Home / ಕವನ / ಕವಿತೆ / ಮಹಾತ್ಮಾಗಾಂಧಿಗಾಗಿ

ಮಹಾತ್ಮಾಗಾಂಧಿಗಾಗಿ


ಸತ್ಯ ಪೂರ್ಣ ಜ್ಯೋತಿ ಬೀರುವ
ಬೆಳಕಿನಲಿ ಮು೦ದರಿಯುವ,
ನಿತ್ಯ-ನಿರ್ಮಲ ಯೋಗಿ, ಸತ್ಯಾಗ್ರಹಿ
‘ಮಹಾತ್ಮ’ಗೆ ವಂದನಂ


ತಾನು ನಡೆಯುವ ನಡತೆಯಿಂದಲೆ
ಸರಳ ಜೀವನ ಸಾರವ
ಮಾನವರಿಗೊರೆಯಿಸುವ ‘ಮೋಹನ-
ದಾಸ’ಗಿಂದೀ ವಂದನಂ


ತ್ಯಾಗಪೂರ್ವಕವಾದ ಯೋಗದಿ
ವಿಶ್ವ ಶಾಂತಿಯನೊದವಿಸಿ,
ಚಾಗದಲಿ ಭೋಗವನು ಕಂಡಿಹ
‘ಕರಮಚ೦ದ’ಗೆ ವಂದನಂ


ಶಾಶ್ವತ ಪ್ರೇಮಮಯ ಪಥದಲಿ
ಧರ್ಮವನು ಮುನ್ನಡೆಯಿಸಿ,
ವಿಶ್ವ ಸಮತೆಯ ಸಾರಿ ತೋರುವ
‘ಗಾಂಧಿ’ಗಾಗೀ ವಂದನಂ


ಶ್ರೀ ಮಹಾತ್ಮಾ ಗಾಂಧಿಯೀ ನವ
ಯುಗ ವಿಭೂತಿ ವಿರಾಗಿಯು!
ನೇಮ-ನಿಷ್ಟೆಯ, ಶಾಂತಿ-ದಾಂತಿಯ
ಸತ್ಯ-ಸತ್ವದ ಯೋಗಿಯು!!


ಇವನ ಬೋಧಾಮೃತವನೀಂಟುತ
ತಣಿದ ಮಾನವ ಮಂಡಲಿ
ಭುವನ ಮಾನಿತವಾದ ಸತ್ಯ-
ಪ್ರೇಮ ಕಾಂಕ್ಷಿಪುದೊಲವಿಲಿ.


ತನ್ನ ಮೋಹನ-ಅಮೃತಮಯ ವಾ-
ಣಿಯಲಿ ಜನರನು ಬೋಧಿಸಿ,
ಸನ್ನು ತವದಾಗಿದೆ. ರಾಷ್ಟ್ರದ
ಸೇವೆ ಮಾಡಿಪನೊಲಿಯಿಸಿ!


ಲೋಕ ಕಲ್ಯಾಣವ ಮಹತ್ವೇ-
ಚ್ಛೆಯಲಿ ಸತ್ಯಾಗ್ರಹವನು
ಸಕಲ ಮಾನವ ಮನದಿ ಬಿಂಬಿಸಿ,
ಉದ್ಧರಿಸಲುಜ್ಜುಗಿಪನು.


ಕರ್ಮಯೋಗಿಯ ಕಾರ್ಯದಲ್ಲಿ ಸಹ-
ಕರಿಸಿ ಸೇನೆಯನೆಸಗುವ!
ಧರ್‍ಮ ಮಾರ್ಗ ಧ್ವಜವ ಪ್ರೇಮಾ-
ಕಾಶದಲಿ ಮೇಲೆತ್ತುವ!!
*****
೧೯೩೪

ಮಹಾತ್ಮಾ ಗಾಂಧಿಯವನರು ಮಂಗಳೂರಿಗೆ ಬಂದಿದ್ದಾಗ ಬರೆದುದು.

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...