Home / ಕವನ / ಕವಿತೆ / ಭ್ರಮೆ

ಭ್ರಮೆ

ನೆತ್ತಿಗೆ ಹರಳೆಣ್ಣೆಯ ಹಬ್ಬವೆ?
ಅಮವಾಸೆಯ ಕಗ್ಗತ್ತಲು
ನಮಗೆ ನಾವೇ ಕಾಣಿಸಲಾರೆವು
ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ
ಅಡ್ಡಾಡದಿದ್ದರೂ ಎಡುವಿದಂತೆ
ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ
ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ
ಯಾರೂ ಮಾತನಾಡದಿದ್ದರೂ ಪಿಸುಗುಡುತ್ತಿದ್ದಂತೆ
ಹೂಬಳ್ಳಿಗಳು ಅಲುಗಾಡಿದರೂ ಭೂತವೇ ಬರುತ್ತಿದ್ದಂತೆ….
ಮಂಪರು ಪರೀಕ್ಷೆಗೆ ಒಳಪಟ್ಟಂತೆಯೋ ಏನೋ !

ಬಿಸಿಲು ಬೆತ್ತವೇ ಹಿಡಿದುಕೊಂಡು ಬೆನ್ನುಹತ್ತಿದೆಯೆ?
ನಾವು ನೀವು ಅವರುಗಳೆಲ್ಲಾ
ಸ್ಪಷ್ಟವಾಗಿ ಅವರವರಿಗೇ ಕಾಣಿಸುತ್ತಾರೆ
ರಾಜಕಾರಣಿ, ಸಮಾಜಸೇವಕ, ಸಾಹಿತಿ
ಉದ್ಯೋಗಪತಿ, ಜಾತಿಧರ್ಮಗಳ ಕಿಚಾಚಿಗಳು
ಯುದ್ಧ ಬಾಂಬು, ಬೆಂಕಿ, ಸಾವು ನೋವಿನ
ದುರಂತಗಳೆಲ್ಲರ ಬಿಸುಲ್ಗುದುರೆಯ ಓಟ ಓಟ
ಬಿಸಿಲೇ ಬಿಸಿಲಿಗೆ ಬೆವರಿ ಬೇಸತ್ತು
ತೆರೆದ ಕಣ್ಣು ತೆರೆದಂತೆಯೇ
ಬೆತ್ತ ಎಸೆದು ಚಿತ್ಕಾರ ಮಾಡದೆಯೇ
ಮೆಲ್ಲಗೆ ಹೃದಾಯಾಘಾತದನುಭವ ಪಡೆದಂತೆಯೋ ಏನೋ !

ಹಪಾಹಪಿ ರಾಕ್ಷಸನ ಅಟ್ಟಹಾಸದ ಮಾತೆ?
ಬೆಳಗಿನ ಬ್ರಾಹ್ಮಿ ಮುಹೋರ್ತ ಪ್ರಶಸ್ತ ಸಮಯ
ಮಂತ್ರ ತಂತ್ರ ಪೂಜೆ ಪುನಸ್ಕಾರಕೆ
ಗಬ್ಬು ಹೃದಯಿಗಳ ಸ್ವಾರ್ಥ ಬಯಕೆ
ಬೆಳ್ಳಿತಟ್ಟೆ, ತುಪ್ಪದ ಬತ್ತಿ ಧೂಪ ದೀಪ
ಸಹಸ್ರ ನಾಮಾವಳಿಗಳು
ಮುಂಜಾವಿಗೇಕೋ ಕಪ್ಪು ಛಾಯೆ
ನಕ್ಷತ್ರಗಳು ಜಾರಿಕೊಳ್ಳುತ್ತವೆ
ಹಿತವಾದ ಗಾಳಿ ಮಂಜು ತುಂಬಿದ ಹುಲ್ಲು
ಕಾಣಿಸದೆ ದೂರಗುಡ್ಡನೇರಬಯಸುವ
ವಿಕಲಾಂಗರ ನಸುಕಿನ ಕನಸಿನಂತೆಯೋ ಏನೋ !
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...