Home / ಕವನ / ಕವಿತೆ / ಭ್ರಮೆ

ಭ್ರಮೆ

ನೆತ್ತಿಗೆ ಹರಳೆಣ್ಣೆಯ ಹಬ್ಬವೆ?
ಅಮವಾಸೆಯ ಕಗ್ಗತ್ತಲು
ನಮಗೆ ನಾವೇ ಕಾಣಿಸಲಾರೆವು
ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ
ಅಡ್ಡಾಡದಿದ್ದರೂ ಎಡುವಿದಂತೆ
ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ
ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ
ಯಾರೂ ಮಾತನಾಡದಿದ್ದರೂ ಪಿಸುಗುಡುತ್ತಿದ್ದಂತೆ
ಹೂಬಳ್ಳಿಗಳು ಅಲುಗಾಡಿದರೂ ಭೂತವೇ ಬರುತ್ತಿದ್ದಂತೆ….
ಮಂಪರು ಪರೀಕ್ಷೆಗೆ ಒಳಪಟ್ಟಂತೆಯೋ ಏನೋ !

ಬಿಸಿಲು ಬೆತ್ತವೇ ಹಿಡಿದುಕೊಂಡು ಬೆನ್ನುಹತ್ತಿದೆಯೆ?
ನಾವು ನೀವು ಅವರುಗಳೆಲ್ಲಾ
ಸ್ಪಷ್ಟವಾಗಿ ಅವರವರಿಗೇ ಕಾಣಿಸುತ್ತಾರೆ
ರಾಜಕಾರಣಿ, ಸಮಾಜಸೇವಕ, ಸಾಹಿತಿ
ಉದ್ಯೋಗಪತಿ, ಜಾತಿಧರ್ಮಗಳ ಕಿಚಾಚಿಗಳು
ಯುದ್ಧ ಬಾಂಬು, ಬೆಂಕಿ, ಸಾವು ನೋವಿನ
ದುರಂತಗಳೆಲ್ಲರ ಬಿಸುಲ್ಗುದುರೆಯ ಓಟ ಓಟ
ಬಿಸಿಲೇ ಬಿಸಿಲಿಗೆ ಬೆವರಿ ಬೇಸತ್ತು
ತೆರೆದ ಕಣ್ಣು ತೆರೆದಂತೆಯೇ
ಬೆತ್ತ ಎಸೆದು ಚಿತ್ಕಾರ ಮಾಡದೆಯೇ
ಮೆಲ್ಲಗೆ ಹೃದಾಯಾಘಾತದನುಭವ ಪಡೆದಂತೆಯೋ ಏನೋ !

ಹಪಾಹಪಿ ರಾಕ್ಷಸನ ಅಟ್ಟಹಾಸದ ಮಾತೆ?
ಬೆಳಗಿನ ಬ್ರಾಹ್ಮಿ ಮುಹೋರ್ತ ಪ್ರಶಸ್ತ ಸಮಯ
ಮಂತ್ರ ತಂತ್ರ ಪೂಜೆ ಪುನಸ್ಕಾರಕೆ
ಗಬ್ಬು ಹೃದಯಿಗಳ ಸ್ವಾರ್ಥ ಬಯಕೆ
ಬೆಳ್ಳಿತಟ್ಟೆ, ತುಪ್ಪದ ಬತ್ತಿ ಧೂಪ ದೀಪ
ಸಹಸ್ರ ನಾಮಾವಳಿಗಳು
ಮುಂಜಾವಿಗೇಕೋ ಕಪ್ಪು ಛಾಯೆ
ನಕ್ಷತ್ರಗಳು ಜಾರಿಕೊಳ್ಳುತ್ತವೆ
ಹಿತವಾದ ಗಾಳಿ ಮಂಜು ತುಂಬಿದ ಹುಲ್ಲು
ಕಾಣಿಸದೆ ದೂರಗುಡ್ಡನೇರಬಯಸುವ
ವಿಕಲಾಂಗರ ನಸುಕಿನ ಕನಸಿನಂತೆಯೋ ಏನೋ !
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...