಮಾವಿನ ಮರ
ಒಳಹೊರಗೆಲ್ಲ ಚಿಲಿಪಿಲಿಸುವ
ಪಕ್ಷಿ ಸಂಕುಲ
ಪ್ರತಿಸಲದ ಬಸ್ ಪ್ರಯಾಣದಲಿ
ಕಿಟಕಿಯಿಂದಲೇ ನೋಡುತ್ತೇನೆ
ಮನದೊಳಗೆ ನಮಿಸುತ್ತೇನೆ
ಕಣ್ಣುಗಳು ಜಿನುಗುತ್ತವೆ
ಝರಿಯೇ ಕಾಲುತೊಳೆದು
ಬೆಳೆದು ನಿಂತ ಬೆಳೆ
ಚಾಮರ ಬೀಸಿ
ಪಕ್ಷಿಕಲರವದ ಗಂಟೆಯಲಿ
ನಿತ್ಯ ಪೂಜೆ ನನ್ನಪ್ಪಗೆ.

ನನ್ನಪ್ಪ ಜಿಪುಣ ಚಿನ್ನದ
ಬಳೆಸರ ಯಾಕೆ ಅನ್ನುತ್ತಿದ್ದ
ಓದಿಗೇನೂ ಬರ ಇರಲಿಲ್ಲ
ಸುಸಂಸ್ಕೃತ ಮನಸು
ಕರುಳು ಹೃದಯವಂತನೇನಲ್ಲ
ಕಠೋರ ಅಂದುಕೊಂಡದ್ದೂ
ಪಲ್ಟಿ ಆಯಿತು ನಾನು ಮದುವೆಯಾಗಿ
ಹೊರಟದಿನ, ವಿದೇಶಕ್ಕೆ ಹೊರಟದಿನ
ಅವನ ಗಂಟಲನರ

ಉಬ್ಬಿದ ಕಣ್ಣು ನೋಡಿ
ಅದೆಷ್ಟೋ ಬಿಕ್ಕಿದ್ದೆ, ನಾಲ್ಕುಮಾತನಾಡಿ
ದೂರ ದೇಶಕೆ ಕಳಿಸಿಹೋದ
ನನ್ನ ಅಪ್ಪ ಕೆಲವೇ ದಿನಗಳಲಿ
ಹೇಳದೆ ಕೇಳದೆ ತಾನೇ
ದೂರ ದೂರ ಹೋಗಿಬಿಟ್ಟ

ನಿನ್ನಪ್ಪ ಹೇಗಿದ್ದ? ಮಗನ ಮಾತಿಗೆ
ಹೊಳೆವ ನಕ್ಷತ್ರ
ಹಸಿರು ಮಾವಿನ ಮರ
ತೋರಿಸುತ್ತೇನೆ
ಒಮ್ಮೊಮ್ಮೆ ನೀನೇ ನನ್ನಪ್ಪ
ಎನ್ನುತ್ತೇನೆ.
*****

ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪು ಮಾಡ್ದೋರು ಯಾರವರೆ ತಪ್ಪೆ ಮಾಡ್ದೋರು ಎಲ್ಲವರೆ?
Next post ಎಲ್ಲಿ ಹೋದ ನಲ್ಲ?

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys